<p><strong>ಲೋಕಾಪುರ:</strong> ‘ಭಾಷೆ ಕಲಿಕೆ ನಿರಂತರ. ಅದು ಒಂದು ಸಂಪರ್ಕಸಾಧನವಾಗಿದೆ’ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೃಷ್ಣಗೌಡರ ಹೇಳಿದರು.</p>.<p>ಪಟ್ಟಣದ ಸಿ.ಎಂ.ಪಂಚಕಟ್ಟಿಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೋಡಿ ದಾಖಲೆಗಳ ಐತಿಹಾಸಿಕ ಮಹತ್ವ ಎಂಬ ವಿಷಯದ ಕುರಿತು ಒಂದು ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸಿನ ಮುಕ್ತಾಯ ಸಮಾರಂಭದಲ್ಲಿ ಮಾತಾಡಿದರು.</p>.<p>‘ಮೋಡಿ ಲಿಪಿಯಂತಹ ದಾಖಲೆಗಳನ್ನು ಕಲಿಯುವುದರಿಂದ ಬೇರೆ ಬೇರೆ ಭಾಷೆಗಳನ್ನು ಅರಿಯಲು ಸಾಧ್ಯ. ಮೋಡಿ ದಾಖಲೆಗಳ ಅಧ್ಯಯನದಿಂದ ಸ್ಧಳೀಯ ಚರಿತ್ರೆ ಕಟ್ಟಿಕೊಡಲು ಸಾಧ್ಯ’ ಎಂದು ತಿಳಿಸಿದರು.</p>.<p>ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಮಾತನಾಡಿ, ‘ವಿದ್ಯಾರ್ಥಿಗಳು ಮೋಡಿಲಿಪಿ ಜ್ಞಾನವನ್ನು ಮುಂದುವರೆಸಿಕೊಂಡು ದೇಶದ ಅನೇಕ ಭಾಗಗಳಲ್ಲಿ ಮೋಡಿ ಲಿಪಿ ಅಧ್ಯಯನ ಮಾಡಿದರೆ ಹೊಸ ಹೊಸ ಸಂಶೋಧನೆ ಮಾಡಲು ಸಾದ್ಯವಾಗುತ್ತದೆ’ ಎಂದರು.</p>.<p>ಪ್ರಾಚಾರ್ಯ ಡಾ.ಎಸ್.ಪಿ.ಕೊಕಟನೂರ ಅಧ್ಯಕ್ಷತೆ ವಹಿಸಿದ್ದರು. ಕಾವ್ಯಾ ಪಾಟೀಲ, ಲಕ್ಷ್ಮೀ ಪಾಟೀಲ, ತಿಮ್ಮಾರೆಡ್ಡಿ, ಪ್ರೀತಿ ಮಿಲಾನಟ್ಟಿ,ಸಂಗಯ್ಯ ಗಣಾಚಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೋಕಾಪುರ:</strong> ‘ಭಾಷೆ ಕಲಿಕೆ ನಿರಂತರ. ಅದು ಒಂದು ಸಂಪರ್ಕಸಾಧನವಾಗಿದೆ’ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೃಷ್ಣಗೌಡರ ಹೇಳಿದರು.</p>.<p>ಪಟ್ಟಣದ ಸಿ.ಎಂ.ಪಂಚಕಟ್ಟಿಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೋಡಿ ದಾಖಲೆಗಳ ಐತಿಹಾಸಿಕ ಮಹತ್ವ ಎಂಬ ವಿಷಯದ ಕುರಿತು ಒಂದು ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸಿನ ಮುಕ್ತಾಯ ಸಮಾರಂಭದಲ್ಲಿ ಮಾತಾಡಿದರು.</p>.<p>‘ಮೋಡಿ ಲಿಪಿಯಂತಹ ದಾಖಲೆಗಳನ್ನು ಕಲಿಯುವುದರಿಂದ ಬೇರೆ ಬೇರೆ ಭಾಷೆಗಳನ್ನು ಅರಿಯಲು ಸಾಧ್ಯ. ಮೋಡಿ ದಾಖಲೆಗಳ ಅಧ್ಯಯನದಿಂದ ಸ್ಧಳೀಯ ಚರಿತ್ರೆ ಕಟ್ಟಿಕೊಡಲು ಸಾಧ್ಯ’ ಎಂದು ತಿಳಿಸಿದರು.</p>.<p>ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಮಾತನಾಡಿ, ‘ವಿದ್ಯಾರ್ಥಿಗಳು ಮೋಡಿಲಿಪಿ ಜ್ಞಾನವನ್ನು ಮುಂದುವರೆಸಿಕೊಂಡು ದೇಶದ ಅನೇಕ ಭಾಗಗಳಲ್ಲಿ ಮೋಡಿ ಲಿಪಿ ಅಧ್ಯಯನ ಮಾಡಿದರೆ ಹೊಸ ಹೊಸ ಸಂಶೋಧನೆ ಮಾಡಲು ಸಾದ್ಯವಾಗುತ್ತದೆ’ ಎಂದರು.</p>.<p>ಪ್ರಾಚಾರ್ಯ ಡಾ.ಎಸ್.ಪಿ.ಕೊಕಟನೂರ ಅಧ್ಯಕ್ಷತೆ ವಹಿಸಿದ್ದರು. ಕಾವ್ಯಾ ಪಾಟೀಲ, ಲಕ್ಷ್ಮೀ ಪಾಟೀಲ, ತಿಮ್ಮಾರೆಡ್ಡಿ, ಪ್ರೀತಿ ಮಿಲಾನಟ್ಟಿ,ಸಂಗಯ್ಯ ಗಣಾಚಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>