<p><strong>ಬೆಂಗಳೂರು</strong>: ಭಾರತ ತಂಡದ ಕ್ರಿಕೆಟ್ ಪ್ರೇಮಿಗಳು ಬುಧವಾರ ದಿನವಿಡೀ ಮಳೆ ನಿಲ್ಲಲಿ, ಆಟ ನಡೆಯಲಿ ಎಂದು ಆಶಿಸಿದ್ದರು. ಆದರೆ ಗುರುವಾರ ಅದೇ ಅಭಿಮಾನಿಗಳು ‘ಹುಯ್ಯೋ ಹುಯ್ಯೋ ಮಳೆರಾಯ’ ಎಂದು ಹಾರೈಸುವ ಸ್ಥಿತಿ ನಿರ್ಮಾಣವಾಯಿತು. ಒಂದೊಮ್ಮೆ ಇಡೀ ದಿನ ಮಳೆ ಸುರಿದಿದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡವು ಕೇವಲ 46 ರನ್ಗಳಿಗೆ ಆಲೌಟ್ ಆಗುವುದು ತಪ್ಪುತ್ತಿತ್ತೋ ಏನೋ?</p>.<p>ಆದರೆ ದಟ್ಟ ಕಾರ್ಮೋಡಗಳಿದ್ದರೂ ಮಳೆ ಬರಲಿಲ್ಲ. ಮಂದಬೆಳಕು ಓಡಿಸಲು ಪ್ರಜ್ವಲಿಸಿದ ಫ್ಲೈಡ್ಲೈಟ್ ಬೆಳಕಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬಳಗ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಳಪೆ ಬ್ಯಾಟಿಂಗ್ ಮಾಡಿತು.ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವು ತನ್ನ ಮೂರನೇ ಅತಿ ಕಡಿಮೆ ಮೊತ್ತ ದಾಖಲಿಸುವಂತಾಯಿತು. ಅಲ್ಲದೇ ಸ್ವದೇಶದಲ್ಲಿ ದಾಖಲಿಸಿದ ಅತ್ಯಂತ ಕಡಿಮೆ ಸ್ಕೋರ್ ಕೂಡ ಇದಾಯಿತು.</p>.<p>‘ಬ್ಯಾಟಿಂಗ್ ಅಯ್ಕೆ ಮಾಡಿಕೊಂಡಿದ್ದು ನನ್ನ ಲೋಪ ’ ಎಂದು ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ತಪ್ಪೊಪ್ಪಿಕೊಂಡೂ ಆಯಿತು.</p>.<p>ಕಿವೀಸ್ ಬಳಗದ ಮೂವರು ವೇಗಿಗಳು ಕೇವಲ 31.2 ಓವರ್ಗಳಲ್ಲಿ ಆತಿಥೇಯ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಉದ್ಯಾನನಗರಿಯ ಕ್ರಿಕೆಟ್ಪ್ರೇಮಿಗಳ ಕಣ್ಮಣಿಗಳಾದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಸೇರಿದಂತೆ ಐವರು ಸೊನ್ನೆ ಸುತ್ತಿದರು. ತಾಳ್ಮೆರಹಿತ ಆಟ ಹಾಗೂ ಹೊಡೆತಗಳ ಆಯ್ಕೆಯಲ್ಲಿ ಎಡವಿದ್ದು ಬ್ಯಾಟರ್ಗಳಿಗೆ ಮುಳುವಾಯಿತು. ಶಿಸ್ತುಬದ್ಧ ಬೌಲಿಂಗ್ ಮಾಡಿದ ಕಿವೀಸ್ ತಂಡದ ವೇಗಿ ಮ್ಯಾಟ್ ಹೆನ್ರಿ ಐದು ವಿಕೆಟ್ಗಳ ಗೊಂಚಲು ಗಳಿಸಿದರು. ಇದೇ ಮೊದಲ ಬಾರಿ ಭಾರತ ಪ್ರವಾಸಕ್ಕೆ ಬಂದಿರುವ 23 ವರ್ಷದ ಹುಡುಗ ವಿಲಿಯಮ್ಸ್ ಓ ರೂರ್ಕಿಯ (22ಕ್ಕೆ4) ಸ್ವಿಂಗ್ ಎಸೆತಗಳ ಮುಂದೆ ಬ್ಯಾಟರ್ಗಳು ತಡಬಡಾಯಿಸಿದರು. </p>.<p>ಬಿಸಿಲು ಮೆಲ್ಲಗೇ ಏರುತ್ತಿದ್ದಾಗ ಇನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡದ ಬ್ಯಾಟರ್ಗಳು ಲೀಲಾಜಾಲವಾಗಿ ಬ್ಯಾಟ್ ಬೀಸಿದರು. 12.