ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ | ‘ರಾಷ್ಟ್ರೀಯ ವಿಪತ್ತು’ ಮಾನದಂಡವೇ ಇಲ್ಲ

Published : 4 ಆಗಸ್ಟ್ 2024, 23:34 IST
Last Updated : 4 ಆಗಸ್ಟ್ 2024, 23:34 IST
ಫಾಲೋ ಮಾಡಿ
Comments
ದೇಶದ ಯಾವುದೇ ಭಾಗದಲ್ಲಿ ತೀವ್ರ ನೆರೆ, ಬರ ಇತ್ಯಾದಿ ಉಂಟಾದಾಗಲೂ ಅದನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು ಎನ್ನುವ ಬೇಡಿಕೆ ಬರುತ್ತದೆ. ವಿಚಿತ್ರ ಎಂದರೆ, ಯಾವುದೇ ಒಂದು ವಿಕೋಪವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವ ಬಗ್ಗೆ ಕೇಂದ್ರದ ನಿಯಮಗಳಲ್ಲಿ ಮಾನದಂಡಗಳೇ ಇಲ್ಲ. ಆದರೂ ಈ ಕುರಿತ ಬೇಡಿಕೆ ಈಗಲೂ ನಿರಂತರವಾಗಿ ಒಂದಿಲ್ಲೊಂದು ರಾಜ್ಯದಿಂದ ಕೇಳಿಬರುತ್ತಲೇ ಇದೆ. ಕೇಂದ್ರ ಸರ್ಕಾರವು ಕಾಲದಿಂದ ಕಾಲಕ್ಕೆ ವಿಕೋಪಗಳ ತೀವ್ರತೆಯ ಆಧಾರದ ಮೇಲೆ, ತನ್ನ ವಿವೇಚನೆಯ ಮೇರೆಗೆ ಹಣಕಾಸಿನ ನೆರವು ನೀಡುತ್ತಾ ಬರುತ್ತಿದೆ...
ವಿಪತ್ತು ಎಂದರೆ...
2005ರ ವಿಪತ್ತು ನಿರ್ವಹಣಾ ಕಾಯ್ದೆಯು ವಿಪತ್ತನ್ನು ಈ ರೀತಿ ವ್ಯಾಖ್ಯಾನಿಸುತ್ತದೆ: ‘ಯಾವುದೇ ಪ್ರದೇಶದಲ್ಲಿ ನೈಸರ್ಗಿಕವಾಗಿ ಅಥವಾ ಮಾನವ ನಿರ್ಮಿತವಾದ ಅಥವಾ ಆಕಸ್ಮಿಕ ಇಲ್ಲವೇ ನಿರ್ಲಕ್ಷ್ಯದಿಂದಾಗಿ ಸಂಭವಿಸುವ, ಗಣನೀಯ ಪ್ರಮಾಣದ ಜೀವ ಹಾನಿ ಅಥವಾ ಮನುಷ್ಯರಿಗೆ ಸಂಕಟ ನೀಡುವ ಅಥವಾ ಆಸ್ತಿಗಳನ್ನು ಧ್ವಂಸಗೊಳಿಸುವ ಅಥವಾ ಅವುಗಳಿಗೆ ಹಾನಿ ಮಾಡುವ ಅಥವಾ ಪರಿಸರಕ್ಕೆ ಧಕ್ಕೆ ಉಂಟು ಮಾಡುವ ಮಹಾವಿನಾಶ, ದುರಂತ, ಆ‍ಪತ್ತು ಅಥವಾ ಘೋರವಾದಂತಹ ದುರ್ಘಟನೆ’. ಬಾಧಿತ ಪ್ರದೇಶದಲ್ಲಿ ನೆಲೆಸಿರುವ ಸಮುದಾಯಕ್ಕೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದಷ್ಟು ತೀವ್ರತೆಯ ಹಾನಿಯಾಗಿದ್ದರೆ ಅದನ್ನು ‘ವಿಪತ್ತು’ ಎಂದು ಕಾಯ್ದೆ ಪರಿಗಣಿಸುತ್ತದೆ.
ಕಾನೂನು ತಿದ್ದುಪಡಿಗೆ ಮುಂದಾದ ಕೇಂದ್ರ
ವಿಪತ್ತು ನಿರ್ವಹಣಾ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಈಗಿರುವ ಕಾಯ್ದೆಯನ್ನೇ ಬಲಪಡಿಸುವ ಉದ್ದೇಶದಿಂದ ಮಸೂದೆ ಮಂಡಿಸಲಾಗಿದೆ ಎಂದು ಸರ್ಕಾರ ಹೇಳಿದೆ. ವಿಪತ್ತು ನಿರ್ವಹಣಾ ಯೋಜನೆಗಳನ್ನು ರೂಪಿಸಲು ಮತ್ತು ಅನುಷ್ಠಾನದ ಮೇಲ್ವಿಚಾರಣೆ ಮಾಡಲು ಸಾಂಸ್ಥಿಕ ವ್ಯವಸ್ಥೆಯ ಅಗತ್ಯವಿದೆ. ಇದಕ್ಕಾಗಿ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕೆಲವು ಪ್ರಾಧಿಕಾರಗಳು, ಸಮಿತಿಗಳನ್ನು ರಚಿಸಬೇಕಾಗಿದೆ. ಈ ಉದ್ದೇಶಕ್ಕೆ ತಿದ್ದುಪಡಿ ಮಸೂದೆಯನ್ನು ರೂಪಿಸಲಾಗಿದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ. ಈ ತಿದ್ದುಪಡಿಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದರ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT