ದೇಶದ ಎಲ್ಲರಿಗೂ ನ್ಯಾಯ, ಸಮಾನತೆ, ಉದ್ಯೋಗ ಮತ್ತು ಗೌರವ ನೀಡುವ ಅಗತ್ಯತೆಯನ್ನು ಈ ವಿಡಿಯೊ ಒತ್ತಿ ಹೇಳಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯ ದೃಶ್ಯಗಳು ಇದರಲ್ಲಿವೆ.
ಸಿರಿವಂತರ ಹೃದಯದಲ್ಲಿರುವ ಬಿಜೆಪಿಯವರಿಗೆ ಬಡವರು, ನಿರ್ಗತಿಕರು ಕಾಣುವುದಿಲ್ಲ. ಈ ಸಲ ಇವರಿಗೆ ನ್ಯಾಯ ಸಿಗಲಿದೆ. ನ್ಯಾಯ, ಸಮಾನತೆ, ಉದ್ಯೋಗ ಮತ್ತು ಗೌರವದ ಹಕ್ಕುಗಳು ಬಡವರಿಗೆ ಸಿಗಲಿವೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ.
‘ಭಾರತ್ ಜೋಡೊ ನ್ಯಾಯ್ ಯಾತ್ರೆ‘ ಜನವರಿ 14ರಂದು ಮಣಿಪುರದಲ್ಲಿ ಆರಂಭವಾಗಲಿದ್ದು ಮಾರ್ಚ್ 30ರಂದು ಮಹಾರಾಷ್ಟ್ರದಲ್ಲಿ ಮುಕ್ತಾಯವಾಗಲಿದೆ.