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಭಾರತದ ಲೆಕ್ಕ ಚುಕ್ತಾ ಮಾಡಿದರು. ಡೇವೊನ್ ಕಾನ್ವೆ (91; 105ಎಸೆತ) ಶತಕದ ಸನಿಹ ಎಡವಿದರೂ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಇದರಿಂದಾಗಿ ದಿನದಾಟದ ಮುಕ್ತಾಯಕ್ಕೆ ಕಿವೀಸ್ ತಂಡವು 50 ಓವರ್ಗಳಲ್ಲಿ 3 ವಿಕೆಟ್ಗಳಿಗೆ 180 ರನ್ ಗಳಿಸಿತು. ರಚಿನ್ ರವೀಂದ್ರ (ಬ್ಯಾಟಿಂಗ್ 22) ಮತ್ತು ಡ್ಯಾರಿಲ್ ಮಿಚೆಲ್ (ಬ್ಯಾಟಿಂಗ್ 14) ಕ್ರೀಸ್ನಲ್ಲಿದ್ದಾರೆ. ಭಾರತದ ಮೂವರು ಸ್ಪಿನ್ನರ್ಗಳಾದ ಕುಲದೀಪ್ ಯಾದವ್, ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು. ಆದರೆ ಫೀಲ್ಡಿಂಗ್ ಲೋಪಗಳು ಹೆಚ್ಚಿದ್ದವು. ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಅವರು ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುವಾಗ ತಲಾ ಒಂದು ಕ್ಯಾಚ್ ಕೈಬಿಟ್ಟರು.</p>.<p><strong>ಮಳೆ ನಿಂತು ಹೋದ ಮೇಲೆ..</strong></p>.<p>ಪಂದ್ಯದ ಮೊದಲ ದಿನದಾಟವು ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿತ್ತು. ಆದರೆ ಎರಡನೇ ದಿನದಾಟದ ಮಧ್ಯದಲ್ಲಿ ಮಳೆಯಿಂದಾಗಿ ಕೇವಲ ಅರ್ಧಗಂಟೆಯ ಆಟ ಸ್ಥಗಿತವಾಗಿತ್ತು. ಈ ಮಳೆ ಸುರಿಯುವ ಮುನ್ನ 13 ರನ್ಗಳಿಗೆ 3 ವಿಕೆಟ್ಗಳು (ರೋಹಿತ್, ವಿರಾಟ್ ಮತ್ತು ಸರ್ಫರಾಜ್) ಪತನವಾಗಿದ್ದವು. ಪಂತ್ ಮತ್ತು ಜೈಸ್ವಾಲ್ ಕ್ರೀಸ್ನಲ್ಲಿದ್ದರು. ಮಳೆ ನಿಂತ ನಂತರ ಮತ್ತೆ ಆಟ ಆರಂಭವಾಯಿತು. ಕೇವಲ 33 ರನ್ಗಳ ಅಂತರದಲ್ಲಿ 7 ವಿಕೆಟ್ಗಳು ಪತನವಾದವು.</p>.<p>ಈ ನಡುವೆ ಜೈಸ್ವಾಲ್ (13; 63ಎ) ಮತ್ತು ರಿಷಭ್ ಪಂತ್ (20; 49ಎ) ಇವರಿಬ್ಬರು ಮಾತ್ರ ಎರಡಂಕಿ ದಾಟಿದ ಬ್ಯಾಟರ್ಗಳಾದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 21 ರನ್ ಸೇರಿಸಿದರು. ಇನಿಂಗ್ಸ್ನಲ್ಲಿ ಜೈಸ್ವಾಲ್ (102ನಿಮಿಷ) ಉಳಿದೆಲ್ಲರಿಗಿಂತ ಅತಿ ಹೆಚ್ಚು ಸಮಯ ಕ್ರೀಸ್ನಲ್ಲಿದ್ದರು!</p>.<p>ಭಾರತದ ಇಡೀ ಇನಿಂಗ್ಸ್ನಲ್ಲಿ ದಾಖಲಾಗಿದ್ದು ಕೇವಲ 4 ಬೌಂಡರಿಗಳು ಮಾತ್ರ. ಪಂತ್ ಎರಡು ಮತ್ತು ಜೈಸ್ವಾಲ್ ಒಂದು ಬೌಂಡರಿ ದಾಖಲಿಸಿದರು. ತಂಡಕ್ಕೆ ಮೊದಲ ಬೌಂಡರಿ ದಾಖಲಾಗಿದ್ದು 13ನೇ ಓವರ್ನಲ್ಲಿ ಪಂತ್ ಮೂಲಕ. ಕೊನೆಯ ಹಂತದಲ್ಲಿ ಮೊಹಮ್ಮದ್ ಸಿರಾಜ್ (ಔಟಾಗದೆ 4) ಗಳಿಸಿದ ಬೌಂಡರಿ ಅಮೋಘವಾಗಿತ್ತು.</p>.<p><strong>ರಿಷಭ್ ಪಂತ್ಗೆ ಗಾಯ</strong> </p><p>ವಿಕೆಟ್ಕೀಪಿಂಗ್ ಮಾಡುವ ಸಂದರ್ಭದಲ್ಲಿ ಚೆಂಡು ಬಡಿದು ರಿಷಭ್ ಪಂತ್ ಗಾಯಗೊಂಡರು. 