ಅರ್ಕಾವತಿ ನದಿ ಪಾತ್ರದಲ್ಲಿ ಇರುವ ರೈತರು, ನದಿ ದಡಕ್ಕೆ ಹೋಗಬಾರದು. ಜನ-ಜಾನುವಾರು ನದಿ ಹತ್ತಿರಕ್ಕೆ ತರಬಾರದು. ಯಾವುದೇ ಕ್ಷಣದಲ್ಲಿ ಎಲ್ಲ ಗೇಟ್ ತೆರೆದು ನೀರು ಒಮ್ಮೆಲೆ ಹೊರಬಿಡಲಾಗುವುದು.
ಒಳಹರಿವಿನ ಪ್ರಮಾಣದ ತಕ್ಕಂತೆ ಹೊರ ಹರಿವಿನ ಪ್ರಮಾಣ ಹೆಚ್ಚಾಗಲಿದೆ. ನದಿ ಪಾತ್ರದ ಜನರಿಗೆ ಸಮಸ್ಯೆ ಉಂಟಾಗಲಿದೆ. ಮುಂಜಾಗ್ರತ ಕ್ರಮವಾಗಿ ಸ್ಥಳಾಂತರವಾಗುವಂತೆ ಅಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.