ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ | ಗುರುಪ್ರಸಾದ ಶ್ರೀಗೆ ನೋಟಿಸ್‌

Published : 15 ಸೆಪ್ಟೆಂಬರ್ 2024, 15:45 IST
Last Updated : 15 ಸೆಪ್ಟೆಂಬರ್ 2024, 15:45 IST
ಫಾಲೋ ಮಾಡಿ
Comments

ಜಮಖಂಡಿ: ಮೈಗೂರಿನ ಶಿವಾನಂದ ಮಠದ ಶಾಲಾ ಆವರಣದಲ್ಲಿ ಸೆ. 6 ರಂದು ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟ ನಡೆದ ವೇಳೆ ಪರಿಶಿಷ್ಟ ಸಮುದಾಯದವರಿಗೆ ವೀಕ್ಷಣೆಗೆ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಮಖಂಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅರ್ಚನಾ ಸಾನೆ ಅವರು ಗುರುಪ್ರಸಾದ ಶ್ರೀಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ.

‘ತಮ್ಮ ಅಧ್ಯಕ್ಷತೆಯಲ್ಲಿ ಇರುವ ಶಾಲೆ ಹಾಗೂ ಶಿವಾನಂದ ಮಠ ಸಾರ್ವಜನಿಕ ಮಠವಾಗಿರುವುದರಿಂದ ಗ್ರಾಮದ ಎಲ್ಲ ಜಾತಿ ಜನಾಂಗದವರಿಗೆ ಪ್ರವೇಶ ನೀಡುವುದು ತಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಮಠದ ಪೀಠಾಧಿ ಪತಿಗಳಾಗಿ ಜಾತಿ ತಾರತಮ್ಯ ತೊಲಗಿಸುವ ಕೆಲಸ ಮಾಡದೇ ಇರುವ ಕುರಿತು ಬಂದಿರುವ ಆರೋಪಗಳಿಗೆ ತಾವು ಒಂದು ವಾರದ ಒಳಗೆ ವಿವರಣೆಯನ್ನು ಕಾರ್ಯಾಲಯಕ್ಕೆ ಸಲ್ಲಿಸಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT