<p><strong>ಬೆಂಗಳೂರು</strong>: ಸ್ವರ ಸೌರಭವು ವಾರ್ಷಿಕ ಸಂಗೀತ ಕಾರ್ಯಕ್ರಮ ’ಗುರು ಸ್ಮೃತಿ’ಯನ್ನು ಸಂಗೀತ ವಿದ್ಯಾಸಾಗರ ಶ್ರೀ.ಆರ್.ಆರ್. ಕೇಶವಮೂರ್ತಿ ಪೌಂಡೇಶನ್ ಸಹಭಾಗಿತ್ವದಲ್ಲಿ ಆಚರಿಸುತ್ತಿದೆ. </p>.<p>ಕಾರ್ಯಕ್ರಮದಲ್ಲಿ ಪ್ರಸಿದ್ಧ ವಾಯೋಲಿನ್ ವಾದಕ ನಾಡಯೋಗಿ ವಿದ್ವಾನ್ ವಿ.ವಿ.ಸುಬ್ರಮಣ್ಯರಿಗೆ ’ಸಾಧನಾಚಾರ್ಯ’ ಬಿರದು ನೀಡಿ ಗೌರವಿಸಲಾಗುತ್ತದೆ. ಅವರು ಮಗ ವಿದ್ವಾನ್ ವಿ.ವಿ.ಎಸ್. ಮುರುಳಿ ಜೊತೆಗೂಡಿ ಪ್ರದರ್ಶನ ನೀಡಲಿದ್ದಾರೆ.</p>.<p>ವಿದ್ವಾನ್ ಎ.ರೇಣುಕಾ ಪ್ರಸಾದ್, ವಿದ್ವಾನ್ ಬಿ.ಎಸ್. ಪುರುಷೋತ್ತಮ್ ಅವರು ಕೂಡ ವಾಯೋಲಿನ್ ಪ್ರದರ್ಶನ ನಡೆಸಿಕೊಡಲಿದ್ದಾರೆ. ಮಾಧುರಿ ಕೌಶಿಕ್ ಹಾಗೂ ತಂಡ ಗಾಯನ ಪ್ರದರ್ಶನ ನೀಡಲಿದ್ದಾರೆ.</p>.<p>ಈ ಹಿಂದೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪದ್ಮಭೂಷಣ ಡಾ.ಎಂ.ಬಾಲಮುರುಳಿ ಕೃಷ್ಣ, ಪದ್ಮಭೂಷಣ ಡಾ.ಎಲ್.ಸುಭ್ರಮಣ್ಯಂ, ಪದ್ಮಭೂಷಣ ಎನ್.ರಾಜಮ್, ಪದ್ಮಭೂಷಣ ಪ್ರೊ.ಟಿ.ಎನ್.ಕೃಷ್ಣನ್, ಪ್ರೊ.ರಾಮರತ್ನಮ್, ಪದ್ಮಭೂಷಣ ಡಾ.ಆರ್.ಕೆ. ಶ್ರೀಕಾಂತ್ ಅವರಿಗೆ ’ಸಾಧನಾಚಾರ್ಯ’ ಬಿರದು ನೀಡಲಾಗಿತ್ತು.</p>.<p>ಸುಗಮ ಸಂಗೀತವನ್ನು ಪ್ರಚಾರ ಮಾಡಲು ಸಂಗೀತ ಶಿಕ್ಷಣ, ಕಾರ್ಯಕ್ರಮ, ವಾದ್ಯಗಳ ತರಬೇತಿ, ಸಂಗೀತ ತರಬೇತಿ ಕಾರ್ಯಗಾರ, ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ಎರಡು ದಶಕಗಳಿಂದ ಸ್ವರ ಸೌರಭ ನಡೆಸಿಕೊಂಡು ಬಂದಿದೆ. </p>.<p>ಪ್ರಸಿದ್ದ ವಾಯೋಲಿನ್ ವಾದಕ ಆರ್.ಆರ್. ಕೇಶವಮೂರ್ತಿ ಅವರು ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿಕೊಡುವ ಮೂಲಕ, ಈ ಕ್ಷೇತ್ರದಲ್ಲಿ ಅವರು ನೆಲೆಯೂರಲು ಕಾರಣರಾಗಿದ್ದಾರೆ. ಅವರು ಸಂಗೀತದ ಕುರಿತು ಬರೆದಿರುವ 13 ಪುಸ್ತಕಗಳು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾಗಿದೆ. ಅವರ ಆಶಯದಂತೆ ಸಂಗೀತ ವಿದ್ಯಾಸಾಗರ ಶ್ರೀ.ಆರ್.ಆರ್. ಕೇಶವಮೂರ್ತಿ ಪೌಂಡೇಶನ್ ಸಂಗೀತದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದೆ. </p>.<p>ಜಯನಗರದ 8ನೇ ಬ್ಲಾಕ್ನಲ್ಲಿರುವ ಜೆಎಸ್ಎಸ್ ಸಭಾಂಗಣದಲ್ಲಿ ಜುಲೈ.20ರ ಸಂಜೆ 4ಗಂಟೆಗೆ ಕಾರ್ಯಕ್ರಮ ಜರುಗಲಿದ್ದು, ಸಂಗೀತಾಸಕ್ತರು ಭಾಗವಹಿಸುವಂತೆ ಕೋರಿದ್ದಾರೆ. ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ನಾಡರಂಜನಿ ಸಂಗೀತ ಸಭಾ ಕಾರ್ಯದರ್ಶಿ ಜಿ.