<p>ಹೆಸರು ಮತ್ತು ವಿನ್ಯಾಸದ ಸ್ವರೂಪದಲ್ಲಿ ಈ ಕಿರು ಹೊತ್ತಿಗೆಗಳು ಬೇರೆ ಬೇರೆ ಅನ್ನಿಸಿದರೂ ಅವುಗಳ ಆಂತರ್ಯದ ಸಾರ ಭಾರತೀಯ ಸಮಾಜವನ್ನೇ ಕೇಂದ್ರೀಕರಿಸಿದೆ. ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ–ಸಾಂಸ್ಕೃತಿಕ ನೆಲೆಯಲ್ಲಿ ಬೇರೂರಿರುವ ಸಮಸ್ಯೆಗಳನ್ನು ಗುರುತಿಸುವ ಮತ್ತು ಅದಕ್ಕೆ ಬೇರೆ ಬೇರೆ ಚಿಂತಕರ ವ್ಯಾಖ್ಯಾನಗಳ ಮೂಲಕ ಪರಿಹಾರ ಮಾರ್ಗವನ್ನು ಸೂಚಿವ ಪ್ರಯತ್ನವನ್ನು ಲೇಖಕ ಮಾಡಿದ್ದಾರೆ.</p>.<p>ಲೇಖಕ ಅಬ್ದುಲ್ ರಹಮಾನ್ ಹಸನ್ ಸಾಹೇಬ ಮಾಸಾಪತಿ (ಎ.ಎಚ್. ಮಾಸಾಪತಿ) ವೃತ್ತಿಯಿಂದ ಅಧ್ಯಾಪಕರಾಗಿ ರಾಜ್ಯದ ಹಲವು ಕಡೆ ಕೆಲಸ ಮಾಡಿದ್ದಾರೆ. ಅವರು ಈ ಕೃತಿಗಳಲ್ಲಿ ಭಾರತೀಯ ಸಮಾಜ, ರಾಜಕೀಯ ವ್ಯವಸ್ಥೆ, ಸಂವಿಧಾನ ಅನುಷ್ಠಾನ, ಆರ್ಥಿಕ ಪರಿಸ್ಥಿತಿ ಸೇರಿದಂತೆ ಇಲ್ಲಿನ ಭೌಗೋಳಿಕ ಪರಿಸರದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾ ಸಮಸ್ಯೆ ರಾಷ್ಟ್ರೀಯ ಶಿಕ್ಷಣದ ಧೋರಣೆ ಕುರಿತು ಸಂಕ್ಷಿಪ್ತ ವಿವರವನ್ನು ನೀಡಿದ್ದಾರೆ. </p>.<p>ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಅದಕ್ಕೆ ಸೂಕ್ತ ಸಾರ್ವಜನಿಕ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕು. ಅಂದರೆ, ಅದಕ್ಕೆ ಪ್ರಧಾನವಾಗಿ ರಾಜಕೀಯ ಕಾಳಜಿಯೇ ಮುಖ್ಯ ಎನ್ನುವ ಲೇಖಕರು ಸುಸ್ಥಿರ ಅಭಿವೃದ್ಧಿಯ ಆಯಾಮಗಳನ್ನು ಗುರುತಿಸುತ್ತಾರೆ. ಅದಕ್ಕೆ ಆಡಳಿತಾತ್ಮಕವಾಗಿ ಪರಿಹಾರಗಳನ್ನು ಕಂಡುಕೊಳ್ಳಬೇಕು ಎನ್ನುವ ನಿಲುವನ್ನು ಪ್ರಕಟಿತ್ತಾರೆ.</p>.<p>ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಿಂದ ಗ್ರಾಮೀಣ ಆರ್ಥಿಕ ಅಭಿವೃದ್ಧಿ ಸಾಧ್ಯ ಎನ್ನುವ ಅಂಶವನ್ನು ಮಹಾತ್ಮ ಗಾಂಧಿ ಅವರ ಆರ್ಥಿಕ ಮತ್ತು ರಾಜಕೀಯ ವಿಚಾರದ ಹಿನ್ನೆಲೆಯಲ್ಲಿ ಮಾಸಾಪತಿ ಅವರು ವಿವರಿಸುತ್ತಾರೆ. ನೂರಾರು ವರ್ಷಗಳ ದೀರ್ಘಕಾಲದ ಸಾಂಪ್ರದಾಯಿಕ ದೇಸಿ ಕೃಷಿ ಪದ್ಧತಿಯನ್ನು ಸರಳ ವಿಮರ್ಶೆಯ ನೋಟದಲ್ಲಿ ನೋಡುವ ಪ್ರಯತ್ನ ಮಾಡಿದ್ದಾರೆ. ಸ್ವಾತಂತ್ರೋತ್ತರ ಭಾರತದಲ್ಲಿ ಪಂಚ ವಾರ್ಷಿಕ ಯೋಜನೆಯ ಸ್ವರೂಪ ಮತ್ತು ಅವುಗಳ ಆದ್ಯತೆಯನ್ನು ಸಂಕ್ಷಿಪ್ತವಾಗಿ ಇಲ್ಲಿ ಪರಿಚಯಿಸಿದ್ದಾರೆ.