<p>ತೇರದಾಳ: ತಾಲ್ಲೂಕಿನ ಕಾಲತಿಪ್ಪಿಯ ಯುವ ಮುಖಂಡ ಶಂಕರ ಉಗಾರ ತಮ್ಮ ಜನ್ಮದಿನದ ಅಂಗವಾಗಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕಾಗಿ ₹7 ಸಾವಿರ ಮೌಲ್ಯದ 100 ಸ್ಟೀಲ್ ತಟ್ಟೆಗಳನ್ನು ವಿತರಿಸಿದ್ದಾರೆ.</p>.<p>ಶಂಕರ ಅವರು ಈ ಹಿಂದೆಯೂ ಇದೇ ಶಾಲೆಯ ಮಕ್ಕಳಿಗೆ ಅಧ್ಯಯನ ಸಾಮಾಗ್ರಿಗಳನ್ನು ವಿತರಿಸಿ ಜನ್ಮದಿನ ಆಚರಿಸಿಕೊಂಡಿದ್ದರು.</p>.<p>ಶಾಲೆಯ ಶಿಕ್ಷಕ ರಾಮು ಕೊಣ್ಣೂರ, ‘ಸರ್ಕಾರಿ ಶಾಲೆಗಳಿಗೆ ಸರ್ಕಾರವೇ ಸೌಲಭ್ಯಗಳನ್ನು ನೀಡಲಿ ಎಂದು ಬಯಸದೆ ತಮ್ಮಿಂದಲೂ ಸಾಧ್ಯವಾದಷ್ಟು ಕೊಡುಗೆ ನೀಡುವ ಗಣ್ಯರು ಇಲ್ಲಿರುವುದು ಖುಷಿ ತಂದಿದೆ’ ಎಂದರು.</p>.<p>ಶಂಕರ ಉಗಾರ ಅವರನ್ನು ಗೌರವಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ರಾಜು ಲಟ್ಟಿ, ವಿಠ್ಠಲ ಸವಸುದ್ದಿ, ಚಂದ್ರಶೇಖರ ಸನದಿ, ಹಣಮಂತ ಲಟ್ಟಿ, ಮಹೇಶ ತಿಮ್ಮಾಪೂರ, ಮುಖ್ಯ ಶಿಕ್ಷಕ ಎಂ.ಎಸ್. ಬಿರಾದಾರ, ಸುಜಾತಾ ಬಿರಾದಾರ, ಗೀತಾ ಪಾಟೀಲ, ತ್ರಿಶಲಾ ಉಗಾರೆ, ಪ್ರೇಮಾ ರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೇರದಾಳ: ತಾಲ್ಲೂಕಿನ ಕಾಲತಿಪ್ಪಿಯ ಯುವ ಮುಖಂಡ ಶಂಕರ ಉಗಾರ ತಮ್ಮ ಜನ್ಮದಿನದ ಅಂಗವಾಗಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕಾಗಿ ₹7 ಸಾವಿರ ಮೌಲ್ಯದ 100 ಸ್ಟೀಲ್ ತಟ್ಟೆಗಳನ್ನು ವಿತರಿಸಿದ್ದಾರೆ.</p>.<p>ಶಂಕರ ಅವರು ಈ ಹಿಂದೆಯೂ ಇದೇ ಶಾಲೆಯ ಮಕ್ಕಳಿಗೆ ಅಧ್ಯಯನ ಸಾಮಾಗ್ರಿಗಳನ್ನು ವಿತರಿಸಿ ಜನ್ಮದಿನ ಆಚರಿಸಿಕೊಂಡಿದ್ದರು.</p>.<p>ಶಾಲೆಯ ಶಿಕ್ಷಕ ರಾಮು ಕೊಣ್ಣೂರ, ‘ಸರ್ಕಾರಿ ಶಾಲೆಗಳಿಗೆ ಸರ್ಕಾರವೇ ಸೌಲಭ್ಯಗಳನ್ನು ನೀಡಲಿ ಎಂದು ಬಯಸದೆ ತಮ್ಮಿಂದಲೂ ಸಾಧ್ಯವಾದಷ್ಟು ಕೊಡುಗೆ ನೀಡುವ ಗಣ್ಯರು ಇಲ್ಲಿರುವುದು ಖುಷಿ ತಂದಿದೆ’ ಎಂದರು.</p>.<p>ಶಂಕರ ಉಗಾರ ಅವರನ್ನು ಗೌರವಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ರಾಜು ಲಟ್ಟಿ, ವಿಠ್ಠಲ ಸವಸುದ್ದಿ, ಚಂದ್ರಶೇಖರ ಸನದಿ, ಹಣಮಂತ ಲಟ್ಟಿ, ಮಹೇಶ ತಿಮ್ಮಾಪೂರ, ಮುಖ್ಯ ಶಿಕ್ಷಕ ಎಂ.ಎಸ್. ಬಿರಾದಾರ, ಸುಜಾತಾ ಬಿರಾದಾರ, ಗೀತಾ ಪಾಟೀಲ, ತ್ರಿಶಲಾ ಉಗಾರೆ, ಪ್ರೇಮಾ ರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>