ಬಾಬು ಹಾಗೂ ಶಿಕ್ಷಣವಾದಿ ಶಾಮಸುಂದರ ಶರ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸ್ವರ ಸೌರಭವು ವಾರ್ಷಿಕ ಸಂಗೀತ ಕಾರ್ಯಕ್ರಮ ’ಗುರು ಸ್ಮೃತಿ’ಯನ್ನು ಸಂಗೀತ ವಿದ್ಯಾಸಾಗರ ಶ್ರೀ.ಆರ್.ಆರ್. ಕೇಶವಮೂರ್ತಿ ಪೌಂಡೇಶನ್ ಸಹಭಾಗಿತ್ವದಲ್ಲಿ ಆಚರಿಸುತ್ತಿದೆ. </p>.<p>ಕಾರ್ಯಕ್ರಮದಲ್ಲಿ ಪ್ರಸಿದ್ಧ ವಾಯೋಲಿನ್ ವಾದಕ ನಾಡಯೋಗಿ ವಿದ್ವಾನ್ ವಿ.ವಿ.ಸುಬ್ರಮಣ್ಯರಿಗೆ ’ಸಾಧನಾಚಾರ್ಯ’ ಬಿರದು ನೀಡಿ ಗೌರವಿಸಲಾಗುತ್ತದೆ. ಅವರು ಮಗ ವಿದ್ವಾನ್ ವಿ.ವಿ.ಎಸ್. ಮುರುಳಿ ಜೊತೆಗೂಡಿ ಪ್ರದರ್ಶನ ನೀಡಲಿದ್ದಾರೆ.</p>.<p>ವಿದ್ವಾನ್ ಎ.ರೇಣುಕಾ ಪ್ರಸಾದ್, ವಿದ್ವಾನ್ ಬಿ.ಎಸ್. ಪುರುಷೋತ್ತಮ್ ಅವರು ಕೂಡ ವಾಯೋಲಿನ್ ಪ್ರದರ್ಶನ ನಡೆಸಿಕೊಡಲಿದ್ದಾರೆ. ಮಾಧುರಿ ಕೌಶಿಕ್ ಹಾಗೂ ತಂಡ ಗಾಯನ ಪ್ರದರ್ಶನ ನೀಡಲಿದ್ದಾರೆ.</p>.<p>ಈ ಹಿಂದೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪದ್ಮಭೂಷಣ ಡಾ.ಎಂ.ಬಾಲಮುರುಳಿ ಕೃಷ್ಣ, ಪದ್ಮಭೂಷಣ ಡಾ.ಎಲ್.ಸುಭ್ರಮಣ್ಯಂ, ಪದ್ಮಭೂಷಣ ಎನ್.ರಾಜಮ್, ಪದ್ಮಭೂಷಣ ಪ್ರೊ.ಟಿ.ಎನ್.ಕೃಷ್ಣನ್, ಪ್ರೊ.ರಾಮರತ್ನಮ್, ಪದ್ಮಭೂಷಣ ಡಾ.ಆರ್.ಕೆ. ಶ್ರೀಕಾಂತ್ ಅವರಿಗೆ ’ಸಾಧನಾಚಾರ್ಯ’ ಬಿರದು ನೀಡಲಾಗಿತ್ತು.</p>.<p>ಸುಗಮ ಸಂಗೀತವನ್ನು ಪ್ರಚಾರ ಮಾಡಲು ಸಂಗೀತ ಶಿಕ್ಷಣ, ಕಾರ್ಯಕ್ರಮ, ವಾದ್ಯಗಳ ತರಬೇತಿ, ಸಂಗೀತ ತರಬೇತಿ ಕಾರ್ಯಗಾರ, ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ಎರಡು ದಶಕಗಳಿಂದ ಸ್ವರ ಸೌರಭ ನಡೆಸಿಕೊಂಡು ಬಂದಿದೆ. </p>.<p>ಪ್ರಸಿದ್ದ ವಾಯೋಲಿನ್ ವಾದಕ ಆರ್.ಆರ್. ಕೇಶವಮೂರ್ತಿ ಅವರು ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿಕೊಡುವ ಮೂಲಕ, ಈ ಕ್ಷೇತ್ರದಲ್ಲಿ ಅವರು ನೆಲೆಯೂರಲು ಕಾರಣರಾಗಿದ್ದಾರೆ. ಅವರು ಸಂಗೀತದ ಕುರಿತು ಬರೆದಿರುವ 13 ಪುಸ್ತಕಗಳು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾಗಿದೆ. ಅವರ ಆಶಯದಂತೆ ಸಂಗೀತ ವಿದ್ಯಾಸಾಗರ ಶ್ರೀ.ಆರ್.ಆರ್. ಕೇಶವಮೂರ್ತಿ ಪೌಂಡೇಶನ್ ಸಂಗೀತದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದೆ. </p>.<p>ಜಯನಗರದ 8ನೇ ಬ್ಲಾಕ್ನಲ್ಲಿರುವ ಜೆಎಸ್ಎಸ್ ಸಭಾಂಗಣದಲ್ಲಿ ಜುಲೈ.20ರ ಸಂಜೆ 4ಗಂಟೆಗೆ ಕಾರ್ಯಕ್ರಮ ಜರುಗಲಿದ್ದು, ಸಂಗೀತಾಸಕ್ತರು ಭಾಗವಹಿಸುವಂತೆ ಕೋರಿದ್ದಾರೆ. ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ನಾಡರಂಜನಿ ಸಂಗೀತ ಸಭಾ ಕಾರ್ಯದರ್ಶಿ ಜಿ.ಬಾಬು ಹಾಗೂ ಶಿಕ್ಷಣವಾದಿ ಶಾಮಸುಂದರ ಶರ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>