<p><strong>ಬೀಳಗಿ</strong>: ಸಕಾಲಕ್ಕೆ ಸಾರಿಗೆ ಇಲಾಖೆ ಬಸ್ ಬಾರದ ಕಾರಣ ಪ್ರಯಾಣಿಕರಿಗೆ ನಿತ್ಯ ತೊಂದರೆಯಾಗುತ್ತಿದೆ.</p>.<p>ತಾಲ್ಲೂಕಿನ ಸುನಗ ಲಮಾಣಿ ತಾಂಡ ನಂ.1ದಲ್ಲಿ ಸತತ ನಾಲ್ಕು ದಿನಗಳಿಂದ ಬಸ್ ಸಕಾಲಕ್ಕೆ ಬಾರದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಈಚೆಗೆ ಪ್ರತಿಭಟನೆ ನಡೆಸಿದರು. </p>.<p>ಪ್ರತಿದಿನ ಬೆಳಿಗ್ಗೆ ಚಿಕ್ಕಾಲಗುಂಡಿ, ಅರಕೇರಿ ಗ್ರಾಮಗಳಿಂದ ಬರುವ ಬಸ್ ಸಂಪೂರ್ಣ ಭರ್ತಿಯಾಗಿ ಬರುತ್ತಿರುವುದರಿಂದ ಸುನಗ ತಾಂಡಾದ ವಿದ್ಯಾರ್ಥಿಗಳು ಬಸ್ಸಿನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಕಾರ್ಮಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಸುನಗ ಎಲ್ಟಿ ಗ್ರಾಮದಿಂದ ದಿನ 150 ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ನೊಂದ ವಿದ್ಯಾರ್ಥಿಗಳು.</p>.<p>ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಕಾಲಕ್ಕೆ ಬಸ್ ಸಂಚಾರ ಆರಂಭಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಸಾರಿಗೆ ಸಂಸ್ಥೆ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಇಲ್ಲಿನ ಜನ ಎಚ್ಚರಿಕೆ ನೀಡಿದರು.</p>.<p><strong> ಬೇಡಿಕೆ:</strong> ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿಬರಲು ಮುಂಜಾನೆ 8:30 ಗಂಟೆಗೆ ಸುನಗ ತಾಂಡಾ-1ರಿಂದ ಬೀಳಗಿಗೆ ಹೋಗಬೇಕು. ಮಧ್ಯಾಹ್ನ 4:15 ಕ್ಕೆ ಬೀಳಗಿ ಬಿಟ್ಟು ಸುನಗ ತಾಂಡಾ-1ಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>ಗ್ರಾಪಂ ಸದಸ್ಯರಾದ ಶಂಕರ ಜಾಧವ, ಆನಂದ ರಾಠೋಡ, ಶಿವಪ್ಪ ತಾಂಡಾ-1 ಸುಧೀಪ ಲಮಾಣಿ, ಆಕಾಶ ರಾಠೋಡ, ಶ್ರೀಕಾಂತ ಲಮಾಣಿ, ರೂಪಾ ಲಮಾಣಿ, ನೀಲಾ ಲಮಾಣಿ, ಸಂಜನಾ ಲಮಾಣಿ, ರೋಹಿತ ರಾಠೋಡ, ರಾಹುಲ ರಾಠೋಡ ಮತ್ತಿತರಿದ್ದರು.</p>.<p><strong>ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿತ್ಯ ಬೆಳಿಗ್ಗೆ 8.30ಕ್ಕೆ ಸುನಗ ಎಲ್ಟಿ ಗ್ರಾಮದಿಂದ ಬಸ್ ಸಂಚಾರ ವ್ಯವಸ್ಥೆ ಮಾಡುತ್ತೇವೆ</strong></p><p><strong>- ಐ.ಎಸ್.