<p>ಬಾದಾಮಿ: ಎಲ್ಲೆಡೆ ನದಿ, ಕೆರೆಗಳು ಬತ್ತಿಹೋಗಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಆದರೆ, ಸಮೀಪದ ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳಾದ ಹಿರೇ ಮಹಾಕೂಟೇಶ್ವರ ಮತ್ತು ಚಿಕ್ಕ ಮಹಾಕೂಟೇಶ್ವರ ದೇವಾಲಯ ಪಕ್ಕದ ಪುಷ್ಕರಣಿಗಳು ಬೇಸಿಗೆಯಲ್ಲೂ ಭರ್ತಿಯಾಗಿವೆ.</p>.<p>ಅಂದಾಜು 40 ಕಿ.ಮೀ. ವಿಸ್ತಾರದ ಇಳಿಜಾರು ಕಣಿವೆ ಪ್ರದೇಶದಲ್ಲಿ ಚಾಲುಕ್ಯ ದೊರೆಗಳು ಕ್ರಿ.ಶ 6ನೇ ಶತಮಾನದಲ್ಲಿ ಶೈವ ದೇವಾಲಯಗಳನ್ನು ನಿರ್ಮಿಸಿದ್ದರು. ಈಶ್ವರಲಿಂಗುವಿನ ಪೂಜೆಗೆ ಪುಷ್ಕರಣಿಗಳನ್ನು ನಿರ್ಮಿಸಿದ್ದರು. 1,500 ವರ್ಷಗಳಿಂದಲೂ ಪುಷ್ಕರಣಿಗಳು ಸದಾ ನೀರಿನಿಂದ ತುಂಬಿರುತ್ತವೆ.</p>.<p>ಹಿರೇ ಮಹಾಕೂಟಕ್ಕೆ ಹಳೇ ಮಹಾಕೂಟ (ಮಾಗಡ) ಎಂದು ಕರೆದರೆ ಚಿಕ್ಕ ಮಹಾಕೂಟಕ್ಕೆ ಹೊಸ ಮಹಾಕೂಟ (ಮಾಗಡ) ಎಂದು ಜನರು ಕರೆಯುತ್ತಾರೆ. ಎಂಟು ಅಡಿ ಆಳದ ಪುಷ್ಕರಣಿಗಳಲ್ಲಿ ನೀರಿನ ಬುಗ್ಗೆ ಚಿಮ್ಮುತ್ತಿದೆ. ಈಗಿನ ಭೂಗರ್ಭ ಶಾಸ್ತ್ರಜ್ಞರನ್ನೂ ಇದು ಅಚ್ಚರಿಗೊಳಿಸುತ್ತಿದೆ.</p>.<p>ಹಿರೇ ಮಹಾಕೂಟೇಶ್ವರ ದೇವಾಲಯದ ಎದುರಿನ ಪುಷ್ಕರಣಿಯಲ್ಲಿ ನೀರು ಕಾಲುವೆಯಂತೆ ಹರಿದು ಬರುವುದು. ಚಿಕ್ಕ ಮಹಾಕೂಟೇಶ್ವರ ದೇವಾಲಯದ ಸಮೀಪ ಚಿಕ್ಕ ಕಾಶಿ (ಹೊಂಡ) ಪುಷ್ಕರಣಿ ಮತ್ತು ವಿಶಾಲವಾದ ವಿಷ್ಣು ಪುಷ್ಕರಣಿ ಇದೆ. ಭಕ್ತರು ಎರಡೂ ಪುಷ್ಕರಣಿಗಳಲ್ಲಿ ಪುಣ್ಯಸ್ನಾನ ಮಾಡುವರು.</p>.<p>‘ಪುಷ್ಕರಣಿಯಿಂದ ನೀರು ಹರಿದು ಹೋಗಲು ಕಾಲುವೆಗಳನ್ನು ನಿರ್ಮಿಸಲಾಗಿದೆ. ಈ ನೀರು ಬಳಸಿ ರೈತರು ತೆಂಗು , ಬಾಳೆ, ಲಿಂಬೆ, ಅಡಿಕೆ, ಎಲೆಬಳ್ಳಿ ಬೆಳೆ ಬೆಳೆಯುತ್ತಾರೆ. ರೈತರಿಗೆ ಪುಷ್ಕರಣಿಗಳು ವರದಾನವಾಗಿವೆ’ ಎಂದು ರೈತ ಶಿವಯ್ಯ ಹೇಳಿದರು.