<p><strong>ದೇವನಹಳ್ಳಿ</strong>: ಜಿಲ್ಲಾಡಳಿತ ಭವನದ ಎದುರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಧರಣಿ ನಡೆಸಿದರು.</p>.<p>ಬಿದಲಪುರ ಶಿವಕುಮಾರ್ ಆರಾಧ್ಯ ಬಿ.ಎಸ್ ಮಾತನಾಡಿ, 'ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡುವಲ್ಲಿ ವಿಳಂಬ ಧೋರಣೆ ಮಾಡುತ್ತಿದ್ದಾರೆ. ಸಾರ್ವಜನಿಕರ ಆಸ್ತಿಯನ್ನು ಹುನ್ನಾರ ಮಾಡಿ ಲಪಟಾಯಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ’ ಎಂದು ದೂರಿದರು.</p>.<p>ಕಂದಾಯ ಇಲಾಖೆ ಸುಪರ್ದಿಯಲ್ಲಿರುವ ಸರ್ಕಾರಿ ಗುಂಡು ತೋಪು, ಸ್ಮಶಾನ, ಕಾಲು ದಾರಿ, ಗೋಮಾಳ, ಸರ್ಕಾರಿ ಬೀಳು, ರಾಜಕಾಲುವೆ, ಹದ್ದುಗಿಡಿದ ಹಳ್ಳ, ಕರೆ, ಕುಂಟೆ ಕಾಲುವೆ ಒತ್ತುವಾರಿಯಾಗಿದ್ದರೂ ತೆರವಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.</p>.<p>ಪ್ರತಿಭಟನೆ, ಧರಣಿ ಮೂಲಕ ಮನವಿ ಮಾಡಿದರು ಯಾರ ಮೇಲೆ ಕ್ರಮ ಕೈಗೊಳ್ಳುವ ಸಾಮರ್ಥ್ಯವನ್ನೇ ಜಿಲ್ಲಾಡಳಿತ ಕಳೆದುಕೊಂಡಿದೆ. ನೆಲದ ಕಾನೂನಿಗೆ ಗೌರವ ಕೊಡದವರ ರಕ್ಷಣೆಗೆ ನಿಂತು ಸಂವೇದನಹೀನವಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.</p>.<p>ಬೈಚಾಪುರ ಶಶಿಕುಮಾರ್ ಮಾತನಾಡಿ, 'ಅಧಿಕಾರಿಗಳು ರಾಜಕೀಯ ಪ್ರಭಾವ, ಹೋರಾಟಗಾರರ ಸ್ವಜನ ಪಕ್ಷಪಾತದ ಫಲವಾಗಿ ಕೃಷಿ ಭೂಮಿ ಇರುವ ಪ್ರತಿಯೊಬ್ಬ ರೈತನ ಕಥೆಯೂ ತಬರನ ಕಥೆಯಾಗಿದೆ. ಸರ್ಕಾರದ ಸುತ್ತೋಲೆಯಂತೆ ಐದು ವರ್ಷಕ್ಕೂ ಮೀರಿ ಒಂದೇ ಕಡೆ ಇರುವವರು ಕೂಡಲೇ ವರ್ಗಾವಣೆ ಮಾಡಬೇಕು‘ ಎಂದು ಒತ್ತಾಯಿಸಿದರು.</p>.<p>ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಆಯಾ ವೃತ್ತದಲ್ಲೇ ವಾಸ ಮಾಡುವುದನ್ನು ಕಡ್ಡಾಯ ಮಾಡಬೇಕು. ಅಧಿಕಾರಿಗಳ ವಿರುದ್ಧ ದೂರು ಕೊಟ್ಟಾಗ ತ್ವರಿತವಾಗಿ ಪರಿಶೀಲಿಸಿ ಕೂಡಲೇ ಶಿಸ್ತುಕ್ರಮಕ್ಕೆ ಮುಂದಾಗಬೇಕಿದೆ ಎಂದು ತಿಳಿಸಿದರು.</p>.