<p><strong>ಬಾದಾಮಿ</strong>: ‘ಹೊರವಲಯದ ಮೇಣಬಸದಿ ಪಕ್ಕದ ರಂಗನಾಥ ಬೆಟ್ಟದಲ್ಲಿ ಆದಿಮಾನವರು ಬಳಸಿದ್ದ ಶಿಲಾಯುಧಗಳನ್ನು ಶೋಧ ಮಾಡಲಾಗಿದೆ’ ಎಂದು ನಾಗಪುರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಾಗೈತಿಹಾಸ ಶಾಖೆಯ ಅಧೀಕ್ಷಕ ರಮೇಶ ಮೇಲಿನಮನಿ ಹೇಳಿದರು.</p>.<p>ಇಲ್ಲಿನ ಶಿವಯೋಗಮಂದಿರದಲ್ಲಿ ಈಚೆಗೆ ನಾಗಪುರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಾಗೈತಿಹಾಸ ಶಾಖೆಯ ಆಶ್ರಯದಲ್ಲಿ ಉತ್ತರಪ್ರದೇಶದ ನೋಯಿಡಾ ಪಂ. ದೀನದಯಾಳ ಉಪಾಧ್ಯಾಯ ಪುರಾತತ್ವ ಸಂಸ್ಥೆಯ ಪಿಜಿಡಿಜಿ ವಿದ್ಯಾರ್ಥಿಗಳಿಗೆ ಪ್ರಾಗೈತಿಹಾಸದ ತರಬೇತಿಯ ಸಮಾರೋಪದಲ್ಲಿ ಅವರು ತಿಳಿಸಿದರು.</p>.<p>‘ಬಾದಾಮಿ ಬೆಟ್ಟದ ಪರಿಸರದ ಮಲಪ್ರಭಾ ನದಿ ದಂಡೆಯ ಕಾತರಗಿ ಗ್ರಾಮದ ಬೆಟ್ಟ, ಶಿವಯೋಗಮಂದಿರ, ಮಹಾಕೂಟ, ಮತ್ತು ಸಿಡಿಲುಫಡಿ ಬೆಟ್ಟದಲ್ಲಿ ವಿದ್ಯಾರ್ಥಿಗಳು ಶಿಲಾಯುಧಗಳ ಶೋಧನೆ ಮಾಡಿದ್ದಾರೆ. ಪತ್ತೆಯಾದ ಶಿಲಾಯುಧಗಳ ನಿರ್ದಿಷ್ಟ ಮತ್ತು ನಿಖರವಾದ ಕಾಲವನ್ನು ಶೋಧಿಸಬೇಕಿದೆ’ ಎಂದರು.</p>.<p>‘ವಾರದ ಅವಧಿಯಲ್ಲಿ ಇತಿಹಾಸ ವಿದ್ವಾಂಸರಿಂದ ಪ್ರಾಗೈತಿಹಾಸ ಉಪನ್ಯಾಸ ಮತ್ತು ಬೆಟ್ಟದ ಪರಿಸರದಲ್ಲಿ ಆದಿಮಾನವರ ಪ್ರಾಚೀನ ನೆಲೆಗಳು, ಶಿಲಾಯುಧಗಳು, ಆದಿಮಾನವರು ರೂಪಿಸಿದ ಚಿತ್ರಕಲೆ ಶೋಧಿಸಿದ್ದು ಸಂತಸ ತಂದಿದೆ’ ಎಂದು ವಿದ್ಯಾರ್ಥಿನಿ ಗೀತಾಂಜಲಿ ರಾಯ್ ಅನಿಸಿಕೆ ವ್ಯಕ್ತಪಡಿಸಿದರು.</p>.<p>ಕೇರಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಜಿತಕುಮಾರ, ಪುಣೆ ಡೆಕ್ಕನ್ ಕಾಲೇಜಿನ ಪ್ರಾಧ್ಯಾಪಕಿ ವೀಣಾ ಮುಶ್ರೀಫ್, ಕರ್ನಾಟಕ ವಿವಿ ಪ್ರೊ.ರವಿ ಕೋರಿಶೆಟ್ಟಿ, ಕಲಬುರಗಿ ಸಹಾಯಕ ಪ್ರಾಧ್ಯಾಪಕ ಅರ್ಜುನರಾವ್, ಚೈನ್ನೈ ಮದ್ರಾಸ್ ವಿವಿ ಪ್ರಾಧ್ಯಾಪಕ ಜಿನೂ ಕೋಶಿ, ಪ್ರೊ. ಅಬಿಕ್ ಬಿಸ್ವಾಸ ಇದ್ದರು.</p>.