<p><strong>ಜಮಖಂಡಿ</strong>: ‘ಮೇಲಿಂದ ಮೇಲೆ ಈ ಭಾಗದಲ್ಲಿ ಪ್ರವಾಹವಾಗಲು ಕಾರಣ ತಿಳಿದು ತಜ್ಞರ ಸಮಿತಿ ರಚಿಸಿ, ಈ ಬಗ್ಗೆ ಅಧ್ಯಯನ ಮಾಡಿ ಕೃಷ್ಣಾ ನದಿ ತೀರದ ಜನರಿಗೆ ತೊಂದರೆಯಾಗದಂತೆ ಶಾಶತ್ವ ಪರಿಹಾರಕ್ಕೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು.</p>.<p>ತಾಲ್ಲೂಕಿನ ಚಿಕ್ಕಪಡಸಲಗಿ ಬ್ಯಾರೆಜ್, ಜಮಖಂಡಿ-ಜತ್ತ ಕಡಿತವಾಗಿರುವ ಜಂಬಗಿ ಹತ್ತಿರದ ರಾಜ್ಯ ಹೆದ್ದಾರಿಗೆ ಗುರುವಾರ ಬೇಟಿ ನೀಡಿ ಪರಿಶೀಲನೆ ಮಾತನಾಡಿದ ಅವರು, ‘2019ರ ನಂತರ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹವಾಗುತ್ತಿದೆ. ಸರ್ಕಾರ ಕೂಡಲೇ ಸ್ಪಂದಿಸಿ ಜನರ ಕಷ್ಟಗಳನ್ನು ಆಲಿಸಬೇಕು’ ಎಂದರು.</p>.<p>ಮಳೆ ಹಾಗೂ ಪ್ರವಾಹಕ್ಕೆ ಬಿದ್ದಿರುವ ಮನೆಗಳಿಗೆ ₹7 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.</p>.<p>‘ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರಿಗೆ ತೊಂದರೆಯಾಗುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇನ್ನೂ ಹಲವಾರು ಗ್ರಾಮದ ಸಂತ್ರಸ್ತರ ಜಾನುವಾರಗಳಿಗೆ ಮೇವು ಪೂರೈಕೆ ಮಾಡುತ್ತಿಲ್ಲ. ಕಾಳಜಿ ಕೇಂದ್ರ ತೆರೆದಿಲ್ಲ. ಕೂಡಲೇ ಸರ್ಕಾರ ಕಾರ್ಯಪ್ರವೃತರಾಗಬೇಕು’ ಎಂದರು.</p>.<p>ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ‘ಜಮಖಂಡಿ-ಜತ್ತ ರಸ್ತೆ ಜಲಾವೃತ್ತವಾಗಿದ್ದು, ಜಂಬಗಿ ಹತ್ತಿರದ ಕೃಷ್ಣಾ ನದಿಯಲ್ಲಿ ಕೋಟ್ಯಂತರ ಹಣ ಖರ್ಚುಮಾಡಿ ಸೇತುವೆ ನಿರ್ಮಾಣ ಮಾಡಿದ್ದಾರೆ. ಆದರೆ ಮುಂದೆ ಬೆಂಚಿ ಹತ್ತಿರ ಸಣ್ಣ ಒತ್ತು ಇದ್ದು ಅಲ್ಲಿ ರಸ್ತೆಯನ್ನು ಎತ್ತರ ಮಾಡಿಕೊಂಡರೆ ಜಮಖಂಡಿ-ಜತ್ತ ರಸ್ತೆ ಎಷ್ಟೆ ನೀರು ಬಂದರು ಯಾವುದೇ ತೊಂದರೆಯಾಗುವದಿಲ್ಲ, ಆದ್ದರಿಂದ ಈ ರಸ್ತೆಯನ್ನು ರಾಷ್ಟ್ರೀಯ ರಸ್ತೆಯನ್ನಾಗಿ ಮಾಡಬೇಕು’ ಎಂದು ಸಂಸದರಿಗೆ ಮನವಿ ಮಾಡಿದರು.</p>.<p>ತಾಲ್ಲೂಕಿನ ಆಲಗೂರ ಗ್ರಾಮದ ರೈತ ಸಿದ್ದಪ್ಪ ಅಡಹಳ್ಳಿ, ಬಾಲಕಿ ಸಮೃದ್ಧಿ ಸಿದ್ದಪ್ಪ ತಿಮ್ಮಪ್ಪನವರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನಪ್ಪಿರುವ ಕುಟುಂಬಕ್ಕೆ ಬೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದಿಂದ ನೀಡಿರುವ ₹5 ಲಕ್ಷ ಪರಿಹಾರದ ಪತ್ರವನ್ನು ನೀಡಿದರು.</p>.<p>ಸಂಸದ ಪಿ.ಸಿ.ಗದ್ದಿಗೌಡರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ತಹಶೀಲ್ದಾರ್ ಸದಾಶಿವ ಮಕ್ಕೋಜಿ, ಹಣಮಂತ ಮಾವಿನಮರದ, ಬಸವರಾಜ ಯಂಕಚ್ಚಿ, ಸಿ.ಟಿ.