ಪ್ರಕಾಶ್ ಸುವರ್ಣ ಕಟಪಾಡಿ ಹಾಗೂ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪೀಂಪಿರಿ ಊದುವ, ಹಲಸಿನ ಹಣ್ಣಿನ ಬೀಜದ ಸಿಪ್ಪೆ ತೆಗೆಯುವ, ಮದರಂಗಿ, ಔಷಧದ ಎಲೆಯ ಹೆಸರು ಬರೆಯುವ, ತೆಂಗಿನ ಗರಿಯಲ್ಲಿ ಆಟಿಕೆ ತಯಾರಿಸುವ, ಕೇಶಾಲಂಕಾರ, ಮುಂಡಾಸು ಕಟ್ಟುವ, ಹೂ ಕಟ್ಟುವ, ಜಲ್ಲಿ ಬಿಡಿಸುವ, ಬತ್ತಿ ಕಟ್ಟುವ, ಹೂ ಜೋಡಣೆ ಮಾಡುವ ಸ್ಪರ್ಧೆಗಳು ಮತ್ತು ತುಳು ರಸಪ್ರಶ್ನೆ ಮತ್ತು ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆಗಳು ನಡೆದವು.