</p>.<p>‘2014-15 ಮತ್ತು 2015-16ರಲ್ಲಿ ಮಳೆ ಇಲ್ಲದಾಗಲೂ ಪುಷ್ಕರಣಿಗಳಲ್ಲಿ ನೀರು ಭರ್ತಿಯಾಗಿತ್ತು. ಕಳೆದ ವರ್ಷ ಮಳೆ ಕಡಿಮೆಯಾದರೂ ಪುಷ್ಕರಣಿಯಲ್ಲಿ ನೀರು ಕಡಿಮೆಯಾಗಿಲ್ಲ. ಬನಶಂಕರಿ ದೇವಾಲಯದ ಎರಡು ಪುಷ್ಕರಣಿಗಳು, ಸರಸ್ವತಿ ಹಳ್ಳ ಮತ್ತು ಕೆಂದೂರ ಕೆರೆ ಬತ್ತಿಹೋಗಿ ಎರಡು ದಶಕಗಳು ಸಂದಿವೆ’ ಎಂದು ಭಕ್ತರು ಹೇಳಿದರು.</p>.<p> ಹಿರೇ ಮಹಾಕೂಟೇಶ್ವರ, ಚಿಕ್ಕ ಮಹಾಕೂಟೇಶ್ವರ ದೇವಾಲಯ ಎಂಟು ಅಡಿ ಆಳದ ಪುಷ್ಕರಣಿಗಳಲ್ಲಿ ನೀರಿನ ಬುಗ್ಗೆ 1,500 ವರ್ಷಗಳಿಂದ ನಿರಂತರ ನೀರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾದಾಮಿ: ಎಲ್ಲೆಡೆ ನದಿ, ಕೆರೆಗಳು ಬತ್ತಿಹೋಗಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಆದರೆ, ಸಮೀಪದ ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳಾದ ಹಿರೇ ಮಹಾಕೂಟೇಶ್ವರ ಮತ್ತು ಚಿಕ್ಕ ಮಹಾಕೂಟೇಶ್ವರ ದೇವಾಲಯ ಪಕ್ಕದ ಪುಷ್ಕರಣಿಗಳು ಬೇಸಿಗೆಯಲ್ಲೂ ಭರ್ತಿಯಾಗಿವೆ.</p>.<p>ಅಂದಾಜು 40 ಕಿ.ಮೀ. ವಿಸ್ತಾರದ ಇಳಿಜಾರು ಕಣಿವೆ ಪ್ರದೇಶದಲ್ಲಿ ಚಾಲುಕ್ಯ ದೊರೆಗಳು ಕ್ರಿ.ಶ 6ನೇ ಶತಮಾನದಲ್ಲಿ ಶೈವ ದೇವಾಲಯಗಳನ್ನು ನಿರ್ಮಿಸಿದ್ದರು. ಈಶ್ವರಲಿಂಗುವಿನ ಪೂಜೆಗೆ ಪುಷ್ಕರಣಿಗಳನ್ನು ನಿರ್ಮಿಸಿದ್ದರು. 1,500 ವರ್ಷಗಳಿಂದಲೂ ಪುಷ್ಕರಣಿಗಳು ಸದಾ ನೀರಿನಿಂದ ತುಂಬಿರುತ್ತವೆ.</p>.