<p>ಮುಗಳಖೋಡ: ‘ಪಟ್ಟಣದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ರುದ್ರಭೂಮಿಯ ಜಾಗದಲ್ಲಿ ಪುರಸಭೆಯವರು ನಿರ್ಮಿಸಿದ ಬಸ್ ತಂಗುದಾಣ ಕಟ್ಟಡ ತೆರವುಗೊಳಿಸಬೇಕು’ ಎಂದು ಮುಖಂಡ ಸುರೇಶ ಹೊಸಪೇಟಿ ಒತ್ತಾಯಿಸಿದರು.</p><p>ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ವೆ ಸಂಖ್ಯೆ 4ರ 1 ಎಕರೆ, 24 ಗುಂಟೆ ಜಮೀನಿನಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ರುದ್ರಭೂಮಿ ಇದೆ. ಹಲವು ವರ್ಷಗಳಿಂದ ಲಿಂಗಾಯತರು ಇಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತ ಬಂದಿದ್ದಾರೆ. ರಸ್ತೆ ಪಕ್ಕದಲ್ಲಿರುವ ಆ ಜಾಗ ಅತಿಕ್ರಮಣ ಮಾಡಿ, ಬಸ್ ತಂಗುದಾಣ ಕಟ್ಟಲಾಗಿತ್ತು. ಈಗ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಪುರಸಭೆ ಮುಂದಾಗಿದೆ. ಕೂಡಲೇ ಈ ಕಾಮಗಾರಿ ನಿಲ್ಲಿಸಬೇಕು. ಜತೆಗೆ, ಬಸ್ ತಂಗುದಾಣ ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ಮುಖಂಡರಾದ ಭೀಮಪ್ಪ ಕಡಕಬಾವಿ, ಬಿ.ಬಿ.ಬಂಡಿಗಣಿ, ಭೀಮರಾಯ ಖೇತಗೌಡರ, ಮಲ್ಲಪ್ಪ ನಾವಿ, ರಾಮಪ್ಪ ಖೇತಗೌಡರ, ಮಲ್ಲಪ್ಪ ಹೊಸಪೇಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಗಳಖೋಡ: ‘ಪಟ್ಟಣದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ರುದ್ರಭೂಮಿಯ ಜಾಗದಲ್ಲಿ ಪುರಸಭೆಯವರು ನಿರ್ಮಿಸಿದ ಬಸ್ ತಂಗುದಾಣ ಕಟ್ಟಡ ತೆರವುಗೊಳಿಸಬೇಕು’ ಎಂದು ಮುಖಂಡ ಸುರೇಶ ಹೊಸಪೇಟಿ ಒತ್ತಾಯಿಸಿದರು.</p><p>ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ವೆ ಸಂಖ್ಯೆ 4ರ 1 ಎಕರೆ, 24 ಗುಂಟೆ ಜಮೀನಿನಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ರುದ್ರಭೂಮಿ ಇದೆ. ಹಲವು ವರ್ಷಗಳಿಂದ ಲಿಂಗಾಯತರು ಇಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತ ಬಂದಿದ್ದಾರೆ. ರಸ್ತೆ ಪಕ್ಕದಲ್ಲಿರುವ ಆ ಜಾಗ ಅತಿಕ್ರಮಣ ಮಾಡಿ, ಬಸ್ ತಂಗುದಾಣ ಕಟ್ಟಲಾಗಿತ್ತು. ಈಗ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಪುರಸಭೆ ಮುಂದಾಗಿದೆ. ಕೂಡಲೇ ಈ ಕಾಮಗಾರಿ ನಿಲ್ಲಿಸಬೇಕು. ಜತೆಗೆ, ಬಸ್ ತಂಗುದಾಣ ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ಮುಖಂಡರಾದ ಭೀಮಪ್ಪ ಕಡಕಬಾವಿ, ಬಿ.ಬಿ.ಬಂಡಿಗಣಿ, ಭೀಮರಾಯ ಖೇತಗೌಡರ, ಮಲ್ಲಪ್ಪ ನಾವಿ, ರಾಮಪ್ಪ ಖೇತಗೌಡರ, ಮಲ್ಲಪ್ಪ ಹೊಸಪೇಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>