‘ಈ ಹಿಂದೆ ವಾಹಿನಿಯಲ್ಲಿ ‘ಗುರು ರಾಘವೇಂದ್ರ ವೈಭವ’, ‘ಹರ ಹರ ಮಹಾದೇವ’, ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಹಾಗೂ ‘ಎಡೆಯೂರು ಶ್ರೀ ಸಿದ್ದಲಿಂಗೇಶ್ವರ’ದಂತಹ ಧಾರಾವಾಹಿಗಳು ಪ್ರಸಾರಗೊಂಡಿದ್ದವು. ಇದೀಗ ಪೌರಾಣಿಕ ಕಥಾ ಹೊಂದಿರುವ ಮತ್ತೊಂದು ಧಾರಾವಾಹಿ ಪ್ರಾರಂಭಗೊಂಡಿದೆ. ಪುರಾಣಗಳ ಪ್ರಕಾರ ಸತಿಯು ಅತ್ಯಂತ ಸುಂದರವಾಗಿರುತ್ತಾಳೆ. ತಪಸ್ವಿ ಶಿವನಿಗೆ ಮನಸೋಲುವ ಸತಿ, ಮುಂದೆ ಪಾರ್ವತಿಯಾಗಿ ಹೇಗೆ ಮರುಜನ್ಮ ತಾಳುತ್ತಾಳೆ?, ಮಹಾಕಾಳಿಯ ರುದ್ರಾವತಾರವನ್ನು ಏಕೆ ಧರಿಸುತ್ತಾಳೆ? ಎಂಬುದರ ಜೊತೆಗೆ ಜಗನ್ಮಾತೆಯ ಮಹಿಮೆಯನ್ನು, ಪವಾಡಗಳನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗುತ್ತದೆ’ ಎಂದು ವಾಹಿನಿ ತಿಳಿಸಿದೆ.