<p><strong>ಮಹಾಲಿಂಗಪುರ</strong>: ಕಳೆದ ಒಂದು ವಾರದಿಂದ ತರಕಾರಿಗಳ ದರ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.</p>.<p>ಪಟ್ಟಣದ ಬನಶಂಕರಿ ದೇವಸ್ಥಾನದ ಎದುರು ಹಾಗೂ ಶುಕ್ರವಾರ ಬಸವನಗರ, ಶನಿವಾರ ಶಾಂತಿನಿಕೇತನ ಕಾಲೊನಿಯಲ್ಲಿ ತರಕಾರಿ ಸಂತೆ ನಡೆಯುತ್ತಿದೆ. ಮಂಗಳವಾರ ನಡೆಯುವ ಸಂತೆಗೆ ಸುತ್ತಲಿನ ಹತ್ತಾರು ಗ್ರಾಮಗಳ ಜನರು ಬರುತ್ತಾರೆ.</p>.<p>ಬರಗಾಲದಿಂದ ನೀರಿಲ್ಲದೆ ಬೆಳೆ ಒಣಗಿದ ಕಾರಣ ತರಕಾರಿಗಳ ದರ ಏರಿಕೆಯಾಗಿದೆ. ಇಳುವರಿ ಕುಸಿತಗೊಂಡ ಕಾರಣ ಮಾರುಕಟ್ಟೆಗೆ ತರಕಾರಿ ಪೂರೈಕೆ ಅತ್ಯಂತ ಕಡಿಮೆಯಾಗಿದೆ. ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ದರ ಏರಿಕೆಯ ಲಾಭ ರೈತನಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.</p>.<p>ಟೊಮೆಟೊ ಕೆ.ಜಿ.ಗೆ ₹40, ಹೀರೆಕಾಯಿ ₹80, ಹಸಿಮೆಣಸಿನಕಾಯಿ ₹80, ಸೌತೆಕಾಯಿ ₹40, ಈರುಳ್ಳಿ ₹25, ಬದನೆಕಾಯಿ ₹40, ಬೆಂಡೆಕಾಯಿ ₹60, ಚವಳಿಕಾಯಿ ₹60, ಆಲೂಗಡ್ಡೆ ₹40, ಬೀಟ್ರೂಟ್ ₹80ಕ್ಕೆ ಮಾರಾಟವಾಗಿತ್ತಿದೆ. ಬೀನ್ಸ್ ಹಾಗೂ ಕ್ಯಾರೆಟ್ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ₹10ಕ್ಕೆ ಮೂರು ನುಗ್ಗೆಕಾಯಿ, ಮೂರು ನಿಂಬೆಹಣ್ಣು ಸಿಗುತ್ತಿದೆ.</p>.<p>ಬೆಳ್ಳುಳ್ಳಿ ಕೆ.ಜಿ.ಗೆ ₹240, ಶುಂಠಿಗೆ ₹200 ಇದ್ದು, ಮೆಂತೆ ಸೊಪ್ಪು ಸಣ್ಣ ಕಟ್ಟಿಗೆ ₹30, ಕೊತ್ತಂಬರಿ ಕಟ್ಟಿಗೆ ₹10, ಎಲೆಕೋಸು ₹20ಕ್ಕೆ ಬಿಕರಿಯಾಗುತ್ತಿದೆ.</p>.<p>‘ತರಕಾರಿಗಳು ಸಮರ್ಪಕವಾಗಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ದರ ಕೊಂಚ ಏರಿಕೆಯಾಗಿದೆ. ಚೌಕಾಶಿ ಮಾಡಿ ಕಡಿಮೆ ದರ ಇರುವ ತರಕಾರಿಯನ್ನೇ ಗ್ರಾಹಕರು ಖರೀದಿಸುತ್ತಿದ್ದಾರೆ. ಹೆಚ್ಚು ದೆ ಇರುವ ತರಕಾರಿಯನ್ನು ಕಡಿಮೆ ಪ್ರಮಾಣ ಖರೀದಿ ಮಾಡುತ್ತಿದ್ದಾರೆ’ ಎಂದು ತರಕಾರಿ ವ್ಯಾಪಾರಿ ಬುರಾನಾ ಬಾಗವಾನ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ</strong>: ಕಳೆದ ಒಂದು ವಾರದಿಂದ ತರಕಾರಿಗಳ ದರ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.