<p>ದೇವನಹಳ್ಳಿ: ಭೂ ಮಾಲೀಕತ್ವವನ್ನು ದಲಿತರಿಗೆ ಮರಳಿ ನೀಡಲು ಮೀನಮೇಷ ಎಣಿಸುತ್ತಿದ್ದ ತಾಲ್ಲೂಕು ಆಡಳಿತವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಗುರುವಾರ ಮಾಲೀಕರ ಸ್ವಾಧೀನಕ್ಕೆ ಭೂಮಿ ನೀಡಿದೆ.</p>.<p>ಕುಂದಾಣ ಹೋಬಳಿ ಸಿಂಗ್ರಹಳ್ಳಿಗೆ ಸಂಬಂಧಿಸಿದ ಭೂಮಿ ದಲಿತ ಕುಟುಂಬವೊಂದಕ್ಕೆ ಮಂಜೂರು ಮಾಡಲಾಗಿದ್ದು. ಕಾನೂನು ಬಾಹಿರವಾಗಿ ಕೆಲ ಬಲಾಢ್ಯರು ಅದಕ್ಕೆ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬ್ಬಳಿಸಲು ಯತ್ನಿಸಿದರು.</p>.<p>ಇದನ್ನು ಖಂಡಿಸಿ ಗ್ರಾಮದ ಎಸ್.ಎಂ.ಆನಂದ್ ಕುಮಾರ್, ಉಪವಿಭಾಗಧಿಕಾರಿ, ಜಿಲ್ಲಾಧಿಕಾರಿ ಬಳಿ ಕಳೆದ 15 ವರ್ಷಗಳಿಂದ ಕಾನೂನು ಹೋರಾಟ ನಡೆಸಿದ್ದರು.</p>.<p>ಭೂ ಮಾಲೀಕತ್ವ ಸಿಗದೆ ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆನಂದ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.</p>.<p>ಕೋರ್ಟ್ ಆದೇಶದಂತೆ ತಾಲ್ಲೂಕು ಸರ್ವೇ ಇಲಾಖೆ ಎಂ.ಶಿವಣ್ಣ, ಕುಂದಾಣ ಹೋಬಳಿ ಉಪ ತಹಶೀಲ್ದಾರ್ ಚೈತ್ರಾ, ರಾಜ್ವಸ ನಿರೀಕ್ಷ ಹನುಮಂತರಾಯಪ್ಪ, ಗ್ರಾಮ ಲೆಕ್ಕಾಧಿಕಾರಿ ರಮ್ಯಾ ಕುಂದಾಣ ಹೋಬಳಿ ಸಿಂಗ್ರಹಳ್ಳಿ ಗ್ರಾಮದಲ್ಲಿ ಅಳತೆ ಮಾಡಿಸಿ ಜಮೀನು ಬಿಡಿಸಿಕೊಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವನಹಳ್ಳಿ: ಭೂ ಮಾಲೀಕತ್ವವನ್ನು ದಲಿತರಿಗೆ ಮರಳಿ ನೀಡಲು ಮೀನಮೇಷ ಎಣಿಸುತ್ತಿದ್ದ ತಾಲ್ಲೂಕು ಆಡಳಿತವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಗುರುವಾರ ಮಾಲೀಕರ ಸ್ವಾಧೀನಕ್ಕೆ ಭೂಮಿ ನೀಡಿದೆ.</p>.<p>ಕುಂದಾಣ ಹೋಬಳಿ ಸಿಂಗ್ರಹಳ್ಳಿಗೆ ಸಂಬಂಧಿಸಿದ ಭೂಮಿ ದಲಿತ ಕುಟುಂಬವೊಂದಕ್ಕೆ ಮಂಜೂರು ಮಾಡಲಾಗಿದ್ದು. ಕಾನೂನು ಬಾಹಿರವಾಗಿ ಕೆಲ ಬಲಾಢ್ಯರು ಅದಕ್ಕೆ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬ್ಬಳಿಸಲು ಯತ್ನಿಸಿದರು.</p>.<p>ಇದನ್ನು ಖಂಡಿಸಿ ಗ್ರಾಮದ ಎಸ್.ಎಂ.ಆನಂದ್ ಕುಮಾರ್, ಉಪವಿಭಾಗಧಿಕಾರಿ, ಜಿಲ್ಲಾಧಿಕಾರಿ ಬಳಿ ಕಳೆದ 15 ವರ್ಷಗಳಿಂದ ಕಾನೂನು ಹೋರಾಟ ನಡೆಸಿದ್ದರು.</p>.<p>ಭೂ ಮಾಲೀಕತ್ವ ಸಿಗದೆ ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆನಂದ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.</p>.<p>ಕೋರ್ಟ್ ಆದೇಶದಂತೆ ತಾಲ್ಲೂಕು ಸರ್ವೇ ಇಲಾಖೆ ಎಂ.ಶಿವಣ್ಣ, ಕುಂದಾಣ ಹೋಬಳಿ ಉಪ ತಹಶೀಲ್ದಾರ್ ಚೈತ್ರಾ, ರಾಜ್ವಸ ನಿರೀಕ್ಷ ಹನುಮಂತರಾಯಪ್ಪ, ಗ್ರಾಮ ಲೆಕ್ಕಾಧಿಕಾರಿ ರಮ್ಯಾ ಕುಂದಾಣ ಹೋಬಳಿ ಸಿಂಗ್ರಹಳ್ಳಿ ಗ್ರಾಮದಲ್ಲಿ ಅಳತೆ ಮಾಡಿಸಿ ಜಮೀನು ಬಿಡಿಸಿಕೊಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>