37ನೇ ಓವರ್ನಲ್ಲಿ ರವೀಂದ್ರ ಜಡೇಜ ಹಾಕಿದ ಎಸೆತವು ತಿರುವು ಪಡೆದು ಬ್ಯಾಟರ್ ಡೆವೊನ್ ಕಾನ್ವೆ ಅವರನ್ನು ಬೀಟ್ ಮಾಡಿ ಹಿಂದೆ ಸಾಗಿತು. ಅದನ್ನು ಹಿಡಿತಕ್ಕೆ ಪಡೆಯಲು ರಿಷಭ್ ಯತ್ನಿಸಿದರು. ಆದರೆ ಚೆಂಡು ಅವರ ಮೊಣಕಾಲಿಗೆ (ಪ್ಯಾಡ್ ಕವರ್ ಆಗಿರಲಿಲ್ಲ) ಬಡಿಯಿತು. ಅವರು ಈ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾಲಿನ ಭಾಗಕ್ಕೇ ಚೆಂಡು ಬಡಿದಿರುವುದರಿಂದ ಅಪಾರ ನೋವು ಅನುಭವಿಸಿದರು. ಇದರಿಂದ ಅವರು ನೋವಿನಿಂದ ನೆಲಕ್ಕೊರಗಿದರು. ಕೂಡಲೇ ಧಾವಿಸಿದ ತಂಡದ ಫಿಸಿಯೊ ಪ್ರಥಮ ಚಿಕಿತ್ಸೆ ನೀಡಿದರು. ಆದರೆ ನೋವು ಶಮನವಾಗದ ಕಾರಣ ಅವರನ್ನು ಡ್ರೆಸಿಂಗ್ ರೂಮ್ಗೆ ಕರೆದೊಯ್ಯಲಾಯಿತು. ಅವರು ನೆರವು ಸಿಬ್ಬಂದಿಯ ಆಸರೆಯೊಂದಿಗೆ ಕುಂಟುತ್ತಲೇ ಮೈದಾನ ತೊರೆದರು. ಅವರ ಬದಲಿಗೆ ಧ್ರುವ ಜುರೇಲ್ ಕೀಪಿಂಗ್ ನಿರ್ವಹಿಸಿದರು. ದಿನದಾಟದ ನಂತರ ಪತ್ರಿಕಾಗೋಷ್ಠಿಯಲ್ಲಿ ರಿಷಭ್ ಗಾಯದ ಕುರಿತು ಮಾಹಿತಿ ನೀಡಿದ ನಾಯಕ ರೋಹಿತ್ ಶರ್ಮಾ ’ರಿಷಭ್ ಗಾಯಗೊಂಡಿರುವುದು ದುರದೃಷ್ಟಕರ. ಅಪಘಾತದಲ್ಲಿ ಗಾಯವಾಗಿ ಚೇತರಿಸಿಕೊಂಡಿದ್ದ ಮೊಣಕಾಲಿಗೆ ಈಗ ಮತ್ತೆ ಪೆಟ್ಟು ಬಿದ್ದಿದೆ. ಊತ ಕೂಡ ಇದೆ. ವೈದ್ಯಕೀಯ ತಂಡವು ಚಿಕಿತ್ಸೆ ನೀಡುತ್ತಿದೆ. ನಾಳೆ ಬೆಳಿಗ್ಗೆ ಸ್ಥಿತಿ ಪರಿಶೀಲಿಸಿದ ನಂತರ ಅವರು ಕಣಕ್ಕಿಳಿಯುವ ಬಗ್ಗೆ ನಿರ್ಧರಿಸಲಾಗುವುದು’ ಎಂದರು. </p>.<p><strong>ಬ್ಯಾಟಿಂಗ್ ಆಯ್ಕೆ ನನ್ನ ನಿರ್ಧಾರ: ರೋಹಿತ್</strong></p>.<p>‘ನನ್ನ ತಂಡವು ಕೇವಲ 46 ರನ್ಗಳ ಕನಿಷ್ಠ ಮೊತ್ತಕ್ಕೆ ಕುಸಿದಿದ್ದು ಅತೀವ ಬೇಸರ ತರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರ ನನ್ನದೇ ಆಗಿತ್ತು. ಒಂದು ವರ್ಷದಲ್ಲಿ ಕೆಲವೇ ಕೆಲವು ಕೆಟ್ಟ ನಿರ್ಧಾರಗಳು ಅರಿವಿಲ್ಲದೇ ಆಗಿಬಿಡುತ್ತವೆ’–</p><p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ನಂತರ ಸುದ್ದಿಗೋಷ್ಠಿಗೆ ಬಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಹೇಳಿದ ಮಾತುಗಳಿವು. ಭಾರತ ತಂಡವು ಸ್ವದೇಶದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದರ ಕುರಿತು ಬೇರೆ ಯಾವುದೇ ಕಾರಣಗಳನ್ನೂ ಅವರು ಕೊಡಲಿಲ್ಲ. ಎಲ್ಲ ಹೊಣೆಯನ್ನೂ ತಮ್ಮ ಮೇಲೆಳೆದುಕೊಂಡರು. </p><p>‘ಪಿಚ್ ಅಂದಾಜು ಮಾಡುವಲ್ಲಿ ತಪ್ಪಾಯಿತು. ಅಂಕಣದಲ್ಲಿ ಹುಲ್ಲು ಗರಿಕೆಗಳು ಇಲ್ಲ ಅನಿಸಿದ್ದರಿಂದ ಮೊದಲ ಒಂದು ಅವಧಿಯಲ್ಲಿ ಬ್ಯಾಟಿಂಗ್ ಕಷ್ಟವಾಗಬಹುದು. ನಂತರ ಚೆಂಡು ತಿರುಗಲು ಆರಂಭಿಸುತ್ತದೆ ಎಂದು ಅಂದಾಜು ಮಾಡಿದ್ದೆವು. ಭಾರತದಲ್ಲಿ ಆಡುವಾಗ ಮೊದಲ ಅವಧಿಯಲ್ಲಿ ಯಾವಾಗಲೂ ಬ್ಯಾಟಿಂಗ್ ಮಾಡುವುದು ಕಷ್ಟವೇ. ಒಮ್ಮೆ ಪಿಚ್ ಹದಗೊಂಡಿತೆಂದರೆ ಸ್ಪಿನ್ನರ್ಗಳ ಆಟ ಶುರುವಾಗುತ್ತದೆ. ಆದ್ದರಿಂದ ಮೂವರು ಸ್ಪಿನ್ನರ್ (ಕುಲದೀಪ್ ಯಾದವ್ ಸೇರಿ) ಗಳೊಂದಿಗೆ ಕಣಕ್ಕಿಳಿದಿದ್ದೇವೆ’ ಎಂದರು.