<p>ಉತ್ತರಪ್ರದೇಶದ ನೋಯಿಡಾದ ಪಂ. ದೀನದಯಾಳ ಉಪಾಧ್ಯಾಯ ಪುರಾತತ್ವ ಸಂಸ್ಥೆಯ 2023-25ನೇ ಸಾಲಿನ 30ಕ್ಕೂ ಅಧಿಕ ಪಿಜಿಡಿಜಿ ವಿದ್ಯಾರ್ಥಿಗಳು ತರಬೇತಿಯಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ‘ಹೊರವಲಯದ ಮೇಣಬಸದಿ ಪಕ್ಕದ ರಂಗನಾಥ ಬೆಟ್ಟದಲ್ಲಿ ಆದಿಮಾನವರು ಬಳಸಿದ್ದ ಶಿಲಾಯುಧಗಳನ್ನು ಶೋಧ ಮಾಡಲಾಗಿದೆ’ ಎಂದು ನಾಗಪುರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಾಗೈತಿಹಾಸ ಶಾಖೆಯ ಅಧೀಕ್ಷಕ ರಮೇಶ ಮೇಲಿನಮನಿ ಹೇಳಿದರು.</p>.<p>ಇಲ್ಲಿನ ಶಿವಯೋಗಮಂದಿರದಲ್ಲಿ ಈಚೆಗೆ ನಾಗಪುರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಾಗೈತಿಹಾಸ ಶಾಖೆಯ ಆಶ್ರಯದಲ್ಲಿ ಉತ್ತರಪ್ರದೇಶದ ನೋಯಿಡಾ ಪಂ. ದೀನದಯಾಳ ಉಪಾಧ್ಯಾಯ ಪುರಾತತ್ವ ಸಂಸ್ಥೆಯ ಪಿಜಿಡಿಜಿ ವಿದ್ಯಾರ್ಥಿಗಳಿಗೆ ಪ್ರಾಗೈತಿಹಾಸದ ತರಬೇತಿಯ ಸಮಾರೋಪದಲ್ಲಿ ಅವರು ತಿಳಿಸಿದರು.</p>.<p>‘ಬಾದಾಮಿ ಬೆಟ್ಟದ ಪರಿಸರದ ಮಲಪ್ರಭಾ ನದಿ ದಂಡೆಯ ಕಾತರಗಿ ಗ್ರಾಮದ ಬೆಟ್ಟ, ಶಿವಯೋಗಮಂದಿರ, ಮಹಾಕೂಟ, ಮತ್ತು ಸಿಡಿಲುಫಡಿ ಬೆಟ್ಟದಲ್ಲಿ ವಿದ್ಯಾರ್ಥಿಗಳು ಶಿಲಾಯುಧಗಳ ಶೋಧನೆ ಮಾಡಿದ್ದಾರೆ. ಪತ್ತೆಯಾದ ಶಿಲಾಯುಧಗಳ ನಿರ್ದಿಷ್ಟ ಮತ್ತು ನಿಖರವಾದ ಕಾಲವನ್ನು ಶೋಧಿಸಬೇಕಿದೆ’ ಎಂದರು.</p>.<p>‘ವಾರದ ಅವಧಿಯಲ್ಲಿ ಇತಿಹಾಸ ವಿದ್ವಾಂಸರಿಂದ ಪ್ರಾಗೈತಿಹಾಸ ಉಪನ್ಯಾಸ ಮತ್ತು ಬೆಟ್ಟದ ಪರಿಸರದಲ್ಲಿ ಆದಿಮಾನವರ ಪ್ರಾಚೀನ ನೆಲೆಗಳು, ಶಿಲಾಯುಧಗಳು, ಆದಿಮಾನವರು ರೂಪಿಸಿದ ಚಿತ್ರಕಲೆ ಶೋಧಿಸಿದ್ದು ಸಂತಸ ತಂದಿದೆ’ ಎಂದು ವಿದ್ಯಾರ್ಥಿನಿ ಗೀತಾಂಜಲಿ ರಾಯ್ ಅನಿಸಿಕೆ ವ್ಯಕ್ತಪಡಿಸಿದರು.</p>.<p>ಕೇರಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಜಿತಕುಮಾರ, ಪುಣೆ ಡೆಕ್ಕನ್ ಕಾಲೇಜಿನ ಪ್ರಾಧ್ಯಾಪಕಿ ವೀಣಾ ಮುಶ್ರೀಫ್, ಕರ್ನಾಟಕ ವಿವಿ ಪ್ರೊ.ರವಿ ಕೋರಿಶೆಟ್ಟಿ, ಕಲಬುರಗಿ ಸಹಾಯಕ ಪ್ರಾಧ್ಯಾಪಕ ಅರ್ಜುನರಾವ್, ಚೈನ್ನೈ ಮದ್ರಾಸ್ ವಿವಿ ಪ್ರಾಧ್ಯಾಪಕ ಜಿನೂ ಕೋಶಿ, ಪ್ರೊ. ಅಬಿಕ್ ಬಿಸ್ವಾಸ ಇದ್ದರು.</p>.<p>ಉತ್ತರಪ್ರದೇಶದ ನೋಯಿಡಾದ ಪಂ. ದೀನದಯಾಳ ಉಪಾಧ್ಯಾಯ ಪುರಾತತ್ವ ಸಂಸ್ಥೆಯ 2023-25ನೇ ಸಾಲಿನ 30ಕ್ಕೂ ಅಧಿಕ ಪಿಜಿಡಿಜಿ ವಿದ್ಯಾರ್ಥಿಗಳು ತರಬೇತಿಯಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>