ಸಚಿವ ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದವರಿಗೆ ಹೆಚ್ಚಿನ ಸದಸ್ಯ ಸ್ಥಾನವನ್ನು ನೀಡಲಾಗಿದೆ. ಇತರ ವಿಧಾನಸಭಾ ಕ್ಷೇತ್ರದವರಿಗೂ ಪ್ರಾತಿನಿಧ್ಯ ಕೊಡಲಾಗಿದೆ. ಈ ಸಮಿತಿಗಳಿಗೆ ಈಗಾಗಲೇ ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ‘ಅಧಿಕಾರೇತರ’ರ ನೇಮಕದ ಬಗ್ಗೆ ಗುರುವಾರ ಆದೇಶ ಹೊರಬಿದ್ದಿದೆ.