</p><p>‘ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಅನುಭವಿ ಆಟಗಾರರು ತಾವೇ ಮುಂದು ಬರುತ್ತಿರುವುದು ತಂಡದ ಹಿತದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ವಿರಾಟ್ ಕೊಹ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಆಡಲು ಬಂದರು. ಅದು ಅವರ ಸಹಮತದೊಂದಿಗೇ ಆದ ಬದಲಾವಣೆ. ಪಂತ್ ಮತ್ತು ರಾಹುಲ್ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಸರ್ಫರಾಜ್ ಖಾನ್ ಇದ್ದಾರೆ. ರಾಹುಲ್ ಅವರಿಗೆ 6ನೇ ಸ್ಥಾನದಲ್ಲಿ ತಮ್ಮ ಸಾಮರ್ಥ್ಯ ತೋರುವ ಅವಕಾಶ ಸಿಕ್ಕಿದೆ’ ಎಂದರು. </p>.<p><strong>ಆರ್ಸಿಬಿ ದಾಖಲೆ ಮುರಿದ ಗಂಭೀರ್!</strong></p><p> ನ್ಯೂಜಿಲೆಂಡ್ ಎದುರಿನ ಟೆಸ್ಟ್ನಲ್ಲಿ ಭಾರತ ತಂಡವು 46 ರನ್ಗಳಿಗೆ ಆಲೌಟ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಟ್ರೋಲ್ಗಳ ಮಹಾಪೂರವೇ ಉಕ್ಕಿ ಹರಿಯಿತು. ಅದರಲ್ಲೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಗುರಿಯಾಗಿಸಿಕೊಂಡ ಮೀಮ್ಗಳು ಸಂದೇಶಗಳು ಹೆಚ್ಚು ಹರಿದಾಡಿದವು. ಪ್ರಮುಖವಾಗಿ 2017ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಎದುರು 49 ರನ್ಗಳಿಗೆ ಆಲೌಟ್ ಆಗಿದ್ದ ಪಂದ್ಯದ ಕುರಿತಾಗಿತ್ತು. ಗಂಭೀರ್ ಆರ್ಸಿಬಿಯ ತವರೂರಿನಲ್ಲಿಯೇ ಆ ದಾಖಲೆ ಮುರಿದರು ಎಂಬ ವ್ಯಂಗ್ಯ ಹರಿದಾಡಿತು. ಈಡನ್ ಗಾರ್ಡನ್ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಕೆಕೆಆರ್. ತಂಡಕ್ಕೆ ಗಂಭೀರ್ ನಾಯಕರಾಗಿದ್ದರು. ಅಂದು ಆರ್ಸಿಬಿ 49 ರನ್ಗಳಿಗೆ ಆಲೌಟ್ ಆಗಿದ್ದು ಐಪಿಎಲ್ನಲ್ಲಿ ಈಗಲೂ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಪಂದ್ಯ ಆರಂಭದ ಎರಡು ದಿನಗಳ ಮುನ್ನ ಗಂಭೀರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ‘ಒಂದೇ ದಿನದಲ್ಲಿ 400 ರನ್ ಮಾಡಬಲ್ಲ ಸಮರ್ಥರು ನಮ್ಮ ತಂಡದಲ್ಲಿದ್ದಾರೆ‘ ಎಂಬ ಮಾತನ್ನು ಉಲ್ಲೇಖಿಸಿಯೂ ವ್ಯಂಗ್ಯ ಮಾಡಲಾಗುತ್ತಿದೆ.</p><p> <strong>ಹಗಲಿನಲ್ಲಿ ಹೊನಲು ಬೆಳಕು</strong> </p><p>ಗುರುವಾರ ಬೆಳಿಗ್ಗೆ ಆಟ ಆರಂಭವಾಗುವ ಹೊತ್ತಿನಲ್ಲಿ ಮಂದಬೆಳಕು ಇದ್ದ ಕಾರಣ ಫ್ಲಡ್ಲೈಟ್ಗಳ ಬಳಕೆ ಮಾಡಲಾಯಿತು. ಸಾಧಾರಣವಾಗಿ ಹಗಲು–ರಾತ್ರಿ ಪಂದ್ಯಗಳಲ್ಲಿ ಫ್ಲಡ್ಲೈಟ್ಗಳನ್ನು ಹಚ್ಚಲಾಗುತ್ತದೆ. ಆದರೆ ಪಂದ್ಯದ ವೇಳೆ ನಷ್ಟವಾಗದಿರಲು ಟೆಸ್ಟ್ನಲ್ಲಿಯೂ ಬಳಕೆ ಮಾಡಲಾಯಿತು. ಮಧ್ಯಾಹ್ನ ಬಿಸಿಲು ಬಂದಾಗ ದೀಪಗಳನ್ನು ಆರಿಸಲಾಯಿತು. 