<p><strong>ವಿಜಯಪುರ</strong>(ದೇವನಹಳ್ಳಿ): ಪಟ್ಟಣದ ಸೌಮ್ಯ ಚನ್ನಕೇಶವಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಟ್ರಸ್ಟ್ನಿಂದ ಭಗವದ್ಗೀತಾ ಪಾರಾಯಣ, ಯೋಗಿ ನಾರೇಯಣ ಯತೀಂದ್ರ ಹಾಗೂ ಕನಕ, ಪುರಂದರ ಗೀತ ತತ್ವಾಮೃತ ರಸಧಾರೆ ಕಾರ್ಯಕ್ರಮ ನಡೆಯಿತು.</p>.<p>ಸತ್ಸಂಗದ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸತ್ಸಂಗ ಎಂಬುದು ಜ್ಞಾನದ ಕಡೆಗೆ ಮುನ್ನಡೆಯಲು ದೀವಿಗೆಯಂತಿದೆ. ಅದನ್ನು ಅನುಸರಿಸಿಕೊಂಡು ನಡೆದವರು, ಬೆಳಕಿನತ್ತ ತಮ್ಮ ಜೀವಿತವನ್ನು ಸಾಗಿಸುತ್ತಾರೆ. ಅಜ್ಞಾನದ ಅಂಧಕಾರದಿಂದ ಜನರನ್ನು ಹೊರಗೆ ತರಲು ಅನೇಕ ದಾಸರು, ಸಂತರು, ಶರಣರೆಲ್ಲರೂ ತಮ್ಮದೇ ದಾಟಿಯಲ್ಲಿ ಸನ್ಮಾರ್ಗ ತೋರಿಸಿದ್ದಾರೆ ಎಂದರು.</p>.<p>ಸ್ವಾಮಿ ವಿವೇಕಾನಂದ ಯುವ ಬಳಗದ ಕಾರ್ಯಕರ್ತ ಎಸ್.ಲಕ್ಷ್ಮಣ್, ತುಳಿಸೀದಾಸರ ಕುರಿತು ಉಪನ್ಯಾಸ ನೀಡಿದರು. ಶಾಲಾ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ನೀಡಲಾಯಿತು. ಮುಖಂಡರಾದ ಕೆ.ಮಂಜುನಾಥ್, ದೊಡ್ಡವೇಮಣ್ಣ, ಸಿ.ಎನ್.ಸುರೇಶ ನಾಯಕ್, ವಿ.ಎನ್.ವೆಂಕಟೇಶ್, ಆರ್.ಮುನಿರಾಜು, ಮಹಾತ್ಮಾಂಜನೇಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>(ದೇವನಹಳ್ಳಿ): ಪಟ್ಟಣದ ಸೌಮ್ಯ ಚನ್ನಕೇಶವಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಟ್ರಸ್ಟ್ನಿಂದ ಭಗವದ್ಗೀತಾ ಪಾರಾಯಣ, ಯೋಗಿ ನಾರೇಯಣ ಯತೀಂದ್ರ ಹಾಗೂ ಕನಕ, ಪುರಂದರ ಗೀತ ತತ್ವಾಮೃತ ರಸಧಾರೆ ಕಾರ್ಯಕ್ರಮ ನಡೆಯಿತು.</p>.<p>ಸತ್ಸಂಗದ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸತ್ಸಂಗ ಎಂಬುದು ಜ್ಞಾನದ ಕಡೆಗೆ ಮುನ್ನಡೆಯಲು ದೀವಿಗೆಯಂತಿದೆ. ಅದನ್ನು ಅನುಸರಿಸಿಕೊಂಡು ನಡೆದವರು, ಬೆಳಕಿನತ್ತ ತಮ್ಮ ಜೀವಿತವನ್ನು ಸಾಗಿಸುತ್ತಾರೆ. ಅಜ್ಞಾನದ ಅಂಧಕಾರದಿಂದ ಜನರನ್ನು ಹೊರಗೆ ತರಲು ಅನೇಕ ದಾಸರು, ಸಂತರು, ಶರಣರೆಲ್ಲರೂ ತಮ್ಮದೇ ದಾಟಿಯಲ್ಲಿ ಸನ್ಮಾರ್ಗ ತೋರಿಸಿದ್ದಾರೆ ಎಂದರು.</p>.<p>ಸ್ವಾಮಿ ವಿವೇಕಾನಂದ ಯುವ ಬಳಗದ ಕಾರ್ಯಕರ್ತ ಎಸ್.ಲಕ್ಷ್ಮಣ್, ತುಳಿಸೀದಾಸರ ಕುರಿತು ಉಪನ್ಯಾಸ ನೀಡಿದರು. ಶಾಲಾ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ನೀಡಲಾಯಿತು. ಮುಖಂಡರಾದ ಕೆ.ಮಂಜುನಾಥ್, ದೊಡ್ಡವೇಮಣ್ಣ, ಸಿ.ಎನ್.ಸುರೇಶ ನಾಯಕ್, ವಿ.ಎನ್.ವೆಂಕಟೇಶ್, ಆರ್.ಮುನಿರಾಜು, ಮಹಾತ್ಮಾಂಜನೇಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>