ಮಂಗಳವಾರ, 3 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಕೌಟುಂಬಿಕ ವಿಷಯಗಳತ್ತ ಗಮನ ಹರಿಸಿ
Published 18 ಜುಲೈ 2024, 22:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೌಟುಂಬಿಕ ವಿಷಯಗಳತ್ತ, ಅದರಲ್ಲೂ ಮಡದಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನಹರಿಸಿ. ವೃತ್ತಿಪರ ಸಾಧನೆಗಳಿಂದಾಗಿ ಸೂಕ್ತ ಸ್ಥಾನಮಾನ ತಾನಾಗಿಯೇ ಒದಗಿ ಬರಲಿದೆ.
ವೃಷಭ
ಮಾನಸಿಕವಾಗಿ ಕುಗ್ಗದೇ ಧೈರ್ಯದಿಂದ ಇರುವುದು ಮೂಲಮಂತ್ರವಾಗಿರಲಿ. ನೂತನ ವಾಹನ ಕೊಳ್ಳುವ ಆಲೋಚನೆಗಳು ಎದುರಾಗುವುದು. ಸ್ಥಳ ಬದಲಾದ ಕಾರಣ ನೀರಿನಿಂದ ಸೋಂಕು ಉಂಟಾಗಬಹುದು.
ಮಿಥುನ
ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸೂಕ್ತ ರೀತಿಯಲ್ಲಿ ಅವಕಾಶ ಸಿಗುವುದು. ಸಣ್ಣ ಕೈಗಾರಿಕೋದ್ಯಮದವರಿಗೆ ಸಹಕಾರ ದೊರೆಯಲಿದೆ. ಪವಿತ್ರ ವಸ್ತುಗಳನ್ನು ಗೌರವದಿಂದ ಕಾಣಿ.
ಕರ್ಕಾಟಕ
ಸಹೋದರರಲ್ಲಿನ ಕೋರ್ಟು ವ್ಯವಹಾರಗಳನ್ನು ರಾಜಿ ಅಥವಾ ಸಂಧಾನ ಮೂಲಕ ಬಗೆ ಹರಿಸಿಕೊಳ್ಳುವ ಪ್ರಯತ್ನ ಮಾಡಿ. ಒಂದು ಕೆಲಸವನ್ನು ಆಸಕ್ತಿಯಿಂದ ನಿರ್ವಹಿಸಿ.
ಸಿಂಹ
ಕೆಲಸಗಳನ್ನು ಇತರರು ಅತ್ಯಂತ ಅಚ್ಚುಕಟ್ಟಾಗಿ ಮಾಡುವುದರಿಂದಾಗಿ ಅವಲಂಬನೆ ಕಡಿಮೆಯಾಗುವುದು. ಬ್ಯಾಂಕಿನ ಸಾಲಗಳು ತೀರಿ ಮನೆಯಲ್ಲಿ ನೆಮ್ಮದಿಯ ಪರಿಸರ ಮೂಡಲಿದೆ.
ಕನ್ಯಾ
ಕಾರ್ಯರಂಗದಲ್ಲಿ ಮುನ್ನಡೆಗೆ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಇರುತ್ತದೆ. ಯೋಚಿಸಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಸರ್ಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ ಸಂಭವವಿದೆ.
ತುಲಾ
ಸಹೋದರನಲ್ಲಿ ಮತ್ತು ನೆರೆಹೊರೆಯವರೊಂದಿಗೆ ಸೌಹಾರ್ದದಿಂದ ವರ್ತಿಸುವುದರಿಂದ ಸಂಬಂಧ ಉತ್ತಮಗೊಳ್ಳುವುದು. ಮಗನ ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡು ಮನೆಯವರಿಗೆ ಸಂತಸ.
ವೃಶ್ಚಿಕ
ಹೊಸ ವೃತ್ತಿಯ ವಿಚಾರವಾಗಿ ಉತ್ತಮ ಅವಕಾಶಗಳು ಬರಲಿವೆ. ಅದನ್ನು ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ. ಚಿನ್ನ ಮೊದಲಾದ ದುಬಾರಿ ಲೋಹಗಳಿಗೆ ಹಣ ವಿನಿಯೋಗ ಮಾಡುವಿರಿ.
ಧನು
ಕೆಲಸಗಳು ನಿಧಾನಗತಿಯಲ್ಲಿ ಸಾಗುವುದಕ್ಕೆ ಮನಸ್ಸಿಗೆ ಬೇಸರ ಉಂಟಾಗುವುದು. ಸುತ್ತಮುತ್ತಲಿನ ವಾತಾವರಣದಲ್ಲಿನ ಬದಲಾವಣೆಯ ಲಕ್ಷಣಗಳು ಕಣ್ಣಿಗೆ ಬೀಳಲಿದೆ. ಸಂತೋಷದಿಂದ ದಿನ ಕಳೆಯುವಿರಿ.
ಮಕರ
ಹಣಕಾಸಿನ ವ್ಯವಹಾರ ನಡೆಸುವವರು ತಮ್ಮ ನೂತನ ಯೋಜನೆಗಳನ್ನು ಇನ್ನೂ ಕೆಲವು ಕಡೆಯಲ್ಲಿ ವಿಸ್ತರಿಸಬಹುದು. ಗೆಳೆತನಕ್ಕೆ ಸಂಬಂಧಿಸಿದ ಒಂದು ಗುಪ್ತವಾದ ವಿಚಾರವು ಸೋರಿಕೆಯಾಗಬಹುದು.
ಕುಂಭ
ವಿದ್ಯಾರ್ಥಿಗಳಿಗೆ ಓದು ಅಥವಾ ಉದ್ಯೋಗದ ಆಯ್ಕೆ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ಸಹನಾಶೀಲರಾಗಿ ವರ್ತಿಸಿದಲ್ಲಿ ಪ್ರಯತ್ನಬಲಕ್ಕೆ ಸರಿಯಾದಂಥ ಯಶಸ್ಸು ಸಿಗುತ್ತದೆ.
ಮೀನ
ಅಧಿಕಾರಿಗಳ ಭೇಟಿಯಿಂದ ಕೆಲಸ ಕಾರ್ಯಗಳು ಏರು-ಪೇರಾಗುವುದು. ಹೊಸ ಬದುಕನ್ನು ಆರಂಭಿಸಲು ಅವಕಾಶದ ಬಾಗಿಲು ತೆರೆದಿದೆ. ಆತಂಕವು ದೂರವಾಗುತ್ತದೆ.