ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ವೃತ್ತಿ ಜೀವನದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ..
Published 5 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿಕ್ಷೇತ್ರದ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಹಿಡಿತಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗುವಿರಿ. ಕೆಲಸದಲ್ಲಿ ತೊಡಕು ತಾಪತ್ರಯವನ್ನುಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು.
ವೃಷಭ
ಗುರುವಿನ ಮಾರ್ಗದರ್ಶನದಂತೆ ನಡೆಯುವ ಈ ದಿನದ ನಿಮ್ಮ ಕೆಲಸದಲ್ಲಿ ಸರ್ವತೋಮುಖವಾದ ಅಭಿವೃದ್ಧಿಯನ್ನು ಹೊಂದುವಿರಿ. ಆದಾಯ ಮತ್ತು ತೆರಿಗೆ ಅಧಿಕಾರಿಗಳಿಗೆ ದಿಢೀರ್ ವರ್ಗಾವಣೆಯಾಗುವ ಸಂಭವವಿದೆ.
ಮಿಥುನ
ಕಲಾವಿದರಿಗೆ ಹಾಗೂ ನಟ ನಟಿಯರಿಗೆ ಉತ್ತಮ ಅವಕಾಶಗಳು ಒದಗಿ ಬರುವುದು. ಔಷಧಿಗಳು ಅಡ್ಡ ಪರಿಣಾಮ ಬೀರುವಂತಾಗಬಹುದು. ಆದ್ದರಿಂದಲೇ ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸಬೇಡಿ.
ಕರ್ಕಾಟಕ
ಕೊಟ್ಟಂತಹ ಮಾತನ್ನು ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ಪದವಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ.
ಸಿಂಹ
ಮುಂದಿನ ಕೆಲಸ ಹಾಗೂ ವೃತ್ತಿ ಜೀವನದ ಬಗ್ಗೆ ಗಂಭೀರ ಆಲೋಚನೆ ಮಾಡುವುದು ಬಹಳ ಮುಖ್ಯವಾಗಿದೆ. ಗೃಹ ಕೃತ್ಯದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಅತಿಯಾದ ಆಲಸ್ಯ ನಿಮ್ಮನ್ನು ಕಾಡಲಿದೆ.
ಕನ್ಯಾ
ತುಂಬಾ ಆತ್ಮೀಯರಂತೆ ಮುಖವಾಡ ಹೊಂದಿರುವ ನಿಮ್ಮ ಅಕ್ಕ-ಪಕ್ಕದ ಹಿತಶತ್ರುಗಳ ಬಣ್ಣ ನಿಮ್ಮೆದುರು ಬಯಲಾಗಲಿದೆ. ನಿಮ್ಮ ಸೋಲನ್ನು ಬಯಸುವವರ ಸಂಖ್ಯೆಯು ಇಳಿಮುಖವನ್ನು ಹೊಂದುವುದು.
ತುಲಾ
ಕೌಟುಂಬಿಕ ಸಮಸ್ಯೆಗಳಿಗೆ ಎದುರುತ್ತರ ನೀಡದಿರುವುದು ಅತ್ಯುನ್ನತ ಪರಿಹಾರವೆಂದು ಅನುಭವಕ್ಕೆ ಬರುತ್ತದೆ. ರಿಯಾಯಿತಿ ಮಾರಾಟಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಆರೋಗ್ಯದ ಬಗ್ಗೆ ಗಮನ ಕೊಡಿ.
ವೃಶ್ಚಿಕ
ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆಗಳನ್ನು ರಾಜಿ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳಬಹುದು. ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸದ ಅಸ್ಥಿರತೆ ಕಾಡಬಹುದು.
ಧನು
ಕೆಲಸ-ಕಾರ್ಯವನ್ನು ಜಾಣ್ಮೆಯಿಂದ ಸೂಕ್ಷ್ಮವಾಗಿ ನಿರ್ವಹಿಸುವಂತಹಾ ಬುದ್ಧಿವಂತಿಕೆಯನ್ನು ತೋರುವಿರಿ. ಶ್ರೀನಿವಾಸನ ಸೇವೆಯಿಂದ ವ್ಯಾಪಾರದಲ್ಲಿ ಉತ್ತಮ ಲಾಭವಿರುವುದು. ಶೀತಬಾಧೆ ಎದುರಾಗಬಹುದು.
ಮಕರ
ಪುಣ್ಯಸಂಪಾದನೆಗಾಗಿ ತಾಯಿಯೊಂದಿಗೆ ತೀರ್ಥಯಾತ್ರೆ ಕೈಗೊಳ್ಳುವ ನಿಮ್ಮ ಆಸೆ ಈಡೇರುವ ಲಕ್ಷಣಗಳು ಕಂಡುಬರುವುದು. ಅಭಿವೃದ್ಧಿಗೆ ಬೇಕಾದ ಅದ್ಭುತ ಅವಕಾಶವು ದೇವರ ಆಶೀರ್ವಾದದಿಂದ ನಿಮ್ಮ ಪಾಲಿಗೆ ಸಿಗಲಿದೆ.
ಕುಂಭ
ನಿಮ್ಮ ಫಲಕಾರಿ ಯೋಚನಾಲಹರಿಗಳನ್ನು ಕಂಡ ವ್ಯವಹಾರದ ಪಾಲುದಾರರು ನಿಮ್ಮ ಮಾತಿನಂತೆಯೇ ನಡೆಯುವರು. ಆರಕ್ಷಕ ವರ್ಗದವರಿಗೆ ಅಥವಾ ರಕ್ಷಣಾ ಕಾರ್ಮಿಕರಿಗೆ ರಾತ್ರಿ ಪಾಳಿ ಪ್ರಾರಂಭವಾಗಬಹುದು.
ಮೀನ
ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ಬಾಬ್ತು ಜಾಗ್ರತೆ ಇರಲಿ ಮತ್ತು ಆರ್ಥಿಕ ಸ್ಥಿತಿಯು ಕೊಂಚ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಮರೆಯಲಾಗದ ಕಹಿ ಘಟನೆಯೊಂದು ನೆಡೆಯಬಹುದು.
ADVERTISEMENT
ADVERTISEMENT