<p>ಹಿರೇ ಮಹಾಕೂಟಕ್ಕೆ ಹಳೇ ಮಹಾಕೂಟ (ಮಾಗಡ) ಎಂದು ಕರೆದರೆ ಚಿಕ್ಕ ಮಹಾಕೂಟಕ್ಕೆ ಹೊಸ ಮಹಾಕೂಟ (ಮಾಗಡ) ಎಂದು ಜನರು ಕರೆಯುತ್ತಾರೆ. ಎಂಟು ಅಡಿ ಆಳದ ಪುಷ್ಕರಣಿಗಳಲ್ಲಿ ನೀರಿನ ಬುಗ್ಗೆ ಚಿಮ್ಮುತ್ತಿದೆ. ಈಗಿನ ಭೂಗರ್ಭ ಶಾಸ್ತ್ರಜ್ಞರನ್ನೂ ಇದು ಅಚ್ಚರಿಗೊಳಿಸುತ್ತಿದೆ.</p>.<p>ಹಿರೇ ಮಹಾಕೂಟೇಶ್ವರ ದೇವಾಲಯದ ಎದುರಿನ ಪುಷ್ಕರಣಿಯಲ್ಲಿ ನೀರು ಕಾಲುವೆಯಂತೆ ಹರಿದು ಬರುವುದು. ಚಿಕ್ಕ ಮಹಾಕೂಟೇಶ್ವರ ದೇವಾಲಯದ ಸಮೀಪ ಚಿಕ್ಕ ಕಾಶಿ (ಹೊಂಡ) ಪುಷ್ಕರಣಿ ಮತ್ತು ವಿಶಾಲವಾದ ವಿಷ್ಣು ಪುಷ್ಕರಣಿ ಇದೆ. ಭಕ್ತರು ಎರಡೂ ಪುಷ್ಕರಣಿಗಳಲ್ಲಿ ಪುಣ್ಯಸ್ನಾನ ಮಾಡುವರು.</p>.<p>‘ಪುಷ್ಕರಣಿಯಿಂದ ನೀರು ಹರಿದು ಹೋಗಲು ಕಾಲುವೆಗಳನ್ನು ನಿರ್ಮಿಸಲಾಗಿದೆ. ಈ ನೀರು ಬಳಸಿ ರೈತರು ತೆಂಗು , ಬಾಳೆ, ಲಿಂಬೆ, ಅಡಿಕೆ, ಎಲೆಬಳ್ಳಿ ಬೆಳೆ ಬೆಳೆಯುತ್ತಾರೆ. ರೈತರಿಗೆ ಪುಷ್ಕರಣಿಗಳು ವರದಾನವಾಗಿವೆ’ ಎಂದು ರೈತ ಶಿವಯ್ಯ ಹೇಳಿದರು.</p>.<p>‘2014-15 ಮತ್ತು 2015-16ರಲ್ಲಿ ಮಳೆ ಇಲ್ಲದಾಗಲೂ ಪುಷ್ಕರಣಿಗಳಲ್ಲಿ ನೀರು ಭರ್ತಿಯಾಗಿತ್ತು. ಕಳೆದ ವರ್ಷ ಮಳೆ ಕಡಿಮೆಯಾದರೂ ಪುಷ್ಕರಣಿಯಲ್ಲಿ ನೀರು ಕಡಿಮೆಯಾಗಿಲ್ಲ. ಬನಶಂಕರಿ ದೇವಾಲಯದ ಎರಡು ಪುಷ್ಕರಣಿಗಳು, ಸರಸ್ವತಿ ಹಳ್ಳ ಮತ್ತು ಕೆಂದೂರ ಕೆರೆ ಬತ್ತಿಹೋಗಿ ಎರಡು ದಶಕಗಳು ಸಂದಿವೆ’ ಎಂದು ಭಕ್ತರು ಹೇಳಿದರು.</p>.<p> ಹಿರೇ ಮಹಾಕೂಟೇಶ್ವರ, ಚಿಕ್ಕ ಮಹಾಕೂಟೇಶ್ವರ ದೇವಾಲಯ ಎಂಟು ಅಡಿ ಆಳದ ಪುಷ್ಕರಣಿಗಳಲ್ಲಿ ನೀರಿನ ಬುಗ್ಗೆ 1,500 ವರ್ಷಗಳಿಂದ ನಿರಂತರ ನೀರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>