ಉಪಾಧ್ಯ, ಅಜಯ ಕಡಪಟ್ಟಿ, ಅರವಿಂದಗೌಡ ಪಾಟೀಲ್, ಮಲ್ಲು ದಾನಗೊಂಡ, ಪ್ರದೀಪ ನಂದೆಪ್ಪನವರ, ಗಣೇಶ ಶಿರಗಣ್ಣವರ, ಸಂಗಮೇಶ ದಳವಾಯಿ, ರಾಜು ಚಿಕನಾಳ, ಕುಷಾಲ ವಾಘಮೋರೆ, ಶ್ರೀಧರ ಕಂಬಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ‘ಮೇಲಿಂದ ಮೇಲೆ ಈ ಭಾಗದಲ್ಲಿ ಪ್ರವಾಹವಾಗಲು ಕಾರಣ ತಿಳಿದು ತಜ್ಞರ ಸಮಿತಿ ರಚಿಸಿ, ಈ ಬಗ್ಗೆ ಅಧ್ಯಯನ ಮಾಡಿ ಕೃಷ್ಣಾ ನದಿ ತೀರದ ಜನರಿಗೆ ತೊಂದರೆಯಾಗದಂತೆ ಶಾಶತ್ವ ಪರಿಹಾರಕ್ಕೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು.</p>.<p>ತಾಲ್ಲೂಕಿನ ಚಿಕ್ಕಪಡಸಲಗಿ ಬ್ಯಾರೆಜ್, ಜಮಖಂಡಿ-ಜತ್ತ ಕಡಿತವಾಗಿರುವ ಜಂಬಗಿ ಹತ್ತಿರದ ರಾಜ್ಯ ಹೆದ್ದಾರಿಗೆ ಗುರುವಾರ ಬೇಟಿ ನೀಡಿ ಪರಿಶೀಲನೆ ಮಾತನಾಡಿದ ಅವರು, ‘2019ರ ನಂತರ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹವಾಗುತ್ತಿದೆ. ಸರ್ಕಾರ ಕೂಡಲೇ ಸ್ಪಂದಿಸಿ ಜನರ ಕಷ್ಟಗಳನ್ನು ಆಲಿಸಬೇಕು’ ಎಂದರು.</p>.<p>ಮಳೆ ಹಾಗೂ ಪ್ರವಾಹಕ್ಕೆ ಬಿದ್ದಿರುವ ಮನೆಗಳಿಗೆ ₹7 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.</p>.<p>‘ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರಿಗೆ ತೊಂದರೆಯಾಗುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇನ್ನೂ ಹಲವಾರು ಗ್ರಾಮದ ಸಂತ್ರಸ್ತರ ಜಾನುವಾರಗಳಿಗೆ ಮೇವು ಪೂರೈಕೆ ಮಾಡುತ್ತಿಲ್ಲ. ಕಾಳಜಿ ಕೇಂದ್ರ ತೆರೆದಿಲ್ಲ. ಕೂಡಲೇ ಸರ್ಕಾರ ಕಾರ್ಯಪ್ರವೃತರಾಗಬೇಕು’ ಎಂದರು.</p>.<p>ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ‘ಜಮಖಂಡಿ-ಜತ್ತ ರಸ್ತೆ ಜಲಾವೃತ್ತವಾಗಿದ್ದು, ಜಂಬಗಿ ಹತ್ತಿರದ ಕೃಷ್ಣಾ ನದಿಯಲ್ಲಿ ಕೋಟ್ಯಂತರ ಹಣ ಖರ್ಚುಮಾಡಿ ಸೇತುವೆ ನಿರ್ಮಾಣ ಮಾಡಿದ್ದಾರೆ. ಆದರೆ ಮುಂದೆ ಬೆಂಚಿ ಹತ್ತಿರ ಸಣ್ಣ ಒತ್ತು ಇದ್ದು ಅಲ್ಲಿ ರಸ್ತೆಯನ್ನು ಎತ್ತರ ಮಾಡಿಕೊಂಡರೆ ಜಮಖಂಡಿ-ಜತ್ತ ರಸ್ತೆ ಎಷ್ಟೆ ನೀರು ಬಂದರು ಯಾವುದೇ ತೊಂದರೆಯಾಗುವದಿಲ್ಲ, ಆದ್ದರಿಂದ ಈ ರಸ್ತೆಯನ್ನು ರಾಷ್ಟ್ರೀಯ ರಸ್ತೆಯನ್ನಾಗಿ ಮಾಡಬೇಕು’ ಎಂದು ಸಂಸದರಿಗೆ ಮನವಿ ಮಾಡಿದರು.</p>.<p>ತಾಲ್ಲೂಕಿನ ಆಲಗೂರ ಗ್ರಾಮದ ರೈತ ಸಿದ್ದಪ್ಪ ಅಡಹಳ್ಳಿ, ಬಾಲಕಿ ಸಮೃದ್ಧಿ ಸಿದ್ದಪ್ಪ ತಿಮ್ಮಪ್ಪನವರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನಪ್ಪಿರುವ ಕುಟುಂಬಕ್ಕೆ ಬೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದಿಂದ ನೀಡಿರುವ ₹5 ಲಕ್ಷ ಪರಿಹಾರದ ಪತ್ರವನ್ನು ನೀಡಿದರು.</p>.<p>ಸಂಸದ ಪಿ.ಸಿ.ಗದ್ದಿಗೌಡರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ತಹಶೀಲ್ದಾರ್ ಸದಾಶಿವ ಮಕ್ಕೋಜಿ, ಹಣಮಂತ ಮಾವಿನಮರದ, ಬಸವರಾಜ ಯಂಕಚ್ಚಿ, ಸಿ.ಟಿ.ಉಪಾಧ್ಯ, ಅಜಯ ಕಡಪಟ್ಟಿ, ಅರವಿಂದಗೌಡ ಪಾಟೀಲ್, ಮಲ್ಲು ದಾನಗೊಂಡ, ಪ್ರದೀಪ ನಂದೆಪ್ಪನವರ, ಗಣೇಶ ಶಿರಗಣ್ಣವರ, ಸಂಗಮೇಶ ದಳವಾಯಿ, ರಾಜು ಚಿಕನಾಳ, ಕುಷಾಲ ವಾಘಮೋರೆ, ಶ್ರೀಧರ ಕಂಬಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>