<p>ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಬಹುಮುಖ ಪ್ರತಿಭೆ. ಕನ್ನಡ ಸಾಹಿತ್ಯಲೋಕದಲ್ಲಿ ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರ ಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೆ ಅಲ್ಲದೇ ಪರಿಸರಪ್ರಿಯನಾಗಿ, ಕೃಷಿಕನಾಗಿ, ಸಾಹಿತಿಯಾಗಿ, ಪಕ್ಷಿತಜ್ಞನಾಗಿ, ಅತ್ಯುತ್ತಮ ಛಾಯಾಗ್ರಾಹಕನಾಗಿ, ವಿಜ್ಞಾನಿಯಾಗಿ, ವಿದ್ವಾಂಸನಾಗಿ ಬದುಕನ್ನು ಹಲವು ಮಗ್ಗುಲುಗಳಲ್ಲಿ ಶೋಧಿಸಿ, ತಮ್ಮ ಕೃತಿಗಳಲ್ಲಿ ದಾಖಲಿಸಿದವರು. </p><p>ಹೇಳಿದಷ್ಟೂ ಮುಗಿಯದ ಇಂಥ ಅಪ್ರತಿಮ ಪ್ರತಿಭೆಯ ವ್ಯಕ್ತಿಚಿತ್ರಣವನ್ನು ಕೆಲವು ಸಂಚಿಕೆಗಳಲ್ಲಿ ನಿರೂಪಿಸುವ ಪ್ರಯತ್ನವೇ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ. </p><p>ಈ ಸಾಕ್ಷ್ಯಚಿತ್ರದಲ್ಲಿ ತೇಜಸ್ವಿಯವರ ಬಗ್ಗೆ 30ಕ್ಕೂ ಹೆಚ್ಚು ಗಣ್ಯರು, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ತೇಜಸ್ವಿ ಅವರೊಂದಿಗಿನ ತಮ್ಮ ನೆನಪು, ಅನುಭವಗಳನ್ನು ಹಂಚಿಕೊಂಡಿದ್ದಾರೆ. </p><p>ಸಾಕ್ಷ್ಯಚಿತ್ರ ಆರು ಸರಣಿಗಳನ್ನು ಒಳಗೊಂಡಿದೆ. ಜುಲೈ 28ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗಲಿದೆ. ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಲೋಕಾರ್ಪಣೆ ಮಾಡಲಿದ್ದಾರೆ. </p><p>‘ತೇಜಸ್ವಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬ’ ಎರಡು ದಿನಗಳ ಕಾಲ ನಡೆಯಲಿದೆ. ಅತಿಥಿಗಳು: ಬಿ.ಎನ್.ಶ್ರೀರಾಂ, ಡಾ.ಕೆ.ಚಿದಾನಂದಗೌಡ, ಡಾ. ವೂಡೇ ಪಿ.ಕೃಷ್ಣ. ಎಸ್.ಜಿ.ಸಿದ್ದರಾಮಯ್ಯ. ತಾರಿಣಿ ಚಿದಾನಂದ ಇರಲಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಬಹುಮುಖ ಪ್ರತಿಭೆ. ಕನ್ನಡ ಸಾಹಿತ್ಯಲೋಕದಲ್ಲಿ ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರ ಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೆ ಅಲ್ಲದೇ ಪರಿಸರಪ್ರಿಯನಾಗಿ, ಕೃಷಿಕನಾಗಿ, ಸಾಹಿತಿಯಾಗಿ, ಪಕ್ಷಿತಜ್ಞನಾಗಿ, ಅತ್ಯುತ್ತಮ ಛಾಯಾಗ್ರಾಹಕನಾಗಿ, ವಿಜ್ಞಾನಿಯಾಗಿ, ವಿದ್ವಾಂಸನಾಗಿ ಬದುಕನ್ನು ಹಲವು ಮಗ್ಗುಲುಗಳಲ್ಲಿ ಶೋಧಿಸಿ, ತಮ್ಮ ಕೃತಿಗಳಲ್ಲಿ ದಾಖಲಿಸಿದವರು. </p><p>ಹೇಳಿದಷ್ಟೂ ಮುಗಿಯದ ಇಂಥ ಅಪ್ರತಿಮ ಪ್ರತಿಭೆಯ ವ್ಯಕ್ತಿಚಿತ್ರಣವನ್ನು ಕೆಲವು ಸಂಚಿಕೆಗಳಲ್ಲಿ ನಿರೂಪಿಸುವ ಪ್ರಯತ್ನವೇ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ. </p><p>ಈ ಸಾಕ್ಷ್ಯಚಿತ್ರದಲ್ಲಿ ತೇಜಸ್ವಿಯವರ ಬಗ್ಗೆ 30ಕ್ಕೂ ಹೆಚ್ಚು ಗಣ್ಯರು, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ತೇಜಸ್ವಿ ಅವರೊಂದಿಗಿನ ತಮ್ಮ ನೆನಪು, ಅನುಭವಗಳನ್ನು ಹಂಚಿಕೊಂಡಿದ್ದಾರೆ. </p><p>ಸಾಕ್ಷ್ಯಚಿತ್ರ ಆರು ಸರಣಿಗಳನ್ನು ಒಳಗೊಂಡಿದೆ. ಜುಲೈ 28ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗಲಿದೆ. ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಲೋಕಾರ್ಪಣೆ ಮಾಡಲಿದ್ದಾರೆ. </p><p>‘ತೇಜಸ್ವಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬ’ ಎರಡು ದಿನಗಳ ಕಾಲ ನಡೆಯಲಿದೆ. ಅತಿಥಿಗಳು: ಬಿ.ಎನ್.ಶ್ರೀರಾಂ, ಡಾ.ಕೆ.ಚಿದಾನಂದಗೌಡ, ಡಾ. ವೂಡೇ ಪಿ.ಕೃಷ್ಣ. ಎಸ್.ಜಿ.ಸಿದ್ದರಾಮಯ್ಯ. ತಾರಿಣಿ ಚಿದಾನಂದ ಇರಲಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>