<p><strong>ಬನಶಂಕರಿ (ಬಾದಾಮಿ)</strong>: ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ಪೋಷಕರು ಮಗುವನ್ನು ಭಾನುವಾರ ತೆಪ್ಪದಲ್ಲಿ ಬಿಟ್ಟು ಹರಕೆ ಪೂರೈಸಿದರು.</p>.<p>ಬಹಳ ವರ್ಷಗಳಿಂದ ಮಕ್ಕಳಾಗದ ದಂಪತಿ ಮಕ್ಕಳಾದ ಮೇಲೆ ತೆಪ್ಪದಲ್ಲಿ ಬಿಡುತ್ತೇವೆ ಎಂದು ಬನಶಂಕರಿದೇವಿಗೆ ಹರಕೆ ಹೊತ್ತಿರುತ್ತಾರೆ. ಮಕ್ಕಳಾದ ಮೇಲೆ ನಾಲ್ಕು-ಐದು ವರ್ಷಗಳ ನಂತರ ಪುಷ್ಕರಣಿಯಲ್ಲಿ ತೆಪ್ಪದಲ್ಲಿ ಬಿಡುವ ಸಂಪ್ರದಾಯ ಅನೇಕ ದಶಕಗಳಿಂದ ನಡೆದು ಬಂದಿದೆ.</p>.<p>ರಥೋತ್ಸವದ ಮರುದಿನ ತೆಪ್ಪದಲ್ಲಿ ಬಿಡುವ ಸೇವೆ ನಡೆಯುತ್ತದೆ. ಚೊಳಚಗುಡ್ಡ ಗ್ರಾಮದ ಅಂಬಿಗೇರ ಕುಟುಂಬದವರು ತೆಪ್ಪ ಬಿಡುವ ಸೇವೆಯನ್ನು ಮಾಡುತ್ತಾರೆ.</p>.<p>ಈ ಬಾರಿ ಹರಿದ್ರಾತೀರ್ಥ ಪುಷ್ಕರಣಿಗೆ ನೀರು ತಡವಾಗಿ ಬಂದದ್ದರಿಂದ ರಥೋತ್ಸವದ ಮಾರನೇ ದಿನ ತೆಪ್ಪದ ಕಾರ್ಯ ನಡೆಯಲಿಲ್ಲ. ಭಾನುವಾರ ಮಗುವನ್ನು ತೆಪ್ಪದಲ್ಲಿ ಬಿಡುವ ಸೇವೆ ಆರಂಭವಾಗಿದ್ದು ಕಂಡು ಬಂದಿತು.</p>.<p>ಬಾಳೆದಿಂಡಿನಿಂದ ಆಯತಾಕಾರವಾಗಿ ತೆಪ್ಪವನ್ನು ರೂಪಿಸಿ ಅದರಲ್ಲಿ ಮಗುವನ್ನು ಕೂರಿಸಿ, ಅಂಬಿಗೇರರು ಹರದ್ರಾತೀರ್ಥದ ಪೂರ್ವದ ದಂಡೆಯಲ್ಲಿರುವ ಹತ್ತಿಮರದ ಸತ್ಯವ್ವ ದೇವಾಲಯದಿಂದ ತೆಪ್ಪವನ್ನು ನೂಕುತ್ತ ಪಶ್ಚಿಮದ ದಂಡೆಯ ಬನಶಂಕರಿದೇವಿ ಪಾದಗಟ್ಟೆ ವರೆಗೆ ಬರುವರು.</p>.<p>ಪೋಷಕರನ್ನು ಬಿಟ್ಟ ಮಗು ರೋಧಿಸುತ್ತ ತೆಪ್ಪದಲ್ಲಿ ಬರುವಾಗ ಅಂಬಿಗ ಸಮಾಧಾನ ಮಾಡುವರು. ದಂಡೆಯಲ್ಲಿದ್ದ ಪೋಷಕರೂ ಮಗುವನ್ನು ಜೋರಾಗಿ ಕೂಗುತ್ತ ಸಮಾಧಾನ ಮಾಡುವರು. ತೆಪ್ಪದಲ್ಲಿ ಮಗು ಬರುವಾಗ ಪೋಷಕರು ಕುತೂಹಲದಿಂದ ವೀಕ್ಷಿಸುವರು.</p>.<p>ಪುಷ್ಕರಣಿಯ ಪಶ್ಚಿಮದ ದಂಡೆಗೆ ಬಂದಾಗ ಪೋಷಕರು ಮಗುವಿಗೆ ಹೊಸ ಬಟ್ಟೆ, ಮಾಲೆ ಹಾಕಿ ಕುಂಕುಮದ ತಿಲಕವಿಟ್ಟು ಆರತಿ ಬೆಳಗುವರು. ನಂತರ ಬನಶಂಕರಿದೇವಿ ದರ್ಶನ ಪಡೆಯುವರು.</p>.<p>ಮೂರು ತಲೆಮಾರಿನಿಂದ ತೆಪ್ಪ ಬಿಡುವ ಸೇವೆಯನ್ನು ನಮ್ಮ ಕುಟುಂಬದವರು ಮುಂದುವರೆಸಿಕೊಂಡು ಬಂದಿದ್ದಾರೆ. </p><p><strong>-ಶಂಕ್ರಪ್ಪ ಅಂಬಿಗೇರ ಮಾರುತಿ ಅಂಬಿಗೇರ ಚೊಳಚಗುಡ್ಡ ಗ್ರಾಮ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬನಶಂಕರಿ (ಬಾದಾಮಿ)</strong>: ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ಪೋಷಕರು ಮಗುವನ್ನು ಭಾನುವಾರ ತೆಪ್ಪದಲ್ಲಿ ಬಿಟ್ಟು ಹರಕೆ ಪೂರೈಸಿದರು.