<p><strong>ಬೆಳಗಾವಿ</strong>: ಜಿಲ್ಲೆಯ ಗೋಕಾಕ ನಗರ ಹಾಗೂ ಮೂಡಲಗಿ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಮಾಡುತ್ತಿದ್ದ ಎರಡು ಆಸ್ಪತ್ರೆಗಳನ್ನು ಬೆಂಗಳೂರಿನ ವಿಶೇಷ ಅಧಿಕಾರಿಗಳ ತಂಡ ಸೋಮವಾರ ಬಂದ್ ಮಾಡಿದೆ. ಇಬ್ಬರು ವೈದ್ಯರು ಮತ್ತು ಒಬ್ಬ ಏಜೆಂಟ್ನನ್ನು ವಶಕ್ಕೆ ಪಡೆಯಲಾಗಿದೆ.</p><p>ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರಗಳ ಅಧಿನಿಯಮದ (ಪಿಸಿಪಿಎನ್ಡಿಟಿ) ಅಧಿಕಾರಿಗಳ ತಂಡವು ಗೋಕಾಕ, ಮೂಡಲಗಿ ಹಾಗೂ ಮಮದಾಪುರ ಗ್ರಾಮದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿತು.</p><p>‘ಗೋಕಾಕದ ಇಕ್ರಾ ಆಸ್ಪತ್ರೆ ಸ್ತ್ರೀರೋಗ ತಜ್ಞ ಡಾ.ಕುಟೆಜುಲ್ಲಾ ಕುಬ್ರಾ, ಮೂಡಲಗಿಯ ಡಾ.ಎಸ್.ಎಸ್.ಪಾಟೀಲ, ಏಜೆಂಟ್ ತುಕಾರಾಮ ಭೀಮಪ್ಪ ಖೋತ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಎರಡೂ ಆಸ್ಪತ್ರೆಗಳಲ್ಲಿ ಅಂದಾಜು 80 ಭ್ರೂಣಲಿಂಗ ಪತ್ತೆ ಮಾಡಿದ ದಾಖಲೆಗಳು ಸಿಕ್ಕಿವೆ. ಅದರಲ್ಲಿ 40 ಮಂದಿಗೆ ಈಗಾಗಲೇ ಗರ್ಭಪಾತ ಮಾಡಿಸಲಾಗಿದೆ. ಮಮದಾಪುರದ ವೈದ್ಯ ಡಾ.ಸಿದ್ಧಾರೂಢ ಪೂಜಾರಿ ತಲೆಮರೆಸಿಕೊಂಡಿದ್ದು, ತನಿಖೆ ಪ್ರಕ್ರಿಯೆ ನಡೆದಿದೆ’ ಎಂದು ಪಿಸಿಪಿಎನ್ಡಿಟಿ ಕಾಯ್ದೆ ಉಪನಿರ್ದೇಶಕ ಡಾ.ವಿವೇಕ್ ತಿಳಿಸಿದ್ದಾರೆ.</p><p>‘ಗೋಕಾಕ ಮತ್ತು ಮೂಡಲಗಿಯಲ್ಲಿನ ಗರ್ಭಪಾತ ಪ್ರಕರಣಗಳು ಮಂಡ್ಯದಲ್ಲಿ ಪತ್ತೆಯಾದ ಪ್ರಕರಣದಂತೆ ಇವೆ. ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳನ್ನೂ ದೂರವಿಟ್ಟು ನಾವು ದಾಳಿ ನಡೆಸಿದ್ದೇವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಬಂದ್ ಮಾಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.</p><p>‘ದಾಳಿ ವೇಳೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಂದ ಸಂಗ್ರಹಿಸಿದ್ದ ₹1.08 ಲಕ್ಷ ಹಣ, ₹20 ಸಾವಿರ ಫೋನ್ ಪೇ ವರ್ಗಾವಣೆ ಆಗಿದ್ದ ಹಣ, ಸ್ಕ್ಯಾನಿಂಗ್ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ವೈದ್ಯರ ನಾಲ್ಕು ವರ್ಷಗಳಿಂದ ಈ ಅಕ್ರಮ ನಡೆಸುತ್ತಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ’ ಎಂದಿದ್ದಾರೆ.