4 ಗಂಟೆಯ ನಂತರ ಮತ್ತೆ ದೀಪಗಳನ್ನು ಉರಿಸಿ ಬೆಳಕಿನ ಸಮತೋಲನ ಮಾಡಿ ಆಟ ಮುಂದುವರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಭಾರತ ತಂಡದ ಕ್ರಿಕೆಟ್ ಪ್ರೇಮಿಗಳು ಬುಧವಾರ ದಿನವಿಡೀ ಮಳೆ ನಿಲ್ಲಲಿ, ಆಟ ನಡೆಯಲಿ ಎಂದು ಆಶಿಸಿದ್ದರು. ಆದರೆ ಗುರುವಾರ ಅದೇ ಅಭಿಮಾನಿಗಳು ‘ಹುಯ್ಯೋ ಹುಯ್ಯೋ ಮಳೆರಾಯ’ ಎಂದು ಹಾರೈಸುವ ಸ್ಥಿತಿ ನಿರ್ಮಾಣವಾಯಿತು. ಒಂದೊಮ್ಮೆ ಇಡೀ ದಿನ ಮಳೆ ಸುರಿದಿದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡವು ಕೇವಲ 46 ರನ್ಗಳಿಗೆ ಆಲೌಟ್ ಆಗುವುದು ತಪ್ಪುತ್ತಿತ್ತೋ ಏನೋ?</p>.<p>ಆದರೆ ದಟ್ಟ ಕಾರ್ಮೋಡಗಳಿದ್ದರೂ ಮಳೆ ಬರಲಿಲ್ಲ. ಮಂದಬೆಳಕು ಓಡಿಸಲು ಪ್ರಜ್ವಲಿಸಿದ ಫ್ಲೈಡ್ಲೈಟ್ ಬೆಳಕಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬಳಗ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಳಪೆ ಬ್ಯಾಟಿಂಗ್ ಮಾಡಿತು.ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವು ತನ್ನ ಮೂರನೇ ಅತಿ ಕಡಿಮೆ ಮೊತ್ತ ದಾಖಲಿಸುವಂತಾಯಿತು. ಅಲ್ಲದೇ ಸ್ವದೇಶದಲ್ಲಿ ದಾಖಲಿಸಿದ ಅತ್ಯಂತ ಕಡಿಮೆ ಸ್ಕೋರ್ ಕೂಡ ಇದಾಯಿತು.</p>.<p>‘ಬ್ಯಾಟಿಂಗ್ ಅಯ್ಕೆ ಮಾಡಿಕೊಂಡಿದ್ದು ನನ್ನ ಲೋಪ ’ ಎಂದು ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ತಪ್ಪೊಪ್ಪಿಕೊಂಡೂ ಆಯಿತು.</p>.<p>ಕಿವೀಸ್ ಬಳಗದ ಮೂವರು ವೇಗಿಗಳು ಕೇವಲ 31.2 ಓವರ್ಗಳಲ್ಲಿ ಆತಿಥೇಯ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಉದ್ಯಾನನಗರಿಯ ಕ್ರಿಕೆಟ್ಪ್ರೇಮಿಗಳ ಕಣ್ಮಣಿಗಳಾದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಸೇರಿದಂತೆ ಐವರು ಸೊನ್ನೆ ಸುತ್ತಿದರು. ತಾಳ್ಮೆರಹಿತ ಆಟ ಹಾಗೂ ಹೊಡೆತಗಳ ಆಯ್ಕೆಯಲ್ಲಿ ಎಡವಿದ್ದು ಬ್ಯಾಟರ್ಗಳಿಗೆ ಮುಳುವಾಯಿತು. ಶಿಸ್ತುಬದ್ಧ ಬೌಲಿಂಗ್ ಮಾಡಿದ ಕಿವೀಸ್ ತಂಡದ ವೇಗಿ ಮ್ಯಾಟ್ ಹೆನ್ರಿ ಐದು ವಿಕೆಟ್ಗಳ ಗೊಂಚಲು ಗಳಿಸಿದರು. ಇದೇ ಮೊದಲ ಬಾರಿ ಭಾರತ ಪ್ರವಾಸಕ್ಕೆ ಬಂದಿರುವ 23 ವರ್ಷದ ಹುಡುಗ ವಿಲಿಯಮ್ಸ್ ಓ ರೂರ್ಕಿಯ (22ಕ್ಕೆ4) ಸ್ವಿಂಗ್ ಎಸೆತಗಳ ಮುಂದೆ ಬ್ಯಾಟರ್ಗಳು ತಡಬಡಾಯಿಸಿದರು. </p>.<p>ಬಿಸಿಲು ಮೆಲ್ಲಗೇ ಏರುತ್ತಿದ್ದಾಗ ಇನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡದ ಬ್ಯಾಟರ್ಗಳು ಲೀಲಾಜಾಲವಾಗಿ ಬ್ಯಾಟ್ ಬೀಸಿದರು. 12.