<p><strong>ಆನೇಕಲ್: </strong>‘ಒಂಟಿ ಕೋಳಿ’ ಪುಂಡಾನೆ ಇರುವ ನಿಗದಿತ ಜಾಗದ ಸುಳಿವು ದೊರೆಯದ ಕಾರಣ ಸೆರೆ ಕಾರ್ಯಾಚರಣೆಯನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ.</p>.<p>ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಕಾರ್ಯಾಚರಣೆಗೆ ಕರೆಸಲಾಗಿದ್ದ ಎಂಟು ಕುಮ್ಕಿ ಆನೆಗಳು (ತರಬೇತಿ ಪಡೆದು ಪಳಗಿಸಿದ ಆನೆಗಳು), ಮಾವುತರು, ಕಾವಾಡಿಗಳು ಮತ್ತು ನುರಿತ ಸಿಬ್ಬಂದಿಯನ್ನು ಬುಧವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಬೀಳ್ಕೊಟ್ಟರು.</p>.<p>‘ಒಂಟಿ ಕೋಳಿ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರಿದಿತ್ತು. ಆದರೆ, ಆನೆ ಇರುವ ನಿರ್ದಿಷ್ಟ ಜಾಗದ ಸುಳಿವು ಸಿಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ. ಹಾಗಾಗಿ ಕುಮ್ಕಿ ಆನೆಗಳ ತಂಡ ಮತ್ತು ಸಿಬ್ಬಂದಿಯನ್ನು ಮರಳಿ ಕಳಿಸಲಾಗಿದೆ‘ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಪ್ರಿಯದರ್ಶಿ ತಿಳಿಸಿದ್ದಾರೆ. </p>.<p>ಇಬ್ಬರ ಸಾವಿಗೆ ಕಾರಣವಾಗಿದ್ದ ಮಕ್ನಾ ಆನೆ ಹಾಗೂ ಒಂಟಿ ಕೋಳಿ ಆನೆ ಸೆರೆಗೆ ಜುಲೈ 29ರಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಅದೇ ದಿನ ಮಕ್ನಾ ಆನೆಯನ್ನು ಸೆರೆ ಹಿಡಿಯಲಾಗಿತ್ತು. </p>.<p>ಜುಲೈ 27ರಿಂದ 31ರವರೆಗೆ ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದ ಎಂಟು ಕುಮ್ಕಿ ಆನೆಗಳು ಮತ್ತು ನುರಿತ ಸಿಬ್ಬಂದಿ ನೆರವಿನಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿ ಓಡಾಡುತ್ತಿದ್ದ ಮಕ್ನಾ ಆನೆಯನ್ನು ಸೆರೆ ಹಿಡಿದು ಕ್ರಾಲ್ಗೆ ಬಿಡಲಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>‘ಒಂಟಿ ಕೋಳಿ’ ಪುಂಡಾನೆ ಇರುವ ನಿಗದಿತ ಜಾಗದ ಸುಳಿವು ದೊರೆಯದ ಕಾರಣ ಸೆರೆ ಕಾರ್ಯಾಚರಣೆಯನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ.</p>.<p>ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಕಾರ್ಯಾಚರಣೆಗೆ ಕರೆಸಲಾಗಿದ್ದ ಎಂಟು ಕುಮ್ಕಿ ಆನೆಗಳು (ತರಬೇತಿ ಪಡೆದು ಪಳಗಿಸಿದ ಆನೆಗಳು), ಮಾವುತರು, ಕಾವಾಡಿಗಳು ಮತ್ತು ನುರಿತ ಸಿಬ್ಬಂದಿಯನ್ನು ಬುಧವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಬೀಳ್ಕೊಟ್ಟರು.</p>.<p>‘ಒಂಟಿ ಕೋಳಿ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರಿದಿತ್ತು. ಆದರೆ, ಆನೆ ಇರುವ ನಿರ್ದಿಷ್ಟ ಜಾಗದ ಸುಳಿವು ಸಿಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ. ಹಾಗಾಗಿ ಕುಮ್ಕಿ ಆನೆಗಳ ತಂಡ ಮತ್ತು ಸಿಬ್ಬಂದಿಯನ್ನು ಮರಳಿ ಕಳಿಸಲಾಗಿದೆ‘ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಪ್ರಿಯದರ್ಶಿ ತಿಳಿಸಿದ್ದಾರೆ. </p>.<p>ಇಬ್ಬರ ಸಾವಿಗೆ ಕಾರಣವಾಗಿದ್ದ ಮಕ್ನಾ ಆನೆ ಹಾಗೂ ಒಂಟಿ ಕೋಳಿ ಆನೆ ಸೆರೆಗೆ ಜುಲೈ 29ರಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಅದೇ ದಿನ ಮಕ್ನಾ ಆನೆಯನ್ನು ಸೆರೆ ಹಿಡಿಯಲಾಗಿತ್ತು. </p>.<p>ಜುಲೈ 27ರಿಂದ 31ರವರೆಗೆ ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದ ಎಂಟು ಕುಮ್ಕಿ ಆನೆಗಳು ಮತ್ತು ನುರಿತ ಸಿಬ್ಬಂದಿ ನೆರವಿನಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿ ಓಡಾಡುತ್ತಿದ್ದ ಮಕ್ನಾ ಆನೆಯನ್ನು ಸೆರೆ ಹಿಡಿದು ಕ್ರಾಲ್ಗೆ ಬಿಡಲಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>