ಕೊಲ್ಹಾಪುರದಲ್ಲಿ ನಿರ್ಮಾಣವಾಗಿರುವ ಛತ್ರಪತಿ ಶಿವಾಜಿ ಮಹಾರಾಜ ಅವರ ಪ್ರತಿಮೆ ಅನಾವರಣಕ್ಕೂ ಮುನ್ನ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರದಲ್ಲಿ ಇರುವವರ ಉದ್ದೇಶ ಮತ್ತು ಸಿದ್ಧಾಂತದಲ್ಲಿ ದೋಷ ಇದೆ. ಅವರು (ಬಿಜೆಪಿ) ಸಿಂಧುದುರ್ಗದಲ್ಲಿ ಶಿವಾಜಿ ಅವರ ಪ್ರತಿಮೆ ನಿರ್ಮಿಸಿದರು. ಕೆಲವೇ ದಿನಗಳಲ್ಲಿ ಕುಸಿದುಬಿತ್ತು. ಅವರ ಉದ್ದೇಶ ಸರಿ ಇರಲಿಲ್ಲ. ‘ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸುವುದಾದರೆ ಅವರ ಸಿದ್ಧಾಂತವನ್ನು ಅನುಸರಿಸಬೇಕು’ ಎಂಬ ಸಂದೇಶವನ್ನು ಪ್ರತಿಮೆಯೇ ನೀಡಿತು ಎಂದು ಹೇಳಿದರು.