<p><strong>ಬೆಳಗಾವಿ</strong>: ಪಂಢರಪುರದಿಂದ ಮರಳುತ್ತಿದ್ದ ಬೆಳಗಾವಿಯ ಸಂತರ ಗುಂಪಿನ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಾಲಗಾಂವ ಬಳಿ ಗುರುವಾರ ಹಲ್ಲೆ ನಡೆದಿದೆ. ಮೂವರಿಗೆ ಗಾಯಗಳಾಗಿವೆ. ಮೀರಜ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ತಾಲ್ಲೂಕಿನ ತುರಮರಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ರಾಜೂಕರ (63), ಇಲ್ಲಿನ ಶಿವಾಜಿ ನಗರದ ಬಾಳು ಮನವಾಡಕರ (60), ಪರಶುರಾಮ ಜಾಧವ (42) ಅವರಿಗೆ ಗಾಯ ಆಗಿದೆ. ಇವರು ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಬೆಳಗಾವಿಗೆ ಮರಳಿದ್ದಾರೆ.</p>.<p>‘30ಕ್ಕೂ ಹೆಚ್ಚು ಸಂತರು ಲಾರಿಯಲ್ಲಿ ಪಂಢರಪುರಕ್ಕೆ ತೆರಳಿದ್ದು, ಜುಲೈ 18ರಂದು ಮರಳುವಾಗ ಮಾಲಗಾಂವ ಬಳಿ ರಸ್ತೆಯಲ್ಲಿ ಕಾರು ನಿಂತಿತ್ತು. ಕಾರನ್ನು ಸರಿಸಿ, ಲಾರಿಗೆ ಮುಂದೆ ಸಾಗಲು ಅವಕಾಶ ನೀಡಲು ಕೋರಿದೆವು. ಆದರೆ, ಕಾರಿನಲ್ಲಿದ್ದವರು ಜಾಗ ಬಿಡದೇ, ವಾಗ್ವಾದ ಮಾಡಿದರು. ನಾವು 3 ಕಿ.ಮೀ ಮುಂದಕ್ಕೆ ಸಾಗಿ ಬಂದೆವು. ಬೆನ್ನಟ್ಟಿ ಬಂದ 25ಕ್ಕೂ ಹೆಚ್ಚು ಮಂದಿ, ಲಾರಿ ಅಡ್ಡಗಟ್ಟಿದರು. ನಂತರ ಮಾರಕಾಸ್ತ್ರ ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿದರು’ ಎಂದು ಸುರೇಶ ರಾಜೂಕರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಪಂಢರಪುರದಿಂದ ಮರಳುತ್ತಿದ್ದ ಬೆಳಗಾವಿಯ ಸಂತರ ಗುಂಪಿನ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಾಲಗಾಂವ ಬಳಿ ಗುರುವಾರ ಹಲ್ಲೆ ನಡೆದಿದೆ. ಮೂವರಿಗೆ ಗಾಯಗಳಾಗಿವೆ. ಮೀರಜ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ತಾಲ್ಲೂಕಿನ ತುರಮರಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ರಾಜೂಕರ (63), ಇಲ್ಲಿನ ಶಿವಾಜಿ ನಗರದ ಬಾಳು ಮನವಾಡಕರ (60), ಪರಶುರಾಮ ಜಾಧವ (42) ಅವರಿಗೆ ಗಾಯ ಆಗಿದೆ. ಇವರು ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಬೆಳಗಾವಿಗೆ ಮರಳಿದ್ದಾರೆ.</p>.<p>‘30ಕ್ಕೂ ಹೆಚ್ಚು ಸಂತರು ಲಾರಿಯಲ್ಲಿ ಪಂಢರಪುರಕ್ಕೆ ತೆರಳಿದ್ದು, ಜುಲೈ 18ರಂದು ಮರಳುವಾಗ ಮಾಲಗಾಂವ ಬಳಿ ರಸ್ತೆಯಲ್ಲಿ ಕಾರು ನಿಂತಿತ್ತು. ಕಾರನ್ನು ಸರಿಸಿ, ಲಾರಿಗೆ ಮುಂದೆ ಸಾಗಲು ಅವಕಾಶ ನೀಡಲು ಕೋರಿದೆವು. ಆದರೆ, ಕಾರಿನಲ್ಲಿದ್ದವರು ಜಾಗ ಬಿಡದೇ, ವಾಗ್ವಾದ ಮಾಡಿದರು. ನಾವು 3 ಕಿ.ಮೀ ಮುಂದಕ್ಕೆ ಸಾಗಿ ಬಂದೆವು. ಬೆನ್ನಟ್ಟಿ ಬಂದ 25ಕ್ಕೂ ಹೆಚ್ಚು ಮಂದಿ, ಲಾರಿ ಅಡ್ಡಗಟ್ಟಿದರು. ನಂತರ ಮಾರಕಾಸ್ತ್ರ ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿದರು’ ಎಂದು ಸುರೇಶ ರಾಜೂಕರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>