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಭಾರತದ ಲೆಕ್ಕ ಚುಕ್ತಾ ಮಾಡಿದರು. ಡೇವೊನ್ ಕಾನ್ವೆ (91; 105ಎಸೆತ) ಶತಕದ ಸನಿಹ ಎಡವಿದರೂ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಇದರಿಂದಾಗಿ ದಿನದಾಟದ ಮುಕ್ತಾಯಕ್ಕೆ ಕಿವೀಸ್ ತಂಡವು 50 ಓವರ್ಗಳಲ್ಲಿ 3 ವಿಕೆಟ್ಗಳಿಗೆ 180 ರನ್ ಗಳಿಸಿತು. ರಚಿನ್ ರವೀಂದ್ರ (ಬ್ಯಾಟಿಂಗ್ 22) ಮತ್ತು ಡ್ಯಾರಿಲ್ ಮಿಚೆಲ್ (ಬ್ಯಾಟಿಂಗ್ 14) ಕ್ರೀಸ್ನಲ್ಲಿದ್ದಾರೆ. ಭಾರತದ ಮೂವರು ಸ್ಪಿನ್ನರ್ಗಳಾದ ಕುಲದೀಪ್ ಯಾದವ್, ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು. ಆದರೆ ಫೀಲ್ಡಿಂಗ್ ಲೋಪಗಳು ಹೆಚ್ಚಿದ್ದವು. ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಅವರು ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುವಾಗ ತಲಾ ಒಂದು ಕ್ಯಾಚ್ ಕೈಬಿಟ್ಟರು.</p>.<p><strong>ಮಳೆ ನಿಂತು ಹೋದ ಮೇಲೆ..</strong></p>.<p>ಪಂದ್ಯದ ಮೊದಲ ದಿನದಾಟವು ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿತ್ತು. ಆದರೆ ಎರಡನೇ ದಿನದಾಟದ ಮಧ್ಯದಲ್ಲಿ ಮಳೆಯಿಂದಾಗಿ ಕೇವಲ ಅರ್ಧಗಂಟೆಯ ಆಟ ಸ್ಥಗಿತವಾಗಿತ್ತು. ಈ ಮಳೆ ಸುರಿಯುವ ಮುನ್ನ 13 ರನ್ಗಳಿಗೆ 3 ವಿಕೆಟ್ಗಳು (ರೋಹಿತ್, ವಿರಾಟ್ ಮತ್ತು ಸರ್ಫರಾಜ್) ಪತನವಾಗಿದ್ದವು. ಪಂತ್ ಮತ್ತು ಜೈಸ್ವಾಲ್ ಕ್ರೀಸ್ನಲ್ಲಿದ್ದರು. ಮಳೆ ನಿಂತ ನಂತರ ಮತ್ತೆ ಆಟ ಆರಂಭವಾಯಿತು. ಕೇವಲ 33 ರನ್ಗಳ ಅಂತರದಲ್ಲಿ 7 ವಿಕೆಟ್ಗಳು ಪತನವಾದವು.</p>.<p>ಈ ನಡುವೆ ಜೈಸ್ವಾಲ್ (13; 63ಎ) ಮತ್ತು ರಿಷಭ್ ಪಂತ್ (20; 49ಎ) ಇವರಿಬ್ಬರು ಮಾತ್ರ ಎರಡಂಕಿ ದಾಟಿದ ಬ್ಯಾಟರ್ಗಳಾದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 21 ರನ್ ಸೇರಿಸಿದರು. ಇನಿಂಗ್ಸ್ನಲ್ಲಿ ಜೈಸ್ವಾಲ್ (102ನಿಮಿಷ) ಉಳಿದೆಲ್ಲರಿಗಿಂತ ಅತಿ ಹೆಚ್ಚು ಸಮಯ ಕ್ರೀಸ್ನಲ್ಲಿದ್ದರು!</p>.<p>ಭಾರತದ ಇಡೀ ಇನಿಂಗ್ಸ್ನಲ್ಲಿ ದಾಖಲಾಗಿದ್ದು ಕೇವಲ 4 ಬೌಂಡರಿಗಳು ಮಾತ್ರ. ಪಂತ್ ಎರಡು ಮತ್ತು ಜೈಸ್ವಾಲ್ ಒಂದು ಬೌಂಡರಿ ದಾಖಲಿಸಿದರು. ತಂಡಕ್ಕೆ ಮೊದಲ ಬೌಂಡರಿ ದಾಖಲಾಗಿದ್ದು 13ನೇ ಓವರ್ನಲ್ಲಿ ಪಂತ್ ಮೂಲಕ. ಕೊನೆಯ ಹಂತದಲ್ಲಿ ಮೊಹಮ್ಮದ್ ಸಿರಾಜ್ (ಔಟಾಗದೆ 4) ಗಳಿಸಿದ ಬೌಂಡರಿ ಅಮೋಘವಾಗಿತ್ತು.</p>.<p><strong>ರಿಷಭ್ ಪಂತ್ಗೆ ಗಾಯ</strong> </p><p>ವಿಕೆಟ್ಕೀಪಿಂಗ್ ಮಾಡುವ ಸಂದರ್ಭದಲ್ಲಿ ಚೆಂಡು ಬಡಿದು ರಿಷಭ್ ಪಂತ್ ಗಾಯಗೊಂಡರು. 