</p><h2>ನೆರವಾದ ಗರ್ಭಿಣಿ...</h2><p>ಅಕ್ರಮ ಪತ್ತೆ ಮಾಡಲು ಗರ್ಭಿಣಿಯೊಬ್ಬರು ಅಧಿಕಾರಿಗಳ ತಂಡಕ್ಕೆ ನೆರವಾದರು. ಸೋಮವಾರ ನಾಲ್ವರು ಗರ್ಭಿಣಿಯರು ಏಜೆಂಟ್ ಮೂಲಕ ಗರ್ಭಪಾತಕ್ಕೆ ಆಸ್ಪತ್ರೆಗೆ ಬಂದಿದ್ದರು. ಅದರಲ್ಲಿ ತಂಡದೊಂದಿಗೆ ಇದ್ದ ಮಹಿಳೆ ಕೂಡ ಸೇರಿಕೊಂಡರು. ಏಜೆಂಟ್ಗೆ ₹15 ಸಾವಿರ ಹಾಗೂ ಗರ್ಭಪಾತ ಮಾಡುವ ವೈದ್ಯರಿಗೆ ₹20 ಸಾವಿರ ನಿಗದಿ ಮಾಡಲಾಗಿತ್ತು. ಹಣ ವರ್ಗಾವಣೆ ಆಗುತ್ತಿದ್ದಂತೆಯೇ ಅಧಿಕಾರಿಗಳು ದಾಳಿ ನಡೆಸಿದರು.</p><p>ಅಕ್ರಮ ಬಯಲಿಗೆಳೆಯಲು ನೆರವಾದ ಮಹಿಳೆಗೆ ಅಧಿಕಾರಿಗಳು ₹1 ಲಕ್ಷ ಬಹುಮಾನ ಘೋಷಿಸಿದ್ದಾರೆ. ಅಲ್ಲದೇ, ಗರ್ಭಪಾತಕ್ಕೆ ಒಳಗಾಗಲು ಬಂದಿದ್ದ ಉಳಿದ ಮೂವರ ಮೇಲೂ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಜಿಲ್ಲೆಯ ಗೋಕಾಕ ನಗರ ಹಾಗೂ ಮೂಡಲಗಿ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಮಾಡುತ್ತಿದ್ದ ಎರಡು ಆಸ್ಪತ್ರೆಗಳನ್ನು ಬೆಂಗಳೂರಿನ ವಿಶೇಷ ಅಧಿಕಾರಿಗಳ ತಂಡ ಸೋಮವಾರ ಬಂದ್ ಮಾಡಿದೆ. ಇಬ್ಬರು ವೈದ್ಯರು ಮತ್ತು ಒಬ್ಬ ಏಜೆಂಟ್ನನ್ನು ವಶಕ್ಕೆ ಪಡೆಯಲಾಗಿದೆ.</p><p>ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರಗಳ ಅಧಿನಿಯಮದ (ಪಿಸಿಪಿಎನ್ಡಿಟಿ) ಅಧಿಕಾರಿಗಳ ತಂಡವು ಗೋಕಾಕ, ಮೂಡಲಗಿ ಹಾಗೂ ಮಮದಾಪುರ ಗ್ರಾಮದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿತು.</p><p>‘ಗೋಕಾಕದ ಇಕ್ರಾ ಆಸ್ಪತ್ರೆ ಸ್ತ್ರೀರೋಗ ತಜ್ಞ ಡಾ.ಕುಟೆಜುಲ್ಲಾ ಕುಬ್ರಾ, ಮೂಡಲಗಿಯ ಡಾ.ಎಸ್.ಎಸ್.ಪಾಟೀಲ, ಏಜೆಂಟ್ ತುಕಾರಾಮ ಭೀಮಪ್ಪ ಖೋತ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಎರಡೂ ಆಸ್ಪತ್ರೆಗಳಲ್ಲಿ ಅಂದಾಜು 80 ಭ್ರೂಣಲಿಂಗ ಪತ್ತೆ ಮಾಡಿದ ದಾಖಲೆಗಳು ಸಿಕ್ಕಿವೆ. ಅದರಲ್ಲಿ 40 ಮಂದಿಗೆ ಈಗಾಗಲೇ ಗರ್ಭಪಾತ ಮಾಡಿಸಲಾಗಿದೆ. ಮಮದಾಪುರದ ವೈದ್ಯ ಡಾ.