<p><strong>ಕೆರೂರ</strong>: ‘ಜೀವನದಲ್ಲಿ ಸರಳ ನಿರರ್ಗಳವಾಗಿ ತ್ರಿಭಾಷೆಗಳ ಮೇಲೆ ಹಿಡಿತ ಸಾಧಿಸಿದರೆ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಶಿಕ್ಷಣ ಇಲಾಖೆ ಬೆಳಗಾವಿ ಸಹ ನಿರ್ದೇಶಕ ವಾಲ್ಟರ್ ಎಚ್ ಡಿಮೊಲೋ ಹೇಳಿದರು.</p>.<p>ಅವರು ನೀರಬೂದಿಹಾಳ,ಕೆರಲಮಟ್ಟಿ,ಕೆರೂರ ಪ್ರೌಢ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಮಂಗಳವಾರ ಸಂವಾದ ನಡಿಸಿ ಮಕ್ಕಳ ಭವಿಷ್ಯದ ಬದುಕು ಕಟ್ಟಿಕೊಳ್ಳುವ ಬಗೆ ಕುರಿತು ತ್ರಿಭಾಷೆಗಳ ಕುರಿತು ವಿಸ್ತೃತ ಸಂವಾದ ನಡೆಸಿ ಮನ ಮುಟ್ಟುವಂತೆ ಭೋದನೆ ಮಾಡಿದರು.</p>.<p>ಜೀವನದಲ್ಲಿ ಬದುಕುವ ಮಾರ್ಗಕಂಡುಕೊಳ್ಳಲು ಆಂಗ್ಲ,ಕನ್ನಡ,ಹಿದಿ ಭಾಷೆಗಳ ಕಲಿಕೆ ಇಂದಿನ ದಿನಮಾನಗಳಲ್ಲಿ ಅನಿವಾರ್ಯವಾಗಿದೆ.ತ್ರಿಭಾಷಾ ಕಲಿಕೆಯಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಜೀವನ ಸಾಗಿಸಬಹುದು ಎಂದರು.</p>.<p>ವಿದ್ಯಾರ್ಥಿ ಕಲಿಕಾ ವೇಳೆಯಲ್ಲಿ ಪ್ರತಿನಿತ್ಯ ದಿನಚರಿ ರೂಡಿಸಿಕೊಂಡು ತಪ್ಪದೇ ಪಾಲಿಸಿದರೆ ಉತ್ತಮ ಅಂಕ ಗಳಿಕೆ ಜೊತೆಗೆ ಉತ್ತಮ ಸಂಸ್ಕೃತಿ ಹೊಂದಲು ಸಾಧ್ಯ ಇಂದಿನ ದಿನಗಳಲ್ಲಿ ಬಾಹ್ಯ ಪ್ರಪಂಚದಲ್ಲಿ ದಿನನಿತ್ಯ ಆಗು-ಹೋಗುಗಳ ಸಮಗ್ರ ಅರವಳಿಕೆ ಮೇಲೆ ನಿಗಾ ಇಟ್ಟರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.</p>.<p>ಮೇಲಕ್ಕೇರಲು ಹತ್ತನೇ ತರಗತಿ ಮೇಟ್ಟಲು</p>.<p>ವಿದ್ಯಾರ್ಥಿಗಳು ಜೀವನದಲ್ಲಿ ಮೇಲಕ್ಕೇರಲು ಹತ್ತನೇ ತರಗತಿ ಭದ್ರ ಬುನಾದಿ ಈ ವರ್ಷದಲ್ಲಿ ಬೇಕಾಬಿಟ್ಟಿ ಕಾಲ ಹರಣ ಮಾಡಿದರೆ ಭವಿಷ್ಯದ ಬದುಕು ಎಡವಟ್ಟು ನಿರ್ಧಾರ ನಿಮ್ಮ ಕೈಯಲ್ಲಿದೆ ಎಂದು ಮಾರ್ಮಿಕವಾಗಿ ಡಿಮೊಲೋ ಹೇಳಿದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ ಕುಂದರಗಿ,ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ ದೊಡ್ಡಪ್ಪನವರ, ಸಂಯೋಜಕ ಹಣಮಂತರಾಜು,ಎA.ಎ. ಹದ್ಲಿ,ಮುಖ್ಯಗುರುಗಳಾದ ಸಿ.ಎಸ್ ನಾಗನೂರ, ನಾಗರಾಜ ದೇಶಪಾಂಡೆ,ಬಿಎಚ್ ನಧಾಫ್,ಎಸ್.ಎಂ ನಧಾಫ್,ಜೆ.ಎಚ್ ಬಾರಕೇರ, ಎಸ್.