ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸಾಕು ಪ್ರಾಣಿಗಳ ಜೊತೆ ಸಂತಸದ ಸಮಯವನ್ನು ಕಳೆಯುವಿರಿ
Published 7 ಸೆಪ್ಟೆಂಬರ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂದು ನಡೆಯುವ ವಿಶೇಷ ಘಟನೆಯಿಂದಾಗಿ ಕಾರ್ಯಾಲಯದ ಎಲ್ಲಾ ವ್ಯಕ್ತಿಗಳು ನಿಮಗೆ ಹತ್ತಿರದವರಾಗುತ್ತಾರೆ. ಅಕ್ಕಪಕ್ಕದವರ ಕಷ್ಟ ಸುಖವನ್ನು ವಿಚಾರಿಸುವುದರಿಂದ ಪ್ರಯೋಜನ ದೊರೆಯುವುದು.
ವೃಷಭ
ದುಡಿಮೆ ಎಷ್ಟು ಮುಖ್ಯವೋ ಅಷ್ಟೇ ವಿಶ್ರಾಂತಿಯು ಸಹ ಮುಖ್ಯ ಎಂಬುದನ್ನು ಕಂಡುಕೊಳ್ಳಿರಿ. ತರಕಾರಿ ಬೆಳೆಗಾರರಿಗೆ ಮುಂಜಾಗ್ರತಾ ಕ್ರಮಗಳು ಇಲ್ಲದಿದ್ದಲ್ಲಿ ಅಧಿಕ ವೃಷ್ಟಿಯಿಂದಾಗಿ ಅಧಿಕ ಹಾನಿ ಸಂಭವಿಸಬಹುದು.
ಮಿಥುನ
ಯುವ ಬರಹಗಾರರಿಗೆ ಹುರುಪು ಹೆಚ್ಚಿಸುವಂತಹ ಜನರು ನಿಮ್ಮ ಸುತ್ತಲು ಸಿಗುತ್ತಾರೆ. ಏಕಮುಖ ಪ್ರತಿಭೆಯನ್ನು ನಾಶಮಾಡಿ ಇನ್ನಿತರೇ ವಿಷಯಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ. ಮಗನಿಂದ ಶುಭ ಸುದ್ದಿ ಕೇಳುವಿರಿ.
ಕರ್ಕಾಟಕ
ಪತಿ ಪತ್ನಿಯರ ನಡುವೆ ಪರಸ್ಪರ ಸಮರ್ಪಣಾ ಭಾವವಿದ್ದಲ್ಲಿ ನಿಮ್ಮ ಈ ದಿನ ಉತ್ತಮವಾಗಿ ಇರುತ್ತದೆ. ಬುದ್ಧಿಶಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿಕೊಂಡಲ್ಲಿ ಯಶಸನ್ನು ಪಡೆಯುವಿರಿ. ಶೀತಬಾಧೆ ಕಡಿಮೆಯಾಗಲಿದೆ.
ಸಿಂಹ
ನಿಮ್ಮ ಸ್ವಗ್ರಾಮ ಬಿಟ್ಟು ಬೇರೆ ಎಲ್ಲಿಯಾದರೂ ಆಸ್ತಿಯನ್ನು ಖರೀದಿಸುವ ಯೋಚನೆ ಇದ್ದಲ್ಲಿ ಸರಿಯಾದ ವ್ಯಕ್ತಿಯಲ್ಲಿ ವಿಚಾರವನ್ನು ನಡೆಸಿ. ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯವರಿಗೆ ತರಬೇತಿಯ ಕರೆಯೋಲೆ ಬರಬಹುದು.
ಕನ್ಯಾ
ಬೇರೆಯವರ ಸಹಾಯ ಪಡೆಯದೆ ನಿಮ್ಮ ಶ್ರಮದಿಂದಲೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಲಾಭದಾಯಕ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಾದವರು ಅದನ್ನು ನಿರ್ಲಕ್ಷಿಸಬೇಡಿ.