ಸಿದ್ಧಾರೂಢ ಪೂಜಾರಿ ತಲೆಮರೆಸಿಕೊಂಡಿದ್ದು, ತನಿಖೆ ಪ್ರಕ್ರಿಯೆ ನಡೆದಿದೆ’ ಎಂದು ಪಿಸಿಪಿಎನ್ಡಿಟಿ ಕಾಯ್ದೆ ಉಪನಿರ್ದೇಶಕ ಡಾ.ವಿವೇಕ್ ತಿಳಿಸಿದ್ದಾರೆ.</p><p>‘ಗೋಕಾಕ ಮತ್ತು ಮೂಡಲಗಿಯಲ್ಲಿನ ಗರ್ಭಪಾತ ಪ್ರಕರಣಗಳು ಮಂಡ್ಯದಲ್ಲಿ ಪತ್ತೆಯಾದ ಪ್ರಕರಣದಂತೆ ಇವೆ. ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳನ್ನೂ ದೂರವಿಟ್ಟು ನಾವು ದಾಳಿ ನಡೆಸಿದ್ದೇವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಬಂದ್ ಮಾಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.</p><p>‘ದಾಳಿ ವೇಳೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಂದ ಸಂಗ್ರಹಿಸಿದ್ದ ₹1.08 ಲಕ್ಷ ಹಣ, ₹20 ಸಾವಿರ ಫೋನ್ ಪೇ ವರ್ಗಾವಣೆ ಆಗಿದ್ದ ಹಣ, ಸ್ಕ್ಯಾನಿಂಗ್ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ವೈದ್ಯರ ನಾಲ್ಕು ವರ್ಷಗಳಿಂದ ಈ ಅಕ್ರಮ ನಡೆಸುತ್ತಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ’ ಎಂದಿದ್ದಾರೆ.</p><h2>ನೆರವಾದ ಗರ್ಭಿಣಿ...</h2><p>ಅಕ್ರಮ ಪತ್ತೆ ಮಾಡಲು ಗರ್ಭಿಣಿಯೊಬ್ಬರು ಅಧಿಕಾರಿಗಳ ತಂಡಕ್ಕೆ ನೆರವಾದರು. ಸೋಮವಾರ ನಾಲ್ವರು ಗರ್ಭಿಣಿಯರು ಏಜೆಂಟ್ ಮೂಲಕ ಗರ್ಭಪಾತಕ್ಕೆ ಆಸ್ಪತ್ರೆಗೆ ಬಂದಿದ್ದರು. ಅದರಲ್ಲಿ ತಂಡದೊಂದಿಗೆ ಇದ್ದ ಮಹಿಳೆ ಕೂಡ ಸೇರಿಕೊಂಡರು. ಏಜೆಂಟ್ಗೆ ₹15 ಸಾವಿರ ಹಾಗೂ ಗರ್ಭಪಾತ ಮಾಡುವ ವೈದ್ಯರಿಗೆ ₹20 ಸಾವಿರ ನಿಗದಿ ಮಾಡಲಾಗಿತ್ತು. ಹಣ ವರ್ಗಾವಣೆ ಆಗುತ್ತಿದ್ದಂತೆಯೇ ಅಧಿಕಾರಿಗಳು ದಾಳಿ ನಡೆಸಿದರು.</p><p>ಅಕ್ರಮ ಬಯಲಿಗೆಳೆಯಲು ನೆರವಾದ ಮಹಿಳೆಗೆ ಅಧಿಕಾರಿಗಳು ₹1 ಲಕ್ಷ ಬಹುಮಾನ ಘೋಷಿಸಿದ್ದಾರೆ. ಅಲ್ಲದೇ, ಗರ್ಭಪಾತಕ್ಕೆ ಒಳಗಾಗಲು ಬಂದಿದ್ದ ಉಳಿದ ಮೂವರ ಮೇಲೂ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>