ಮದರಾಸು ಜೂ.29: ಕಛತೀವು ದ್ವೀಪದ ಬಗ್ಗೆ ಶ್ರೀಲಂಕಾ ಜತೆ ಮಾಡಿಕೊಂಡಿರುವ ಒಪ್ಪಂದವನ್ನು ‘ಪುನರ್ ಪರಿಶೀಲಿಸಿ’, ಆ ದ್ವೀಪದ ಮೇಲೆ ಭಾರತಕ್ಕೆ ಸಾರ್ವಭೌಮತ್ವ ಇರುವ ರೀತಿಯಲ್ಲಿ ಒಪ್ಪಂದವನ್ನು ಪುನರ್ ರೂಪಿಸುವಂತೆ ಮುಖ್ಯಮಂತ್ರಿ ಕರುಣಾನಿಧಿ ಅವರು ಕರೆದಿದ್ದ ಸಭೆಯಲ್ಲಿ ತಮಿಳುನಾಡು ಶಾಸನಸಭೆಯ ವಿವಿಧ ಪಕ್ಷಗಳ ಪ್ರತಿನಿಧಿಗಳು ಇಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.