ತುಲಾ
ದೂರದ ಪ್ರಯಾಣವನ್ನು ಮಾಡಿ ಬಂದ ನಂತರ ಹವಾಮಾನ ಬದಲಾವಣೆಯಾದ ಕಾರಣದಿಂದಾಗಿ ಉಂಟಾಗುವ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸುವಿರಿ. ಆಫೀಸಿನ ಕೆಲಸದಲ್ಲಿ ಎಲ್ಲರ ಮಾತನ್ನು ತಾಳ್ಮೆಯಿಂದ ಕೇಳಿರಿ.
ವೃಶ್ಚಿಕ
ನಿಮ್ಮ ಕ್ಷೇತ್ರದಲ್ಲಿ ಶ್ರೇಯಸ್ಸನ್ನು ಪಡೆಯಲು ಈ ಹಿಂದೆ ಉಪಯೋಗಿಸಿದ ತಂತ್ರಗಳು ಈ ಬಾರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಅನಾವಶ್ಯಕವಾಗಿ ಯಾರನ್ನೂ ಯಾವ ವಿಷಯಕ್ಕೂ ಸಹ ಟೀಕಿಸುವುದು ಸರಿಯಲ್ಲ.
ಧನು
ಹಳೆಯ ಕೆಲಸವನ್ನೇ ಹೊಸ ಹಾಗೂ ಗ್ರಾಹಕರನ್ನು ಸೆಳೆಯುವಂತಹ ನಿಯಮಗಳನ್ನು ಹಾಕಿಕೊಂಡು ಪುನಃ ಪ್ರಾರಂಭ ಮಾಡುವಿರಿ. ಇಂದು ನಿಮ್ಮ ಯೋಚನೆಯಷ್ಟು ಖರ್ಚು ಸಂಭವಿಸದ ಕಾರಣ ಹಣದ ಕೊರತೆ ಕಂಡು ಬರುವುದಿಲ್ಲ.
ಮಕರ
ಜರುಗಲಿರುವ ಸಂಗತಿಯೊಂದು ಗಾಢ ಪರಿಣಾಮ ಬೀರಿ ನಿಮ್ಮ ವೃತ್ತಿಗೆ ಸಂಬಂಧಿಸಿದ ವಿಷಯದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಲು ಸಹಾಯವಾಗಲಿದೆ. ಸಾಕು ಪ್ರಾಣಿಗಳ ಜೊತೆ ಸಂತಸದ ಸಮಯವನ್ನು ಕಳೆಯುವಿರಿ.
ಕುಂಭ
ನಿಮ್ಮ ಪ್ರತಿಯೊಂದು ವೈಯಕ್ತಿಕ ಕೆಲಸಗಳಿಗೂ ನಿಮ್ಮ ಅನಾರೋಗ್ಯದ ಕಾರಣವಾಗಿ ಬೇರೆಯವರ ನೆರವು ಬೇಕಾಗುತ್ತದೆ. ಉದ್ಯೋಗದಲ್ಲಿ ಒತ್ತಡ ಹೆಚ್ಚಿರುವ ಕಾರಣ ಮಾನಸಿಕವಾಗಿ ಈಗಲೇ ತಯಾರಾಗಿರುವುದು ಸೂಕ್ತ.
ಮೀನ
ಮೈಬಣ್ಣದ ನೆಪವನ್ನು ಹೇಳಿಕೊಂಡು ಸಂಬಂಧದಲ್ಲಾಗಲಿ ವ್ಯವಹಾರದಲ್ಲಾಗಲಿ ಕಡೆಗಣಿಸಬೇಡಿ. ದಾಂಪತ್ಯದಲ್ಲಿ ಪತಿ ಪತ್ನಿಯರ ನಡುವೆ ಪ್ರಬುದ್ಧತೆಯಿಂದ ಸಾಮರಸ್ಯ ಹೆಚ್ಚುತ್ತದೆ. ಮಕ್ಕಳ ಆರೋಗ್ಯ ಹದಗೆಡಬಹುದು.
ADVERTISEMENT
ADVERTISEMENT