ನಾಯ್ಕರ ಘಟಕ ವ್ಯವಸ್ಥಾಪಕ ಬೀಳಗಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಳಗಿ</strong>: ಸಕಾಲಕ್ಕೆ ಸಾರಿಗೆ ಇಲಾಖೆ ಬಸ್ ಬಾರದ ಕಾರಣ ಪ್ರಯಾಣಿಕರಿಗೆ ನಿತ್ಯ ತೊಂದರೆಯಾಗುತ್ತಿದೆ.</p>.<p>ತಾಲ್ಲೂಕಿನ ಸುನಗ ಲಮಾಣಿ ತಾಂಡ ನಂ.1ದಲ್ಲಿ ಸತತ ನಾಲ್ಕು ದಿನಗಳಿಂದ ಬಸ್ ಸಕಾಲಕ್ಕೆ ಬಾರದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಈಚೆಗೆ ಪ್ರತಿಭಟನೆ ನಡೆಸಿದರು. </p>.<p>ಪ್ರತಿದಿನ ಬೆಳಿಗ್ಗೆ ಚಿಕ್ಕಾಲಗುಂಡಿ, ಅರಕೇರಿ ಗ್ರಾಮಗಳಿಂದ ಬರುವ ಬಸ್ ಸಂಪೂರ್ಣ ಭರ್ತಿಯಾಗಿ ಬರುತ್ತಿರುವುದರಿಂದ ಸುನಗ ತಾಂಡಾದ ವಿದ್ಯಾರ್ಥಿಗಳು ಬಸ್ಸಿನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಕಾರ್ಮಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಸುನಗ ಎಲ್ಟಿ ಗ್ರಾಮದಿಂದ ದಿನ 150 ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ನೊಂದ ವಿದ್ಯಾರ್ಥಿಗಳು.</p>.<p>ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಕಾಲಕ್ಕೆ ಬಸ್ ಸಂಚಾರ ಆರಂಭಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಸಾರಿಗೆ ಸಂಸ್ಥೆ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಇಲ್ಲಿನ ಜನ ಎಚ್ಚರಿಕೆ ನೀಡಿದರು.</p>.<p><strong> ಬೇಡಿಕೆ:</strong> ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿಬರಲು ಮುಂಜಾನೆ 8:30 ಗಂಟೆಗೆ ಸುನಗ ತಾಂಡಾ-1ರಿಂದ ಬೀಳಗಿಗೆ ಹೋಗಬೇಕು. ಮಧ್ಯಾಹ್ನ 4:15 ಕ್ಕೆ ಬೀಳಗಿ ಬಿಟ್ಟು ಸುನಗ ತಾಂಡಾ-1ಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>ಗ್ರಾಪಂ ಸದಸ್ಯರಾದ ಶಂಕರ ಜಾಧವ, ಆನಂದ ರಾಠೋಡ, ಶಿವಪ್ಪ ತಾಂಡಾ-1 ಸುಧೀಪ ಲಮಾಣಿ, ಆಕಾಶ ರಾಠೋಡ, ಶ್ರೀಕಾಂತ ಲಮಾಣಿ, ರೂಪಾ ಲಮಾಣಿ, ನೀಲಾ ಲಮಾಣಿ, ಸಂಜನಾ ಲಮಾಣಿ, ರೋಹಿತ ರಾಠೋಡ, ರಾಹುಲ ರಾಠೋಡ ಮತ್ತಿತರಿದ್ದರು.</p>.<p><strong>ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿತ್ಯ ಬೆಳಿಗ್ಗೆ 8.30ಕ್ಕೆ ಸುನಗ ಎಲ್ಟಿ ಗ್ರಾಮದಿಂದ ಬಸ್ ಸಂಚಾರ ವ್ಯವಸ್ಥೆ ಮಾಡುತ್ತೇವೆ</strong></p><p><strong>- ಐ.ಎಸ್.ನಾಯ್ಕರ ಘಟಕ ವ್ಯವಸ್ಥಾಪಕ ಬೀಳಗಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>