<p>ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳಾದ ಭಾಗ್ಯವಂತ, ರವಿಕುಮಾರ್, ಮಂಜುನಾಥ್, ಮಹೇಶ್, ಪವಿತ್ರ ಮತ್ತು ಶಿವರುದ್ರಮ್ಮ ಪಾಲ್ಗೊಂಡಿದ್ದರು.</p>.<p>ದಾ<strong>ಖಲೆ ತಿರುಚುವ ಷಡ್ಯಂತ್ರ</strong> </p><p>ಸರ್ಕಾರಿ ಭೂಮಿ ಅತಿಕ್ರಮಿಸಿಕೊಂಡಿರುವ ಬಾಲಾಢ್ಯರು ಸರ್ಕಾರಿ ದಾಖಲೆಗಳನ್ನೇ ತಿರುಚುವ ಷಡ್ಯಂತ್ರ ಮಾಡುತ್ತಿದ್ದಾರೆ. ಈ ಕುರಿತಾದ ಧೃಡೀಕೃತ ದಾಖಲೆಗಳು ಸಂಘದ ಬಳಿ ಇದೆ. ವಿವಿಧ ಒತ್ತಡ ಆಸೆ ಆಮಿಷಗಳಿಗೆ ಮಣಿದು ಸರ್ಕಾರಿ ಅಧಿಕಾರಿಗಳು ನಕಲಿ ದಾಖಲೆಗಳ ಸೃಷ್ಟಿಯಲ್ಲಿ ಶಾಮೀಲಾದರೆ ಉಗ್ರ ಹೋರಾಟ ನಡೆಸಲಾಗುವುದು. ನ್ಯಾಯಾಯಾಲಯದ ಮೂಲಕ ಹೋರಾಟ ಮಾಡಲಾಗುತ್ತದೆ. ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳು ಇಂತಹ ಕೃತ್ಯಕ್ಕೆ ದಾಖಲಾತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರಿ ದಾಖಲಾತಿಗಳನ್ನು ಹೋರಾಟನಿರತರು ಪ್ರದರ್ಶನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ</strong>: ಜಿಲ್ಲಾಡಳಿತ ಭವನದ ಎದುರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಧರಣಿ ನಡೆಸಿದರು.</p>.<p>ಬಿದಲಪುರ ಶಿವಕುಮಾರ್ ಆರಾಧ್ಯ ಬಿ.ಎಸ್ ಮಾತನಾಡಿ, 'ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡುವಲ್ಲಿ ವಿಳಂಬ ಧೋರಣೆ ಮಾಡುತ್ತಿದ್ದಾರೆ. ಸಾರ್ವಜನಿಕರ ಆಸ್ತಿಯನ್ನು ಹುನ್ನಾರ ಮಾಡಿ ಲಪಟಾಯಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ’ ಎಂದು ದೂರಿದರು.</p>.<p>ಕಂದಾಯ ಇಲಾಖೆ ಸುಪರ್ದಿಯಲ್ಲಿರುವ ಸರ್ಕಾರಿ ಗುಂಡು ತೋಪು, ಸ್ಮಶಾನ, ಕಾಲು ದಾರಿ, ಗೋಮಾಳ, ಸರ್ಕಾರಿ ಬೀಳು, ರಾಜಕಾಲುವೆ, ಹದ್ದುಗಿಡಿದ ಹಳ್ಳ, ಕರೆ, ಕುಂಟೆ ಕಾಲುವೆ ಒತ್ತುವಾರಿಯಾಗಿದ್ದರೂ ತೆರವಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.</p>.