<p><strong>ಚನ್ನಮ್ಮನ ಕಿತ್ತೂರು:</strong> ಇಲ್ಲಿಯ ಚನ್ನಾಪುರ ಗ್ರಾಮದಲ್ಲಿಯ ಗ್ಯಾರೇಜ್ ಮತ್ತು ಆಟೊಮೊಬೈಲ್ ಅಂಗಡಿ ಕಳವು ಮಾಡಲು ಬಂದಿದ್ದ ಮೂವರು ಕಳ್ಳರಲ್ಲಿ ಒಬ್ಬನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.</p>.<p>ಧಾರವಾಡ ಜಿಲ್ಲೆಯ ಹಳೇ ಹುಬ್ಬಳ್ಳಿಯ ಆನಂದ ನಗರದ ಫಾರೂಕ್ ಇಸ್ಮಾಯಿಲ್ ಹುಯಿಲಗೋಳ ಆರೋಪಿ. ಈತನ ಜತೆಗೆ ಬಂದಿದ್ದ ಹಳೇ ಹುಬ್ಬಳ್ಳಿಯವರೇ ಆದ ಇರ್ಪಾನ್ ಅಬ್ದುಲ್ ಬೊದಲೇಖಾನ್ ಹಾಗೂ ಕೃಷ್ಣಾಪುರ ಗಲ್ಲಿಯ ಮಹ್ಮದಹುಸೇನ್ ಅಬ್ದುಲಸಾಬ್ ನರಗುಂದ ಪರಾರಿಯಾಗಿದ್ದಾರೆ.</p>.<p>‘ಪಟ್ಟಣದ ರಹವಾಸಿ ಸಮೀವುಲ್ಲಾ ಅಬ್ದುಲಮುನಾಫ್ ಶೀಗನಳ್ಳಿ ಅವರಿಗೆ ಸೇರಿದ ಅಂಗಡಿಯ ಶೆಟರ್ ಬೀಗ ಮುರಿಯಲು ಯತ್ನಿಸಿದ್ದಾರೆ. ಮುರಿಯದಿದ್ದಾಗ ತಗಡಿನ ಚಾವಣಿ ಮೇಲೇರಿ ಒಳ ನುಗ್ಗಲು ಯತ್ನಿಸಿದ್ದಾರೆ. ತಗಡಿನ ಮೇಲೆ ಸಪ್ಪಳವಾಗಿದ್ದರಿಂದ ಆ ಭಾಗದ ಜನರು ಹೊರಗೆ ಬಂದಿದ್ದಾರೆ. ಇದನ್ನು ಗಮನಿಸಿದ ಕೆಳಗಿದ್ದ ಕಳ್ಳರಿಬ್ಬರು ಓಡಿ ಹೋಗಿದ್ದಾರೆ. ಚಾವಣಿ ಏರಿದ್ದ ಕಳ್ಳ ಜಿಗಿಯಲು ಹೋಗಿ ಕಾಲಿಗೆ ಪೆಟ್ಟು ಆಗಿದ್ದರಿಂದ ಜನರ ಕೈಗೆ ಸಿಕ್ಕಿ ಬಿದ್ದನು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.</p>.<p>ಕಾಲಿಗೆ ಪೆಟ್ಟು ತಗುಲಿಸಿಕೊಂಡಿರುವ ಫಾರೂಕ್ ಇಸ್ಮಾಯಿಲ್ ಹುಯಿಲಗೋಳನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓಡಿ ಹೋಗಿರುವ ಕಳ್ಳರಿಬ್ಬರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು:</strong> ಇಲ್ಲಿಯ ಚನ್ನಾಪುರ ಗ್ರಾಮದಲ್ಲಿಯ ಗ್ಯಾರೇಜ್ ಮತ್ತು ಆಟೊಮೊಬೈಲ್ ಅಂಗಡಿ ಕಳವು ಮಾಡಲು ಬಂದಿದ್ದ ಮೂವರು ಕಳ್ಳರಲ್ಲಿ ಒಬ್ಬನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.</p>.<p>ಧಾರವಾಡ ಜಿಲ್ಲೆಯ ಹಳೇ ಹುಬ್ಬಳ್ಳಿಯ ಆನಂದ ನಗರದ ಫಾರೂಕ್ ಇಸ್ಮಾಯಿಲ್ ಹುಯಿಲಗೋಳ ಆರೋಪಿ. ಈತನ ಜತೆಗೆ ಬಂದಿದ್ದ ಹಳೇ ಹುಬ್ಬಳ್ಳಿಯವರೇ ಆದ ಇರ್ಪಾನ್ ಅಬ್ದುಲ್ ಬೊದಲೇಖಾನ್ ಹಾಗೂ ಕೃಷ್ಣಾಪುರ ಗಲ್ಲಿಯ ಮಹ್ಮದಹುಸೇನ್ ಅಬ್ದುಲಸಾಬ್ ನರಗುಂದ ಪರಾರಿಯಾಗಿದ್ದಾರೆ.</p>.<p>‘ಪಟ್ಟಣದ ರಹವಾಸಿ ಸಮೀವುಲ್ಲಾ ಅಬ್ದುಲಮುನಾಫ್ ಶೀಗನಳ್ಳಿ ಅವರಿಗೆ ಸೇರಿದ ಅಂಗಡಿಯ ಶೆಟರ್ ಬೀಗ ಮುರಿಯಲು ಯತ್ನಿಸಿದ್ದಾರೆ. ಮುರಿಯದಿದ್ದಾಗ ತಗಡಿನ ಚಾವಣಿ ಮೇಲೇರಿ ಒಳ ನುಗ್ಗಲು ಯತ್ನಿಸಿದ್ದಾರೆ. ತಗಡಿನ ಮೇಲೆ ಸಪ್ಪಳವಾಗಿದ್ದರಿಂದ ಆ ಭಾಗದ ಜನರು ಹೊರಗೆ ಬಂದಿದ್ದಾರೆ. ಇದನ್ನು ಗಮನಿಸಿದ ಕೆಳಗಿದ್ದ ಕಳ್ಳರಿಬ್ಬರು ಓಡಿ ಹೋಗಿದ್ದಾರೆ. ಚಾವಣಿ ಏರಿದ್ದ ಕಳ್ಳ ಜಿಗಿಯಲು ಹೋಗಿ ಕಾಲಿಗೆ ಪೆಟ್ಟು ಆಗಿದ್ದರಿಂದ ಜನರ ಕೈಗೆ ಸಿಕ್ಕಿ ಬಿದ್ದನು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.</p>.<p>ಕಾಲಿಗೆ ಪೆಟ್ಟು ತಗುಲಿಸಿಕೊಂಡಿರುವ ಫಾರೂಕ್ ಇಸ್ಮಾಯಿಲ್ ಹುಯಿಲಗೋಳನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓಡಿ ಹೋಗಿರುವ ಕಳ್ಳರಿಬ್ಬರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>