ಎಂ ಜುಮ್ಮನ್ನವರ,ಈ ಸಂದರ್ಭದಲ್ಲಿ ಮೂರು ಶಾಲೆಗಳ ಸಿಬ್ಬಂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ</strong>: ‘ಜೀವನದಲ್ಲಿ ಸರಳ ನಿರರ್ಗಳವಾಗಿ ತ್ರಿಭಾಷೆಗಳ ಮೇಲೆ ಹಿಡಿತ ಸಾಧಿಸಿದರೆ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಶಿಕ್ಷಣ ಇಲಾಖೆ ಬೆಳಗಾವಿ ಸಹ ನಿರ್ದೇಶಕ ವಾಲ್ಟರ್ ಎಚ್ ಡಿಮೊಲೋ ಹೇಳಿದರು.</p>.<p>ಅವರು ನೀರಬೂದಿಹಾಳ,ಕೆರಲಮಟ್ಟಿ,ಕೆರೂರ ಪ್ರೌಢ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಮಂಗಳವಾರ ಸಂವಾದ ನಡಿಸಿ ಮಕ್ಕಳ ಭವಿಷ್ಯದ ಬದುಕು ಕಟ್ಟಿಕೊಳ್ಳುವ ಬಗೆ ಕುರಿತು ತ್ರಿಭಾಷೆಗಳ ಕುರಿತು ವಿಸ್ತೃತ ಸಂವಾದ ನಡೆಸಿ ಮನ ಮುಟ್ಟುವಂತೆ ಭೋದನೆ ಮಾಡಿದರು.</p>.<p>ಜೀವನದಲ್ಲಿ ಬದುಕುವ ಮಾರ್ಗಕಂಡುಕೊಳ್ಳಲು ಆಂಗ್ಲ,ಕನ್ನಡ,ಹಿದಿ ಭಾಷೆಗಳ ಕಲಿಕೆ ಇಂದಿನ ದಿನಮಾನಗಳಲ್ಲಿ ಅನಿವಾರ್ಯವಾಗಿದೆ.ತ್ರಿಭಾಷಾ ಕಲಿಕೆಯಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಜೀವನ ಸಾಗಿಸಬಹುದು ಎಂದರು.</p>.<p>ವಿದ್ಯಾರ್ಥಿ ಕಲಿಕಾ ವೇಳೆಯಲ್ಲಿ ಪ್ರತಿನಿತ್ಯ ದಿನಚರಿ ರೂಡಿಸಿಕೊಂಡು ತಪ್ಪದೇ ಪಾಲಿಸಿದರೆ ಉತ್ತಮ ಅಂಕ ಗಳಿಕೆ ಜೊತೆಗೆ ಉತ್ತಮ ಸಂಸ್ಕೃತಿ ಹೊಂದಲು ಸಾಧ್ಯ ಇಂದಿನ ದಿನಗಳಲ್ಲಿ ಬಾಹ್ಯ ಪ್ರಪಂಚದಲ್ಲಿ ದಿನನಿತ್ಯ ಆಗು-ಹೋಗುಗಳ ಸಮಗ್ರ ಅರವಳಿಕೆ ಮೇಲೆ ನಿಗಾ ಇಟ್ಟರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.</p>.<p>ಮೇಲಕ್ಕೇರಲು ಹತ್ತನೇ ತರಗತಿ ಮೇಟ್ಟಲು</p>.<p>ವಿದ್ಯಾರ್ಥಿಗಳು ಜೀವನದಲ್ಲಿ ಮೇಲಕ್ಕೇರಲು ಹತ್ತನೇ ತರಗತಿ ಭದ್ರ ಬುನಾದಿ ಈ ವರ್ಷದಲ್ಲಿ ಬೇಕಾಬಿಟ್ಟಿ ಕಾಲ ಹರಣ ಮಾಡಿದರೆ ಭವಿಷ್ಯದ ಬದುಕು ಎಡವಟ್ಟು ನಿರ್ಧಾರ ನಿಮ್ಮ ಕೈಯಲ್ಲಿದೆ ಎಂದು ಮಾರ್ಮಿಕವಾಗಿ ಡಿಮೊಲೋ ಹೇಳಿದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ ಕುಂದರಗಿ,ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ ದೊಡ್ಡಪ್ಪನವರ, ಸಂಯೋಜಕ ಹಣಮಂತರಾಜು,ಎA.ಎ. ಹದ್ಲಿ,ಮುಖ್ಯಗುರುಗಳಾದ ಸಿ.ಎಸ್ ನಾಗನೂರ, ನಾಗರಾಜ ದೇಶಪಾಂಡೆ,ಬಿಎಚ್ ನಧಾಫ್,ಎಸ್.ಎಂ ನಧಾಫ್,ಜೆ.ಎಚ್ ಬಾರಕೇರ, ಎಸ್.ಎಂ ಜುಮ್ಮನ್ನವರ,ಈ ಸಂದರ್ಭದಲ್ಲಿ ಮೂರು ಶಾಲೆಗಳ ಸಿಬ್ಬಂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>