37ನೇ ಓವರ್ನಲ್ಲಿ ರವೀಂದ್ರ ಜಡೇಜ ಹಾಕಿದ ಎಸೆತವು ತಿರುವು ಪಡೆದು ಬ್ಯಾಟರ್ ಡೆವೊನ್ ಕಾನ್ವೆ ಅವರನ್ನು ಬೀಟ್ ಮಾಡಿ ಹಿಂದೆ ಸಾಗಿತು. ಅದನ್ನು ಹಿಡಿತಕ್ಕೆ ಪಡೆಯಲು ರಿಷಭ್ ಯತ್ನಿಸಿದರು. ಆದರೆ ಚೆಂಡು ಅವರ ಮೊಣಕಾಲಿಗೆ (ಪ್ಯಾಡ್ ಕವರ್ ಆಗಿರಲಿಲ್ಲ) ಬಡಿಯಿತು. ಅವರು ಈ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾಲಿನ ಭಾಗಕ್ಕೇ ಚೆಂಡು ಬಡಿದಿರುವುದರಿಂದ ಅಪಾರ ನೋವು ಅನುಭವಿಸಿದರು. ಇದರಿಂದ ಅವರು ನೋವಿನಿಂದ ನೆಲಕ್ಕೊರಗಿದರು. ಕೂಡಲೇ ಧಾವಿಸಿದ ತಂಡದ ಫಿಸಿಯೊ ಪ್ರಥಮ ಚಿಕಿತ್ಸೆ ನೀಡಿದರು. ಆದರೆ ನೋವು ಶಮನವಾಗದ ಕಾರಣ ಅವರನ್ನು ಡ್ರೆಸಿಂಗ್ ರೂಮ್ಗೆ ಕರೆದೊಯ್ಯಲಾಯಿತು. ಅವರು ನೆರವು ಸಿಬ್ಬಂದಿಯ ಆಸರೆಯೊಂದಿಗೆ ಕುಂಟುತ್ತಲೇ ಮೈದಾನ ತೊರೆದರು. ಅವರ ಬದಲಿಗೆ ಧ್ರುವ ಜುರೇಲ್ ಕೀಪಿಂಗ್ ನಿರ್ವಹಿಸಿದರು. ದಿನದಾಟದ ನಂತರ ಪತ್ರಿಕಾಗೋಷ್ಠಿಯಲ್ಲಿ ರಿಷಭ್ ಗಾಯದ ಕುರಿತು ಮಾಹಿತಿ ನೀಡಿದ ನಾಯಕ ರೋಹಿತ್ ಶರ್ಮಾ ’ರಿಷಭ್ ಗಾಯಗೊಂಡಿರುವುದು ದುರದೃಷ್ಟಕರ. ಅಪಘಾತದಲ್ಲಿ ಗಾಯವಾಗಿ ಚೇತರಿಸಿಕೊಂಡಿದ್ದ ಮೊಣಕಾಲಿಗೆ ಈಗ ಮತ್ತೆ ಪೆಟ್ಟು ಬಿದ್ದಿದೆ. ಊತ ಕೂಡ ಇದೆ. ವೈದ್ಯಕೀಯ ತಂಡವು ಚಿಕಿತ್ಸೆ ನೀಡುತ್ತಿದೆ. ನಾಳೆ ಬೆಳಿಗ್ಗೆ ಸ್ಥಿತಿ ಪರಿಶೀಲಿಸಿದ ನಂತರ ಅವರು ಕಣಕ್ಕಿಳಿಯುವ ಬಗ್ಗೆ ನಿರ್ಧರಿಸಲಾಗುವುದು’ ಎಂದರು. </p>.<p><strong>ಬ್ಯಾಟಿಂಗ್ ಆಯ್ಕೆ ನನ್ನ ನಿರ್ಧಾರ: ರೋಹಿತ್</strong></p>.<p>‘ನನ್ನ ತಂಡವು ಕೇವಲ 46 ರನ್ಗಳ ಕನಿಷ್ಠ ಮೊತ್ತಕ್ಕೆ ಕುಸಿದಿದ್ದು ಅತೀವ ಬೇಸರ ತರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರ ನನ್ನದೇ ಆಗಿತ್ತು. ಒಂದು ವರ್ಷದಲ್ಲಿ ಕೆಲವೇ ಕೆಲವು ಕೆಟ್ಟ ನಿರ್ಧಾರಗಳು ಅರಿವಿಲ್ಲದೇ ಆಗಿಬಿಡುತ್ತವೆ’–</p><p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ನಂತರ ಸುದ್ದಿಗೋಷ್ಠಿಗೆ ಬಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಹೇಳಿದ ಮಾತುಗಳಿವು. ಭಾರತ ತಂಡವು ಸ್ವದೇಶದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದರ ಕುರಿತು ಬೇರೆ ಯಾವುದೇ ಕಾರಣಗಳನ್ನೂ ಅವರು ಕೊಡಲಿಲ್ಲ. ಎಲ್ಲ ಹೊಣೆಯನ್ನೂ ತಮ್ಮ ಮೇಲೆಳೆದುಕೊಂಡರು. </p><p>‘ಪಿಚ್ ಅಂದಾಜು ಮಾಡುವಲ್ಲಿ ತಪ್ಪಾಯಿತು. ಅಂಕಣದಲ್ಲಿ ಹುಲ್ಲು ಗರಿಕೆಗಳು ಇಲ್ಲ ಅನಿಸಿದ್ದರಿಂದ ಮೊದಲ ಒಂದು ಅವಧಿಯಲ್ಲಿ ಬ್ಯಾಟಿಂಗ್ ಕಷ್ಟವಾಗಬಹುದು. ನಂತರ ಚೆಂಡು ತಿರುಗಲು ಆರಂಭಿಸುತ್ತದೆ ಎಂದು ಅಂದಾಜು ಮಾಡಿದ್ದೆವು. ಭಾರತದಲ್ಲಿ ಆಡುವಾಗ ಮೊದಲ ಅವಧಿಯಲ್ಲಿ ಯಾವಾಗಲೂ ಬ್ಯಾಟಿಂಗ್ ಮಾಡುವುದು ಕಷ್ಟವೇ. ಒಮ್ಮೆ ಪಿಚ್ ಹದಗೊಂಡಿತೆಂದರೆ ಸ್ಪಿನ್ನರ್ಗಳ ಆಟ ಶುರುವಾಗುತ್ತದೆ. ಆದ್ದರಿಂದ ಮೂವರು ಸ್ಪಿನ್ನರ್ (ಕುಲದೀಪ್ ಯಾದವ್ ಸೇರಿ) ಗಳೊಂದಿಗೆ ಕಣಕ್ಕಿಳಿದಿದ್ದೇವೆ’ ಎಂದರು.