<p>ಊರಿನ ಅಭಿವೃದ್ಧಿಯ ಎಲ್ಲ ಕೆಲಸಗಳೂ ಸರ್ಕಾರದಿಂದಲೇ ಆಗಬೇಕೆಂದೇನಿಲ್ಲ. ಮನಸ್ಸು ಮಾಡಿದರೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿಯೇ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ದೇಶದ ಒಂದಷ್ಟು ಮಾದರಿ ಗ್ರಾಮ ಪಂಚಾಯ್ತಿಗಳ ಸಾಧನೆಯ ಸಂಕಥನ ‘ಪಂಚಾಯತ್ ಪವರ್’ ಕೃತಿ. ವಿಭಿನ್ನ ಕೆಲಸಗಳ ಮೂಲಕ ನಮ್ಮ ನಡುವೆ ಮಾದರಿಯಾಗಿ ನಿಲ್ಲಬಲ್ಲ ಕೆಲವಷ್ಟು ಪಂಚಾಯ್ತಿಗಳ ಕಿರು ಪರಿಚಯ ಮಾಡಿಕೊಡುವ ಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ. </p>.<p>ಕೃತಿಯಲ್ಲಿ ಆರು ವಿಭಾಗಗಳಿದ್ದು, 30ಕ್ಕೂ ಹೆಚ್ಚು ಕಿರು ಲೇಖನಗಳಿವೆ. ಜಲಪಾತದಿಂದ ಹಣ //ಹರಿಸುವ// ಆಂಧ್ರ ಪ್ರದೇಶದ ಕತಕಿ ಪಂಚಾಯ್ತಿ, ವಿದ್ಯುತ್ನ ಹಂಗಿಲ್ಲದ ರಾಜಸ್ಥಾನದ ನ್ಯೂಕೊಟ್ರ, ಕಾರಂತರನ್ನು ನೆನಪಿಸುವ ಉಡುಪಿಯ ಕೋಟತೊಟ್ಟು ಪಂಚಾಯ್ತಿ–ಹೀಗೆ ಬೇರೆ ಬೇರೆ ವಿಷಯಗಳಿಂದ ಸ್ವಾವಲಂಬಿಯಾಗಿ ನಿಂತಿರುವ ಪಂಚಾಯ್ತಿಗಳ ವಿಶಿಷ್ಟ ಕಥನಗಳು ಇಲ್ಲಿ ಸಿಗುತ್ತವೆ.</p>.<p>‘ಇಂಥ ಅಪರೂಪದ ಕೃತಿ ಪ್ರತಿ ಗ್ರಾಮ ಪಂಚಾಯ್ತಿಯ ಕಪಾಟಿನಲ್ಲಿರಬೇಕು. ರಾಜ್ಯದ ಒಂದೊಂದು ಪಂಚಾಯತ್ಗೂ ತನ್ನದೇ ಆದ ಗ್ರಾಮಗೀತೆಯನ್ನು ರಚಿಸಲು ಪ್ರೇರಣೆಯಾಗುವಷ್ಟರ ಮಟ್ಟಿಗೆ ಈ ಕೃತಿ ಕೈದೀವಿಗೆಯಾಲಿ’ ಎಂದು ಕೃತಿಯ ಮುನ್ನುಡಿಯಲ್ಲಿ ನಾಗೇಶ ಹೆಗಡೆ ಬರೆದಿದ್ದಾರೆ. </p>.<p><strong>ಪಂಚಾಯತ್ ಪವರ್</strong></p><p><strong>ಲೇ: ಗುರುರಾಜ್ ಎಸ್.ದಾವಣಗೆರೆ</strong></p><p><strong>ಪ್ರ: ನದಿ ಪ್ರಕಾಶನ</strong></p><p><strong>ಸಂ:9008475899</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಊರಿನ ಅಭಿವೃದ್ಧಿಯ ಎಲ್ಲ ಕೆಲಸಗಳೂ ಸರ್ಕಾರದಿಂದಲೇ ಆಗಬೇಕೆಂದೇನಿಲ್ಲ. ಮನಸ್ಸು ಮಾಡಿದರೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿಯೇ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ದೇಶದ ಒಂದಷ್ಟು ಮಾದರಿ ಗ್ರಾಮ ಪಂಚಾಯ್ತಿಗಳ ಸಾಧನೆಯ ಸಂಕಥನ ‘ಪಂಚಾಯತ್ ಪವರ್’ ಕೃತಿ. ವಿಭಿನ್ನ ಕೆಲಸಗಳ ಮೂಲಕ ನಮ್ಮ ನಡುವೆ ಮಾದರಿಯಾಗಿ ನಿಲ್ಲಬಲ್ಲ ಕೆಲವಷ್ಟು ಪಂಚಾಯ್ತಿಗಳ ಕಿರು ಪರಿಚಯ ಮಾಡಿಕೊಡುವ ಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ. </p>.<p>ಕೃತಿಯಲ್ಲಿ ಆರು ವಿಭಾಗಗಳಿದ್ದು, 30ಕ್ಕೂ ಹೆಚ್ಚು ಕಿರು ಲೇಖನಗಳಿವೆ. ಜಲಪಾತದಿಂದ ಹಣ //ಹರಿಸುವ// ಆಂಧ್ರ ಪ್ರದೇಶದ ಕತಕಿ ಪಂಚಾಯ್ತಿ, ವಿದ್ಯುತ್ನ ಹಂಗಿಲ್ಲದ ರಾಜಸ್ಥಾನದ ನ್ಯೂಕೊಟ್ರ, ಕಾರಂತರನ್ನು ನೆನಪಿಸುವ ಉಡುಪಿಯ ಕೋಟತೊಟ್ಟು ಪಂಚಾಯ್ತಿ–ಹೀಗೆ ಬೇರೆ ಬೇರೆ ವಿಷಯಗಳಿಂದ ಸ್ವಾವಲಂಬಿಯಾಗಿ ನಿಂತಿರುವ ಪಂಚಾಯ್ತಿಗಳ ವಿಶಿಷ್ಟ ಕಥನಗಳು ಇಲ್ಲಿ ಸಿಗುತ್ತವೆ.</p>.<p>‘ಇಂಥ ಅಪರೂಪದ ಕೃತಿ ಪ್ರತಿ ಗ್ರಾಮ ಪಂಚಾಯ್ತಿಯ ಕಪಾಟಿನಲ್ಲಿರಬೇಕು. ರಾಜ್ಯದ ಒಂದೊಂದು ಪಂಚಾಯತ್ಗೂ ತನ್ನದೇ ಆದ ಗ್ರಾಮಗೀತೆಯನ್ನು ರಚಿಸಲು ಪ್ರೇರಣೆಯಾಗುವಷ್ಟರ ಮಟ್ಟಿಗೆ ಈ ಕೃತಿ ಕೈದೀವಿಗೆಯಾಲಿ’ ಎಂದು ಕೃತಿಯ ಮುನ್ನುಡಿಯಲ್ಲಿ ನಾಗೇಶ ಹೆಗಡೆ ಬರೆದಿದ್ದಾರೆ. </p>.<p><strong>ಪಂಚಾಯತ್ ಪವರ್</strong></p><p><strong>ಲೇ: ಗುರುರಾಜ್ ಎಸ್.ದಾವಣಗೆರೆ</strong></p><p><strong>ಪ್ರ: ನದಿ ಪ್ರಕಾಶನ</strong></p><p><strong>ಸಂ:9008475899</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>