ಬ್ರಹ್ಮಾವರ: ಇಂಧನ ಇಲಾಖೆ, ಮೆಸ್ಕಾಂ ಸಹಯೋಗದಲ್ಲಿ ವಿದ್ಯುತ್ ಸುರಕ್ಷತಾ ಸಪ್ತಾಹ ಶನಿವಾರ ಆಚರಿಸಲಾಯಿತು.
ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಮೆಸ್ಕಾಂ ಸಿಬ್ಬಂದಿ, ಬ್ರಹ್ಮಾವರ ಮೆಸ್ಕಾಂ ಕಚೇರಿಯಿಂದ ಹೊರಟು ಬಸ್ ನಿಲ್ದಾಣ, ರಥಬೀದಿ ಮೂಲಕ ಜಾಗೃತಿ ಜಾಥಾ ನಡೆಸಿದರು.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಪೂಜಾರಿ ಮಾತನಾಡಿ, ಸಾರ್ವಜನಿಕರು, ಇಲಾಖಾ ಸಿಬ್ಬಂದಿ ಅತಿ ಆತ್ಮವಿಸ್ವಾಸದಿಂದ ಜೀವಕ್ಕೆ ಅಪಾಯ ತಂದುಕೊಳ್ಳುವ ವಿದ್ಯಾಮಾನ ಗ್ರಾಮೀಣ, ನಗರ ಭಾಗಗಳಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬ್ರಹ್ಮಾವರದಲ್ಲಿ ಎಲ್ಲಾ ಶಾಲಾ–ಕಾಲೇಜು ಕಚೇರಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ನಗರದ ಅಂಗಡಿ, ಮನೆ, ಸಾರ್ವಜನಿಕರಿಗೆ ಜಾಗೃತಿ ಕರಪತ್ರ ಹಂಚಲಾಯಿತು. ಸಹಾಯಕ ಎಂಜಿನಿಯರ್ ಸುದರ್ಶನ್, ಸಹಾಯಕ ಲೆಕ್ಕಾಧಿಕಾರಿ ಹೇಮಲತಾ, ಮೆಸ್ಕಾಂನ ವಿವಿಧ ಶಾಖೆಗಳ ಕಚೇರಿ ಸಿಬ್ಬಂದಿ, ಲೈನ್ಮ್ಯಾನ್ ಜಾಥಾದಲ್ಲಿ ಪಾಲ್ಗೊಂಡರು.