</p>.<p>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮುದಾಯದ ಸಹಭಾಗಿತ್ವ ಬಹುಮುಖ್ಯ. ಸಂವಿಧಾನದ ಆಶಯದಂತೆ ದೇಶದಲ್ಲಿ ಧರ್ಮನಿರಪೇಕ್ಷ ರಾಜಕೀಯ ವ್ಯವಸ್ಥೆ ಇರಬೇಕು. ಮುಸ್ಲಿಮರ ವೈಯಕ್ತಿಕ ಕಾನೂನು ಧಾರ್ಮಿಕವಾದದ್ದು. ಅದು ಧರ್ಮ ಆಚರಣೆಯ ಮಾಡುವವರ ಖಾಸಗಿ ಆಯ್ಕೆ. ಅದರಲ್ಲಿ ಯಾವುದೇ ರೂಪದ ರಾಜಕೀಯ ಹಸ್ತಕ್ಷೇಪ ಸಲ್ಲದು. ಸಂವಿಧಾನ ನೀಡಿದ ಮೂಲಭೂತ ಹಕ್ಕಿನ ಅನುಗುಣವಾಗಿ ಜನ ತಮ್ಮ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಂವಿಧಾನದತ್ತವಾಗಿರುವ ಮೂಲಭೂತ ಹಕ್ಕುಗಳು ಮತ್ತು ರಾಜನಿರ್ದೇಶಕ ತತ್ವಗಳನ್ನು ಪಾಲಿಸುವ ಸಮನ್ವಯ ಸೂತ್ರವನ್ನು ವ್ಯವಸ್ಥೆ ಮಾನವೀಯ ನೆಲೆಯಲ್ಲಿ ಕಂಡುಕೊಳ್ಳಬೇಕು ಎನ್ನುವ ಆಶಯವನ್ನು ಲೇಖಕ ವ್ಯಕ್ತಪಡಿಸಿದ್ದಾರೆ.</p>.<p>ರಾಜಕೀಯ ಸಮಾಜಶಾಸ್ತ್ರ ಮತ್ತು ನೂತನ ಮಾನತಾವಾದ (ಪುಟ 120, ಬೆಲೆ 200), ಅಭಿವೃದ್ಧಿ ಮತ್ತು ಸಾರ್ವಜನಿಕ ಆಡಳಿತ ವ್ಯವಸ್ಥೆ (ಪುಟ 128, ಬೆಲೆ 150) ಕೃತಿಗಳನ್ನು ವಿಕಾಸ ಪ್ರಕಾಶನ ಪ್ರಕಟಿಸಿದೆ. ಸಂಪರ್ಕ: 7996799070</p>.<p>ಶಾಸನ ಮತ್ತು ಸಾಮಾಜಿಕ ಪರಿವರ್ತನೆ (ಪುಟ 160, ಬೆಲೆ 110) ಕೃತಿಯನ್ನು ಸಾಹಿತ್ಯ ನಂದನ ಪ್ರಕಟಿಸಿದೆ.</p>.<p><strong>ಗ್ರಾಮೀಣ ಆರ್ಥಿಕ ವ್ಯವಸ್ಥೆ ಮತ್ತು ಸುಧಾರಣೆಗಳು</strong></p><p><strong>ಲೇ:</strong> ಪ್ರೊ. ಎ.ಎಚ್. ಮಾಸಾಪತಿ</p><p><strong>ಪ್ರ:</strong> ಸಾಹಿತ್ಯ ನಂದನ</p><p><strong>ಸಂ:</strong> 080–23354619</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೆಸರು ಮತ್ತು ವಿನ್ಯಾಸದ ಸ್ವರೂಪದಲ್ಲಿ ಈ ಕಿರು ಹೊತ್ತಿಗೆಗಳು ಬೇರೆ ಬೇರೆ ಅನ್ನಿಸಿದರೂ ಅವುಗಳ ಆಂತರ್ಯದ ಸಾರ ಭಾರತೀಯ ಸಮಾಜವನ್ನೇ ಕೇಂದ್ರೀಕರಿಸಿದೆ. ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ–ಸಾಂಸ್ಕೃತಿಕ ನೆಲೆಯಲ್ಲಿ ಬೇರೂರಿರುವ ಸಮಸ್ಯೆಗಳನ್ನು ಗುರುತಿಸುವ ಮತ್ತು ಅದಕ್ಕೆ ಬೇರೆ ಬೇರೆ ಚಿಂತಕರ ವ್ಯಾಖ್ಯಾನಗಳ ಮೂಲಕ ಪರಿಹಾರ ಮಾರ್ಗವನ್ನು ಸೂಚಿವ ಪ್ರಯತ್ನವನ್ನು ಲೇಖಕ ಮಾಡಿದ್ದಾರೆ.</p>.<p>ಲೇಖಕ ಅಬ್ದುಲ್ ರಹಮಾನ್ ಹಸನ್ ಸಾಹೇಬ ಮಾಸಾಪತಿ (ಎ.ಎಚ್. ಮಾಸಾಪತಿ) ವೃತ್ತಿಯಿಂದ ಅಧ್ಯಾಪಕರಾಗಿ ರಾಜ್ಯದ ಹಲವು ಕಡೆ ಕೆಲಸ ಮಾಡಿದ್ದಾರೆ. ಅವರು ಈ ಕೃತಿಗಳಲ್ಲಿ ಭಾರತೀಯ ಸಮಾಜ, ರಾಜಕೀಯ ವ್ಯವಸ್ಥೆ, ಸಂವಿಧಾನ ಅನುಷ್ಠಾನ, ಆರ್ಥಿಕ ಪರಿಸ್ಥಿತಿ ಸೇರಿದಂತೆ ಇಲ್ಲಿನ ಭೌಗೋಳಿಕ ಪರಿಸರದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾ ಸಮಸ್ಯೆ ರಾಷ್ಟ್ರೀಯ ಶಿಕ್ಷಣದ ಧೋರಣೆ ಕುರಿತು ಸಂಕ್ಷಿಪ್ತ ವಿವರವನ್ನು ನೀಡಿದ್ದಾರೆ. </p>.<p>ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಅದಕ್ಕೆ ಸೂಕ್ತ ಸಾರ್ವಜನಿಕ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕು. ಅಂದರೆ, ಅದಕ್ಕೆ ಪ್ರಧಾನವಾಗಿ ರಾಜಕೀಯ ಕಾಳಜಿಯೇ ಮುಖ್ಯ ಎನ್ನುವ ಲೇಖಕರು ಸುಸ್ಥಿರ ಅಭಿವೃದ್ಧಿಯ ಆಯಾಮಗಳನ್ನು ಗುರುತಿಸುತ್ತಾರೆ. ಅದಕ್ಕೆ ಆಡಳಿತಾತ್ಮಕವಾಗಿ ಪರಿಹಾರಗಳನ್ನು ಕಂಡುಕೊಳ್ಳಬೇಕು ಎನ್ನುವ ನಿಲುವನ್ನು ಪ್ರಕಟಿತ್ತಾರೆ.</p>.<p>ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಿಂದ ಗ್ರಾಮೀಣ ಆರ್ಥಿಕ ಅಭಿವೃದ್ಧಿ ಸಾಧ್ಯ ಎನ್ನುವ ಅಂಶವನ್ನು ಮಹಾತ್ಮ ಗಾಂಧಿ ಅವರ ಆರ್ಥಿಕ ಮತ್ತು ರಾಜಕೀಯ ವಿಚಾರದ ಹಿನ್ನೆಲೆಯಲ್ಲಿ ಮಾಸಾಪತಿ ಅವರು ವಿವರಿಸುತ್ತಾರೆ. ನೂರಾರು ವರ್ಷಗಳ ದೀರ್ಘಕಾಲದ ಸಾಂಪ್ರದಾಯಿಕ ದೇಸಿ ಕೃಷಿ ಪದ್ಧತಿಯನ್ನು ಸರಳ ವಿಮರ್ಶೆಯ ನೋಟದಲ್ಲಿ ನೋಡುವ ಪ್ರಯತ್ನ ಮಾಡಿದ್ದಾರೆ. ಸ್ವಾತಂತ್ರೋತ್ತರ ಭಾರತದಲ್ಲಿ ಪಂಚ ವಾರ್ಷಿಕ ಯೋಜನೆಯ ಸ್ವರೂಪ ಮತ್ತು ಅವುಗಳ ಆದ್ಯತೆಯನ್ನು ಸಂಕ್ಷಿಪ್ತವಾಗಿ ಇಲ್ಲಿ ಪರಿಚಯಿಸಿದ್ದಾರೆ.