</p>.<p>ಪಟ್ಟಣದ ಬನಶಂಕರಿ ದೇವಸ್ಥಾನದ ಎದುರು ಹಾಗೂ ಶುಕ್ರವಾರ ಬಸವನಗರ, ಶನಿವಾರ ಶಾಂತಿನಿಕೇತನ ಕಾಲೊನಿಯಲ್ಲಿ ತರಕಾರಿ ಸಂತೆ ನಡೆಯುತ್ತಿದೆ. ಮಂಗಳವಾರ ನಡೆಯುವ ಸಂತೆಗೆ ಸುತ್ತಲಿನ ಹತ್ತಾರು ಗ್ರಾಮಗಳ ಜನರು ಬರುತ್ತಾರೆ.</p>.<p>ಬರಗಾಲದಿಂದ ನೀರಿಲ್ಲದೆ ಬೆಳೆ ಒಣಗಿದ ಕಾರಣ ತರಕಾರಿಗಳ ದರ ಏರಿಕೆಯಾಗಿದೆ. ಇಳುವರಿ ಕುಸಿತಗೊಂಡ ಕಾರಣ ಮಾರುಕಟ್ಟೆಗೆ ತರಕಾರಿ ಪೂರೈಕೆ ಅತ್ಯಂತ ಕಡಿಮೆಯಾಗಿದೆ. ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ದರ ಏರಿಕೆಯ ಲಾಭ ರೈತನಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.</p>.<p>ಟೊಮೆಟೊ ಕೆ.ಜಿ.ಗೆ ₹40, ಹೀರೆಕಾಯಿ ₹80, ಹಸಿಮೆಣಸಿನಕಾಯಿ ₹80, ಸೌತೆಕಾಯಿ ₹40, ಈರುಳ್ಳಿ ₹25, ಬದನೆಕಾಯಿ ₹40, ಬೆಂಡೆಕಾಯಿ ₹60, ಚವಳಿಕಾಯಿ ₹60, ಆಲೂಗಡ್ಡೆ ₹40, ಬೀಟ್ರೂಟ್ ₹80ಕ್ಕೆ ಮಾರಾಟವಾಗಿತ್ತಿದೆ. ಬೀನ್ಸ್ ಹಾಗೂ ಕ್ಯಾರೆಟ್ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ₹10ಕ್ಕೆ ಮೂರು ನುಗ್ಗೆಕಾಯಿ, ಮೂರು ನಿಂಬೆಹಣ್ಣು ಸಿಗುತ್ತಿದೆ.</p>.<p>ಬೆಳ್ಳುಳ್ಳಿ ಕೆ.ಜಿ.ಗೆ ₹240, ಶುಂಠಿಗೆ ₹200 ಇದ್ದು, ಮೆಂತೆ ಸೊಪ್ಪು ಸಣ್ಣ ಕಟ್ಟಿಗೆ ₹30, ಕೊತ್ತಂಬರಿ ಕಟ್ಟಿಗೆ ₹10, ಎಲೆಕೋಸು ₹20ಕ್ಕೆ ಬಿಕರಿಯಾಗುತ್ತಿದೆ.</p>.<p>‘ತರಕಾರಿಗಳು ಸಮರ್ಪಕವಾಗಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ದರ ಕೊಂಚ ಏರಿಕೆಯಾಗಿದೆ. ಚೌಕಾಶಿ ಮಾಡಿ ಕಡಿಮೆ ದರ ಇರುವ ತರಕಾರಿಯನ್ನೇ ಗ್ರಾಹಕರು ಖರೀದಿಸುತ್ತಿದ್ದಾರೆ. ಹೆಚ್ಚು ದೆ ಇರುವ ತರಕಾರಿಯನ್ನು ಕಡಿಮೆ ಪ್ರಮಾಣ ಖರೀದಿ ಮಾಡುತ್ತಿದ್ದಾರೆ’ ಎಂದು ತರಕಾರಿ ವ್ಯಾಪಾರಿ ಬುರಾನಾ ಬಾಗವಾನ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>