<p><strong>ದೇವನಹಳ್ಳಿ</strong>: ಒತ್ತಡ ಮುಕ್ತ ನೆಮ್ಮದಿಯ ಜೀವನ ಸಾಗಿಸಲು ದೇಗುಲಗಳು ಸಹಕಾರಿಯಾಗಿವೆ. ಸಾಂಸ್ಕೃತಿಕವಾಗಿ ಸಮಾಜದ ಪ್ರಮುಖ ಅಂಗಗಳಲ್ಲಿ ಒಂದಾಗಿರುವ ದೇವಸ್ಥಾನಗಳ ನಿರ್ವಹಣೆ, ಸವಾಲು ಎದುರಿಸಲು ಲಭ್ಯವಿರುವ ಅವಕಾಶ ಕುರಿತು ವಿಸ್ತೃತ ಚರ್ಚೆಯಾಗಬೇಕಿದೆ ಎಂದು ಇಸ್ಕಾನ್ ಗೋರ್ವಧನ ಪರಿಸರ ಗ್ರಾಮದ ನಿರ್ದೇಶಕ ಗೌರಂಗದಾಸ್ ಪ್ರಭು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಪೋಲನಹಳ್ಳಿ ಬಳಿಯ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ದೇಗುಲಗಳ ನಿರ್ವಹಣೆ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.</p>.<p>ಆಧುನಿಕತೆ ಬೆಳೆದಂತೆ ಮಾನವ ತನ್ನ ಸಾಮರ್ಥ್ಯ ಕುಗ್ಗಿಸಿಕೊಳ್ಳುತ್ತಿದ್ದಾನೆ. ಆದರೆ, ದೇಗುಲಗಳಿಗೆ ಭೇಟಿ ನೀಡಿದರೆ ಮಾನಸಿಕ ಸಾಮರ್ಥ್ಯ ಹೆಚ್ಚಲಿದೆ ಎಂದರು.</p>.<p>ಈಗಾಗಲೇ ಐತಿಹಾಸಿಕ ದೇಗುಲಗಳ ಕುರಿತು ಸಾಕಷ್ಟು ಸಂಶೋಧನೆ ನಡೆದಿವೆ. ಅವನ್ನು ಪಠ್ಯಕ್ರಮದಲ್ಲಿ ಸೇರಿಸುವ ಕೆಲಸವಾಗಬೇಕಿದೆ. ದೇಗುಲ ನಿರ್ವಹಣೆ ವಿಚಾರದಲ್ಲಿ ಎಲ್ಲ ಆಯಾಮದಲ್ಲಿಯೂ ಸಂಶೋಧನೆ ನಡೆಸಬೇಕಿದೆ ಎಂದು ಚಾಣಕ್ಯ ವಿಶ್ವವಿದ್ಯಾಲಯದ ಉಪ ಕುಲಪತಿ ಯಶವಂತ ಡೋಂಗ್ರೆ ಸಲಹೆ ಮಾಡಿದರು.</p>.<p>ಉತ್ತರ ಪ್ರದೇಶ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಕೆ.ವಿ.ರಾಜು, ವಿಶ್ವವಿದ್ಯಾಲಯ ಕುಲಪತಿ ಎಂ.ಕೆ.ಶ್ರೀಧರ್, ಉಪ ಕುಲಪತಿ ಎಂ.ಪಿ. ಕುಮಾರ್, ಸಿಇಓ ನಾಗರಾಜ್ ರೆಡ್ಡಿ, ಕುಲಸಚಿವ ಸುಶಾಂತ್ ಜೋಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ</strong>: ಒತ್ತಡ ಮುಕ್ತ ನೆಮ್ಮದಿಯ ಜೀವನ ಸಾಗಿಸಲು ದೇಗುಲಗಳು ಸಹಕಾರಿಯಾಗಿವೆ. ಸಾಂಸ್ಕೃತಿಕವಾಗಿ ಸಮಾಜದ ಪ್ರಮುಖ ಅಂಗಗಳಲ್ಲಿ ಒಂದಾಗಿರುವ ದೇವಸ್ಥಾನಗಳ ನಿರ್ವಹಣೆ, ಸವಾಲು ಎದುರಿಸಲು ಲಭ್ಯವಿರುವ ಅವಕಾಶ ಕುರಿತು ವಿಸ್ತೃತ ಚರ್ಚೆಯಾಗಬೇಕಿದೆ ಎಂದು ಇಸ್ಕಾನ್ ಗೋರ್ವಧನ ಪರಿಸರ ಗ್ರಾಮದ ನಿರ್ದೇಶಕ ಗೌರಂಗದಾಸ್ ಪ್ರಭು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಪೋಲನಹಳ್ಳಿ ಬಳಿಯ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ದೇಗುಲಗಳ ನಿರ್ವಹಣೆ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.</p>.<p>ಆಧುನಿಕತೆ ಬೆಳೆದಂತೆ ಮಾನವ ತನ್ನ ಸಾಮರ್ಥ್ಯ ಕುಗ್ಗಿಸಿಕೊಳ್ಳುತ್ತಿದ್ದಾನೆ. ಆದರೆ, ದೇಗುಲಗಳಿಗೆ ಭೇಟಿ ನೀಡಿದರೆ ಮಾನಸಿಕ ಸಾಮರ್ಥ್ಯ ಹೆಚ್ಚಲಿದೆ ಎಂದರು.</p>.<p>ಈಗಾಗಲೇ ಐತಿಹಾಸಿಕ ದೇಗುಲಗಳ ಕುರಿತು ಸಾಕಷ್ಟು ಸಂಶೋಧನೆ ನಡೆದಿವೆ. ಅವನ್ನು ಪಠ್ಯಕ್ರಮದಲ್ಲಿ ಸೇರಿಸುವ ಕೆಲಸವಾಗಬೇಕಿದೆ. ದೇಗುಲ ನಿರ್ವಹಣೆ ವಿಚಾರದಲ್ಲಿ ಎಲ್ಲ ಆಯಾಮದಲ್ಲಿಯೂ ಸಂಶೋಧನೆ ನಡೆಸಬೇಕಿದೆ ಎಂದು ಚಾಣಕ್ಯ ವಿಶ್ವವಿದ್ಯಾಲಯದ ಉಪ ಕುಲಪತಿ ಯಶವಂತ ಡೋಂಗ್ರೆ ಸಲಹೆ ಮಾಡಿದರು.</p>.<p>ಉತ್ತರ ಪ್ರದೇಶ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಕೆ.ವಿ.ರಾಜು, ವಿಶ್ವವಿದ್ಯಾಲಯ ಕುಲಪತಿ ಎಂ.ಕೆ.ಶ್ರೀಧರ್, ಉಪ ಕುಲಪತಿ ಎಂ.ಪಿ. ಕುಮಾರ್, ಸಿಇಓ ನಾಗರಾಜ್ ರೆಡ್ಡಿ, ಕುಲಸಚಿವ ಸುಶಾಂತ್ ಜೋಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>