</p><p>‘ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಅನುಭವಿ ಆಟಗಾರರು ತಾವೇ ಮುಂದು ಬರುತ್ತಿರುವುದು ತಂಡದ ಹಿತದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ವಿರಾಟ್ ಕೊಹ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಆಡಲು ಬಂದರು. ಅದು ಅವರ ಸಹಮತದೊಂದಿಗೇ ಆದ ಬದಲಾವಣೆ. ಪಂತ್ ಮತ್ತು ರಾಹುಲ್ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಸರ್ಫರಾಜ್ ಖಾನ್ ಇದ್ದಾರೆ. ರಾಹುಲ್ ಅವರಿಗೆ 6ನೇ ಸ್ಥಾನದಲ್ಲಿ ತಮ್ಮ ಸಾಮರ್ಥ್ಯ ತೋರುವ ಅವಕಾಶ ಸಿಕ್ಕಿದೆ’ ಎಂದರು. </p>.<p><strong>ಆರ್ಸಿಬಿ ದಾಖಲೆ ಮುರಿದ ಗಂಭೀರ್!</strong></p><p> ನ್ಯೂಜಿಲೆಂಡ್ ಎದುರಿನ ಟೆಸ್ಟ್ನಲ್ಲಿ ಭಾರತ ತಂಡವು 46 ರನ್ಗಳಿಗೆ ಆಲೌಟ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಟ್ರೋಲ್ಗಳ ಮಹಾಪೂರವೇ ಉಕ್ಕಿ ಹರಿಯಿತು. ಅದರಲ್ಲೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಗುರಿಯಾಗಿಸಿಕೊಂಡ ಮೀಮ್ಗಳು ಸಂದೇಶಗಳು ಹೆಚ್ಚು ಹರಿದಾಡಿದವು. ಪ್ರಮುಖವಾಗಿ 2017ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಎದುರು 49 ರನ್ಗಳಿಗೆ ಆಲೌಟ್ ಆಗಿದ್ದ ಪಂದ್ಯದ ಕುರಿತಾಗಿತ್ತು. ಗಂಭೀರ್ ಆರ್ಸಿಬಿಯ ತವರೂರಿನಲ್ಲಿಯೇ ಆ ದಾಖಲೆ ಮುರಿದರು ಎಂಬ ವ್ಯಂಗ್ಯ ಹರಿದಾಡಿತು. ಈಡನ್ ಗಾರ್ಡನ್ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಕೆಕೆಆರ್. ತಂಡಕ್ಕೆ ಗಂಭೀರ್ ನಾಯಕರಾಗಿದ್ದರು. ಅಂದು ಆರ್ಸಿಬಿ 49 ರನ್ಗಳಿಗೆ ಆಲೌಟ್ ಆಗಿದ್ದು ಐಪಿಎಲ್ನಲ್ಲಿ ಈಗಲೂ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಪಂದ್ಯ ಆರಂಭದ ಎರಡು ದಿನಗಳ ಮುನ್ನ ಗಂಭೀರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ‘ಒಂದೇ ದಿನದಲ್ಲಿ 400 ರನ್ ಮಾಡಬಲ್ಲ ಸಮರ್ಥರು ನಮ್ಮ ತಂಡದಲ್ಲಿದ್ದಾರೆ‘ ಎಂಬ ಮಾತನ್ನು ಉಲ್ಲೇಖಿಸಿಯೂ ವ್ಯಂಗ್ಯ ಮಾಡಲಾಗುತ್ತಿದೆ.</p><p> <strong>ಹಗಲಿನಲ್ಲಿ ಹೊನಲು ಬೆಳಕು</strong> </p><p>ಗುರುವಾರ ಬೆಳಿಗ್ಗೆ ಆಟ ಆರಂಭವಾಗುವ ಹೊತ್ತಿನಲ್ಲಿ ಮಂದಬೆಳಕು ಇದ್ದ ಕಾರಣ ಫ್ಲಡ್ಲೈಟ್ಗಳ ಬಳಕೆ ಮಾಡಲಾಯಿತು. ಸಾಧಾರಣವಾಗಿ ಹಗಲು–ರಾತ್ರಿ ಪಂದ್ಯಗಳಲ್ಲಿ ಫ್ಲಡ್ಲೈಟ್ಗಳನ್ನು ಹಚ್ಚಲಾಗುತ್ತದೆ. ಆದರೆ ಪಂದ್ಯದ ವೇಳೆ ನಷ್ಟವಾಗದಿರಲು ಟೆಸ್ಟ್ನಲ್ಲಿಯೂ ಬಳಕೆ ಮಾಡಲಾಯಿತು. ಮಧ್ಯಾಹ್ನ ಬಿಸಿಲು ಬಂದಾಗ ದೀಪಗಳನ್ನು ಆರಿಸಲಾಯಿತು. 4 ಗಂಟೆಯ ನಂತರ ಮತ್ತೆ ದೀಪಗಳನ್ನು ಉರಿಸಿ ಬೆಳಕಿನ ಸಮತೋಲನ ಮಾಡಿ ಆಟ ಮುಂದುವರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>