</p>.<p>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮುದಾಯದ ಸಹಭಾಗಿತ್ವ ಬಹುಮುಖ್ಯ. ಸಂವಿಧಾನದ ಆಶಯದಂತೆ ದೇಶದಲ್ಲಿ ಧರ್ಮನಿರಪೇಕ್ಷ ರಾಜಕೀಯ ವ್ಯವಸ್ಥೆ ಇರಬೇಕು. ಮುಸ್ಲಿಮರ ವೈಯಕ್ತಿಕ ಕಾನೂನು ಧಾರ್ಮಿಕವಾದದ್ದು. ಅದು ಧರ್ಮ ಆಚರಣೆಯ ಮಾಡುವವರ ಖಾಸಗಿ ಆಯ್ಕೆ. ಅದರಲ್ಲಿ ಯಾವುದೇ ರೂಪದ ರಾಜಕೀಯ ಹಸ್ತಕ್ಷೇಪ ಸಲ್ಲದು. ಸಂವಿಧಾನ ನೀಡಿದ ಮೂಲಭೂತ ಹಕ್ಕಿನ ಅನುಗುಣವಾಗಿ ಜನ ತಮ್ಮ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಂವಿಧಾನದತ್ತವಾಗಿರುವ ಮೂಲಭೂತ ಹಕ್ಕುಗಳು ಮತ್ತು ರಾಜನಿರ್ದೇಶಕ ತತ್ವಗಳನ್ನು ಪಾಲಿಸುವ ಸಮನ್ವಯ ಸೂತ್ರವನ್ನು ವ್ಯವಸ್ಥೆ ಮಾನವೀಯ ನೆಲೆಯಲ್ಲಿ ಕಂಡುಕೊಳ್ಳಬೇಕು ಎನ್ನುವ ಆಶಯವನ್ನು ಲೇಖಕ ವ್ಯಕ್ತಪಡಿಸಿದ್ದಾರೆ.</p>.<p>ರಾಜಕೀಯ ಸಮಾಜಶಾಸ್ತ್ರ ಮತ್ತು ನೂತನ ಮಾನತಾವಾದ (ಪುಟ 120, ಬೆಲೆ 200), ಅಭಿವೃದ್ಧಿ ಮತ್ತು ಸಾರ್ವಜನಿಕ ಆಡಳಿತ ವ್ಯವಸ್ಥೆ (ಪುಟ 128, ಬೆಲೆ 150) ಕೃತಿಗಳನ್ನು ವಿಕಾಸ ಪ್ರಕಾಶನ ಪ್ರಕಟಿಸಿದೆ. ಸಂಪರ್ಕ: 7996799070</p>.<p>ಶಾಸನ ಮತ್ತು ಸಾಮಾಜಿಕ ಪರಿವರ್ತನೆ (ಪುಟ 160, ಬೆಲೆ 110) ಕೃತಿಯನ್ನು ಸಾಹಿತ್ಯ ನಂದನ ಪ್ರಕಟಿಸಿದೆ.</p>.<p><strong>ಗ್ರಾಮೀಣ ಆರ್ಥಿಕ ವ್ಯವಸ್ಥೆ ಮತ್ತು ಸುಧಾರಣೆಗಳು</strong></p><p><strong>ಲೇ:</strong> ಪ್ರೊ. ಎ.ಎಚ್. ಮಾಸಾಪತಿ</p><p><strong>ಪ್ರ:</strong> ಸಾಹಿತ್ಯ ನಂದನ</p><p><strong>ಸಂ:</strong> 080–23354619</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>