ಭಾನುವಾರ, 20 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯ ಉದ್ಯಮಿಗಳಿಗೆ ಲಾಭ ದೊರೆಯುವುದು
Published 20 ಅಕ್ಟೋಬರ್ 2024, 1:13 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತರಕಾರಿ ವ್ಯಾಪಾರಿಗಳು ತಾಳ್ಮೆಯಿಂದ ವರ್ತಿಸಿದಲ್ಲಿ ವ್ಯವಹಾರ ಸುಗಮವಾಗಿ ನಡೆಯಲಿದೆ. ಕೆಲಸದ ವೇಳೆ ತಂಡದ ನಾಯಕತ್ವ ವಸುವುದು ಅಗತ್ಯ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ವೃಷಭ
ಮನೆ ನಿರ್ಮಾಣದ ಕೆಲಸದಲ್ಲಿರುವ ಅಡೆತಡೆಗಳು ಸಹೋದರ ವರ್ಗದವರ ನೆರವಿನಿಂದ ಪರಿಹಾರವಾಗಲಿವೆ. ವಿದೇಶದಲ್ಲಿ ಉದ್ಯೋಗ ಪಡೆಯಲು ನೀವು ಮಾಡಿದ ಪ್ರಯತ್ನ ಫಲಿಸಲಿದೆ.
ಮಿಥುನ
ಸ್ವಂತ ಉದ್ಯೋಗ ಮಾಡುವವರು ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸುವುದು ಉತ್ತಮ. ಉದ್ಯಮದಲ್ಲಿ ಸ್ವಲ್ಪ ತಡವಾಗಿಯಾದರೂ, ಲಾಭ ದೊರೆಯುವುದರಿಂದ ಸಂತಸವಾಗಲಿದೆ.
ಕರ್ಕಾಟಕ
ಸಾಮರಸ್ಯದಿಂದ ಕೂಡಿದ ನಿಮ್ಮ ಕುಟುಂಬದ ಮೇಲೆ ಹಿತೈಷಿ ಗಳಂತಿದ್ದವರೇ ಅಸೂಯೆ ಪಡಲಿದ್ದಾರೆ. ಏಕಕಾಲದಲ್ಲಿ ಹಲವು ಜವಾಬ್ದಾರಿ ನಿಭಾಯಿಸುವ ಬದಲು, ಒಂದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿ.
ಸಿಂಹ
ಸರ್ಕಾರಿ ಉದ್ಯೋಗ ಪಡೆಯಲು ಪರಿಪೂರ್ಣ ಪ್ರಯತ್ನ ಹಾಕುವುದು ಅಗತ್ಯ. ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ದಿನ ದೊರಕುವ ಮಾಹಿತಿಯಿಂದಾಗಿ ಅನುಕೂಲವುಂಟಾಗುವುದು.‌
ಕನ್ಯಾ
ಬದಲಾವಣೆಗಳಿಗೆ ಸುಲಭವಾಗಿ ಹೊಂದುಕೊಳ್ಳಲು ಆಗದಿರಬಹುದು. ಆಲೋಚನೆಗಳು ಹೊಸತನದಿಂದ ಕೂಡಿರಲಿವೆ. ಕೊಟ್ಟ ಮಾತು ಉಳಿಸಿಕೊಳ್ಳುವತ್ತ ಪ್ರಾಮಾಣಿಕವಾಗಿ ಪ್ರಯತ್ನಿಸಿ.
ತುಲಾ
ಪರರಿಗೆ ಸಹಾಯ ಮಾಡುವಾಗ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ವ್ಯವಹರಿಸಿ. ಪ್ರಯತ್ನಗಳು ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದು ಅರಿವಾಗಲಿದೆ. ಸಹಕಾರ ಸಂಘದ ಸಹಾಯ ದೊರಕಬಹುದು.
ವೃಶ್ಚಿಕ
ಭಾವನೆಗಳನ್ನು ಅರ್ಥೈಸಿಕೊಂಡು, ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ವ್ಯಕ್ತಿಗಳ ಪರಿಚಯವಾಗಲಿದೆ. ಜೀವನದ ಅಭಿವೃದ್ಧಿಗೆ ಬೇಕಾದ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ.
ಧನು
ತಂದೆ–ತಾಯಿ, ಗುರು–ಹಿರಿಯರ ಹಿತವಚನಗಳನ್ನು ಕೇಳುವುದು ಉತ್ತಮ. ದೇಹದ ಉಷ್ಣಾಂಶ ಹೆಚ್ಚಳಗೊಂಡು, ಆರೋಗ್ಯದಲ್ಲಿ ಏರುಪೇರಾಗ ಬಹುದು. ನೈಜ ಗೆಳೆಯ ಯಾರೆಂದು ಅರಿವಾಗಲಿದೆ.
ಮಕರ
ಕಷ್ಟದ ದಿನಗಳನ್ನು ಎದುರಿಸುತ್ತಿರುವ ನೀವು, ಸ್ವಲ್ಪಮಟ್ಟಿಗೆ ಚೇತರಿಕೆಯನ್ನು ಕಾಣುವಿರಿ. ಕುಟುಂಬದಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವಿರಿ. ದಂತ ವೈದ್ಯರಿಗೆ ಶುಭ ದಿನ.
ಕುಂಭ
ಜವಾಬ್ದಾರಿಯನ್ನು ಹೊರುವ ಮೊದಲು ಅದರ ಬಗೆಗಿನ ಸಾಮಾನ್ಯ ಜ್ಞಾನ, ಲಾಭ- ನಷ್ಟ, ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಹೆಚ್ಚಿನ ಗಮನವಿರಲಿ. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ.
ಮೀನ
ಒರಟು ವ್ಯಕ್ತಿತ್ವ, ಮಾತುಗಳಿಂದ ಪತ್ನಿ, ಮಕ್ಕಳಿಗೆ ನೋವಾಗಬಹುದು. ಗುರಿ ಮುಟ್ಟುವ ವಿಚಾರದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕುವುದು ಅತ್ಯಗತ್ಯ. ಆಪಾದನೆಗಳು ಬರುವ ಸಾಧ್ಯತೆಗಳಿವೆ.
ADVERTISEMENT
ADVERTISEMENT