</p>.<p>ಬಹಳ ವರ್ಷಗಳಿಂದ ಮಕ್ಕಳಾಗದ ದಂಪತಿ ಮಕ್ಕಳಾದ ಮೇಲೆ ತೆಪ್ಪದಲ್ಲಿ ಬಿಡುತ್ತೇವೆ ಎಂದು ಬನಶಂಕರಿದೇವಿಗೆ ಹರಕೆ ಹೊತ್ತಿರುತ್ತಾರೆ. ಮಕ್ಕಳಾದ ಮೇಲೆ ನಾಲ್ಕು-ಐದು ವರ್ಷಗಳ ನಂತರ ಪುಷ್ಕರಣಿಯಲ್ಲಿ ತೆಪ್ಪದಲ್ಲಿ ಬಿಡುವ ಸಂಪ್ರದಾಯ ಅನೇಕ ದಶಕಗಳಿಂದ ನಡೆದು ಬಂದಿದೆ.</p>.<p>ರಥೋತ್ಸವದ ಮರುದಿನ ತೆಪ್ಪದಲ್ಲಿ ಬಿಡುವ ಸೇವೆ ನಡೆಯುತ್ತದೆ. ಚೊಳಚಗುಡ್ಡ ಗ್ರಾಮದ ಅಂಬಿಗೇರ ಕುಟುಂಬದವರು ತೆಪ್ಪ ಬಿಡುವ ಸೇವೆಯನ್ನು ಮಾಡುತ್ತಾರೆ.</p>.<p>ಈ ಬಾರಿ ಹರಿದ್ರಾತೀರ್ಥ ಪುಷ್ಕರಣಿಗೆ ನೀರು ತಡವಾಗಿ ಬಂದದ್ದರಿಂದ ರಥೋತ್ಸವದ ಮಾರನೇ ದಿನ ತೆಪ್ಪದ ಕಾರ್ಯ ನಡೆಯಲಿಲ್ಲ. ಭಾನುವಾರ ಮಗುವನ್ನು ತೆಪ್ಪದಲ್ಲಿ ಬಿಡುವ ಸೇವೆ ಆರಂಭವಾಗಿದ್ದು ಕಂಡು ಬಂದಿತು.</p>.<p>ಬಾಳೆದಿಂಡಿನಿಂದ ಆಯತಾಕಾರವಾಗಿ ತೆಪ್ಪವನ್ನು ರೂಪಿಸಿ ಅದರಲ್ಲಿ ಮಗುವನ್ನು ಕೂರಿಸಿ, ಅಂಬಿಗೇರರು ಹರದ್ರಾತೀರ್ಥದ ಪೂರ್ವದ ದಂಡೆಯಲ್ಲಿರುವ ಹತ್ತಿಮರದ ಸತ್ಯವ್ವ ದೇವಾಲಯದಿಂದ ತೆಪ್ಪವನ್ನು ನೂಕುತ್ತ ಪಶ್ಚಿಮದ ದಂಡೆಯ ಬನಶಂಕರಿದೇವಿ ಪಾದಗಟ್ಟೆ ವರೆಗೆ ಬರುವರು.</p>.<p>ಪೋಷಕರನ್ನು ಬಿಟ್ಟ ಮಗು ರೋಧಿಸುತ್ತ ತೆಪ್ಪದಲ್ಲಿ ಬರುವಾಗ ಅಂಬಿಗ ಸಮಾಧಾನ ಮಾಡುವರು. ದಂಡೆಯಲ್ಲಿದ್ದ ಪೋಷಕರೂ ಮಗುವನ್ನು ಜೋರಾಗಿ ಕೂಗುತ್ತ ಸಮಾಧಾನ ಮಾಡುವರು. ತೆಪ್ಪದಲ್ಲಿ ಮಗು ಬರುವಾಗ ಪೋಷಕರು ಕುತೂಹಲದಿಂದ ವೀಕ್ಷಿಸುವರು.</p>.<p>ಪುಷ್ಕರಣಿಯ ಪಶ್ಚಿಮದ ದಂಡೆಗೆ ಬಂದಾಗ ಪೋಷಕರು ಮಗುವಿಗೆ ಹೊಸ ಬಟ್ಟೆ, ಮಾಲೆ ಹಾಕಿ ಕುಂಕುಮದ ತಿಲಕವಿಟ್ಟು ಆರತಿ ಬೆಳಗುವರು. ನಂತರ ಬನಶಂಕರಿದೇವಿ ದರ್ಶನ ಪಡೆಯುವರು.</p>.<p>ಮೂರು ತಲೆಮಾರಿನಿಂದ ತೆಪ್ಪ ಬಿಡುವ ಸೇವೆಯನ್ನು ನಮ್ಮ ಕುಟುಂಬದವರು ಮುಂದುವರೆಸಿಕೊಂಡು ಬಂದಿದ್ದಾರೆ. </p><p><strong>-ಶಂಕ್ರಪ್ಪ ಅಂಬಿಗೇರ ಮಾರುತಿ ಅಂಬಿಗೇರ ಚೊಳಚಗುಡ್ಡ ಗ್ರಾಮ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>