<p>ಪ್ರತಿಭಟನೆ, ಧರಣಿ ಮೂಲಕ ಮನವಿ ಮಾಡಿದರು ಯಾರ ಮೇಲೆ ಕ್ರಮ ಕೈಗೊಳ್ಳುವ ಸಾಮರ್ಥ್ಯವನ್ನೇ ಜಿಲ್ಲಾಡಳಿತ ಕಳೆದುಕೊಂಡಿದೆ. ನೆಲದ ಕಾನೂನಿಗೆ ಗೌರವ ಕೊಡದವರ ರಕ್ಷಣೆಗೆ ನಿಂತು ಸಂವೇದನಹೀನವಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.</p>.<p>ಬೈಚಾಪುರ ಶಶಿಕುಮಾರ್ ಮಾತನಾಡಿ, 'ಅಧಿಕಾರಿಗಳು ರಾಜಕೀಯ ಪ್ರಭಾವ, ಹೋರಾಟಗಾರರ ಸ್ವಜನ ಪಕ್ಷಪಾತದ ಫಲವಾಗಿ ಕೃಷಿ ಭೂಮಿ ಇರುವ ಪ್ರತಿಯೊಬ್ಬ ರೈತನ ಕಥೆಯೂ ತಬರನ ಕಥೆಯಾಗಿದೆ. ಸರ್ಕಾರದ ಸುತ್ತೋಲೆಯಂತೆ ಐದು ವರ್ಷಕ್ಕೂ ಮೀರಿ ಒಂದೇ ಕಡೆ ಇರುವವರು ಕೂಡಲೇ ವರ್ಗಾವಣೆ ಮಾಡಬೇಕು‘ ಎಂದು ಒತ್ತಾಯಿಸಿದರು.</p>.<p>ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಆಯಾ ವೃತ್ತದಲ್ಲೇ ವಾಸ ಮಾಡುವುದನ್ನು ಕಡ್ಡಾಯ ಮಾಡಬೇಕು. ಅಧಿಕಾರಿಗಳ ವಿರುದ್ಧ ದೂರು ಕೊಟ್ಟಾಗ ತ್ವರಿತವಾಗಿ ಪರಿಶೀಲಿಸಿ ಕೂಡಲೇ ಶಿಸ್ತುಕ್ರಮಕ್ಕೆ ಮುಂದಾಗಬೇಕಿದೆ ಎಂದು ತಿಳಿಸಿದರು.</p>.<p>ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳಾದ ಭಾಗ್ಯವಂತ, ರವಿಕುಮಾರ್, ಮಂಜುನಾಥ್, ಮಹೇಶ್, ಪವಿತ್ರ ಮತ್ತು ಶಿವರುದ್ರಮ್ಮ ಪಾಲ್ಗೊಂಡಿದ್ದರು.</p>.<p>ದಾ<strong>ಖಲೆ ತಿರುಚುವ ಷಡ್ಯಂತ್ರ</strong> </p><p>ಸರ್ಕಾರಿ ಭೂಮಿ ಅತಿಕ್ರಮಿಸಿಕೊಂಡಿರುವ ಬಾಲಾಢ್ಯರು ಸರ್ಕಾರಿ ದಾಖಲೆಗಳನ್ನೇ ತಿರುಚುವ ಷಡ್ಯಂತ್ರ ಮಾಡುತ್ತಿದ್ದಾರೆ. ಈ ಕುರಿತಾದ ಧೃಡೀಕೃತ ದಾಖಲೆಗಳು ಸಂಘದ ಬಳಿ ಇದೆ. ವಿವಿಧ ಒತ್ತಡ ಆಸೆ ಆಮಿಷಗಳಿಗೆ ಮಣಿದು ಸರ್ಕಾರಿ ಅಧಿಕಾರಿಗಳು ನಕಲಿ ದಾಖಲೆಗಳ ಸೃಷ್ಟಿಯಲ್ಲಿ ಶಾಮೀಲಾದರೆ ಉಗ್ರ ಹೋರಾಟ ನಡೆಸಲಾಗುವುದು. ನ್ಯಾಯಾಯಾಲಯದ ಮೂಲಕ ಹೋರಾಟ ಮಾಡಲಾಗುತ್ತದೆ. ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳು ಇಂತಹ ಕೃತ್ಯಕ್ಕೆ ದಾಖಲಾತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರಿ ದಾಖಲಾತಿಗಳನ್ನು ಹೋರಾಟನಿರತರು ಪ್ರದರ್ಶನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>