ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹9 ಲಕ್ಷ ದರೋಡೆ: ದೂರು ದಾಖಲು

Published : 5 ಆಗಸ್ಟ್ 2024, 16:26 IST
Last Updated : 5 ಆಗಸ್ಟ್ 2024, 16:26 IST
ಫಾಲೋ ಮಾಡಿ
Comments

ಶಿರಸಿ: ಕೇರಳ ಮೂಲದ ಇಬ್ಬರು ವ್ಯಕ್ತಿಗಳಿಗೆ ಚಿನ್ನದ ಗಟ್ಟಿ ನೀಡುತ್ತೇವೆ ಎಂದು ನಂಬಿಸಿ, ಖರೀದಿಗೆ ತಂದ ₹9 ಲಕ್ಷ ದರೋಡೆ ಮಾಡಿದ ಏಳು ಜನರ ವಿರುದ್ಧ ಇಲ್ಲಿನ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಕೇರಳ ಮೂಲದ ಸಚಿನ್ ಗಾಯಕವಾಡ್ ದೂರು ದಾಖಲಿಸಿದ್ದಾರೆ. ದೂರುದಾರ ಹಾಗೂ ಆತನ ಸ್ನೇಹಿತ ಮಹಮ್ಮದ್ ಆಸೀಫ್ ಎಂಬಾತ ಶಿರಸಿಗೆ ಬಂದಾಗ, ಆರೋಪಿಯು ಅಂಗವಿಕಲ ವ್ಯಕ್ತಿಯೊಬ್ಬ ಎರಡು ಬಂಗಾರದ ಸ್ಯಾಂಪಲ್ ತುಣುಕುಗಳನ್ನು ತೋರಿಸಿ ಖರೀದಿಸುವುದಾದರೆ ತಾಲ್ಲೂಕಿನ ಮಳಲಗಾಂವ್‌ಗೆ ಬಂದು ಹಣ ನೀಡಲು ತಿಳಿಸಿದ್ದ. ಅದರಂತೆ ಹಣ ತಂದಾಗ ಅಂಗವಿಕಲ ವ್ಯಕ್ತಿ ಸೇರಿ ಏಳು ಜನರು ನಮ್ಮನ್ನು ಯಾಮರಿಸಿ ಹಣ ಪಡೆದಿದ್ದಲ್ಲದೇ ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT