<p><strong>ರಾಯಬಾಗ</strong>: ಕರ್ಕಶವಾಗಿ ಶಬ್ದ ಮಾಡುವ ಬೈಕುಗಳನ್ನು ಓಡಾಡಿಸಿ ಜನರಿಗೆ ತೊಂದರೆ ಕೊಡುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಯಬಾಗ ಪಟ್ಟಣ ಮಾತ್ರವಲ್ಲ; ಚಿಂಚಲಿ ರಸ್ತೆ, ಚಿಕ್ಕೋಡಿ ರಸ್ತೆ, ಸ್ಟೇಷನ್ ರಸ್ತೆಯಲ್ಲೂ ಯುವಕರು ದಿನವೂ ಈ ಸರ್ಕಸ್ ಮಾಡುವುದು ಸಾಮಾನ್ಯವಾಗಿದೆ.</p>.<p>ತಮ್ಮ ದ್ವಿಚಕ್ರ ವಾಹನಗಳ ಸೈಲೆನ್ಸರ್ ಬದಲಾವಣೆ ಅಥವಾ ಮಾರ್ಪಾಡು ಮಾಡಿಕೊಳ್ಳುವ ಯುವಕರು ಕರ್ಕಶ ಶಬ್ದ ಮಾಡುತ್ತ ಬೈಕ್ ಓಡಿಸುತ್ತಿದ್ದಾರೆ. ಇದು ಇತರ ವಾಹನ ಚಾಲಕರಿಗೆ ಮಾತ್ರವಲ್ಲ; ರಸ್ತೆ ಇಕ್ಕೆಲಗಳ ನಿವಾಸಿಗಳಿಗೂ ಸಾಕಷ್ಟು ಕಿರಿಕಿರಿ ಮಾಡುತ್ತಿದೆ. ಪಟ್ಟಣದ ರಸ್ತೆಗಳಲ್ಲೇ ಅತಿ ವೇಗವಾಗಿ ಬೈಕ್ ಓಡಿಸುತ್ತಿದ್ದಾರೆ. ಇದರಿಂದ ಅಪಾಯಗಳೂ ಸಂಭವಿಸುವುದು ಸಾಮಾನ್ಯವಾಗಿದೆ.</p>.<p>ಅತಿ ಹೆಚ್ಚು ‘ಹಾರ್ಸ್ಪವರ್’ ವಾಹನ ಸಾಗುತ್ತಿದೆ ಎಂಬುದು ಕಿಲೋಮೀಟರ್ ದೂರದಿಂದಲೇ ಕಿವಿಗೆ ಬೀಳುತ್ತದೆ. ಇದರಿಂದ ಚಿಕ್ಕ ಮಕ್ಕಳು, ಹಿರಿಯರು ಆತಂಕದಲ್ಲಿ ರಸ್ತೆಗೆ ಇಳಿಯುವಂತಾಗಿದೆ. ತಮ್ಮ ದೊಡ್ಡ ಬೆಲೆಯ ವಾಹನಗಳ ದರ್ಪ ತೋರಿಸಿಕೊಳ್ಳುವ ಭರದಲ್ಲಿ ಯುವಕರು ಜನರಿಗೆ ಸಂಕಷ್ಟ ತಂದೊಡ್ಡಿದ್ದಾರೆ.</p>.<p>ಕೆಲವರಂತೂ ಶಾಲೆ, ಕಾಲೇಜುಗಳು ಬಿಟ್ಟ ನಂತರ ವಿದ್ಯಾರ್ಥಿನಿಯರ ಹಿಂದೆ ಕರ್ಕಶ ಶಬ್ದ ಮಾಡುತ್ತ ಹಿಂಬಾಲಿಸುವವರೂ ಇದ್ದಾರೆ. ಇದರಿಂದ ವಿದ್ಯಾರ್ಥಿನಿಯರು ಅಸಹಾಯಕರಾಗಿ ಹೆದರುವಂತಾಗಿದೆ.</p>.<p>ಕರ್ಕಶ ಶಬ್ದ ಮಾಡುವ ಹಾಗೂ ಮಾರ್ಪಾಡು ಮಾಡಲಾದ ಸೈಲೆನ್ಸರ್ಗಳನ್ನು ಕಿತ್ತು ರೂಲರ್ ಓಡಿಸಿ ನಾಶಪಡಿಸಬೇಕು ಎಂಬ ನಿಯಮವಿದೆ. ಯುವಜನರ ಈ ಮೊಂಡುತನ ಇದೂವರೆಗೆ ಪೊಲೀಸರ ಕಿವಿಗೆ ಬಿದ್ದಿಲ್ಲ. ಕೇಳಿಸಿದರೂ ಕೇಳದಂತೆ ಸುಮ್ಮನಾಗಿದ್ದಾರೆ ಎಂಬುದು ಜನರ ದೂರು.</p>.<p>‘ಜನರಿಗೆ ಕಿರಿಕಿರಿ ಉಂಟುಮಾಡುವ ಬೈಕ್ ಸವಾರರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುತ್ತೇವೆ. ಗ್ಯಾರೇಜ್ ಮಾಲೀಕರಿಗೂ ಖಡಕ್ ಸೂಚನೆ ನೀಡುತ್ತೇವೆ’ ಎಂದು ಸಿಪಿಐ ಎಚ್.ಡಿ.ಮುಲ್ಲಾ ಪ್ರತಿಕ್ರಿಯಿಸುತ್ತಾರೆ.</p>.<p> <strong>ಕರ್ಕಶ ಶಬ್ದ ಮಾಡುವ ವಾಹನಗಳ ಸಂಖ್ಯೆ ಪೊಲೀಸರಿಗೆ ನೀಡಿದರೆ ಸಾಕು; ಖುದ್ದಾಗಿ ಕ್ರಮ ವಹಿಸಲಾಗುವುದು. ನಿರಂತರ ಕಾರ್ಯಾಚರಣೆ ನಡೆಸಲಾಗುವುದು </strong></p><p><strong>-ಎಚ್.ಡಿ.ಮುಲ್ಲಾ ಸಿಪಿಐ</strong></p>.<p><strong>ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಕರ್ಕಶ ಶಬ್ದ ಮಾಡುವ ಬೈಕ್ ವಶಕ್ಕೆ ಪಡೆಯಬೇಕು. ತೊಂದರೆ ಮಾಡುವ ಸವಾರರ ಪರವಾನಗಿ ರದ್ದುಪಡಿಸಬೇಕು</strong></p><p><strong>- ಮಹೇಶ ತೇಲಿ ವಕೀಲ</strong></p>.<p>ಪ್ರ<strong>ಮುಖ ರಸ್ತೆಗಳಲ್ಲಿ ಕಾಲೇಜಿನ ಬಳಿ ಬೀಟ್ ಪೊಲೀಸರನ್ನು ನಿಯೋಜನೆ ಮಾಡಬೇಕು. ಜನರಿಗೆ ತೊಂದರೆ ಕೊಡುವ ಬೈಕ್ ಸವಾರರಿಂದ ವಾಹನ ಕಿತ್ತುಕೊಳ್ಳಬೇಕು </strong></p><p><strong>-ಸಂತೋಷ ನಾಯಿಕ ಸ್ಥಳೀಯ ಯುವಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಬಾಗ</strong>: ಕರ್ಕಶವಾಗಿ ಶಬ್ದ ಮಾಡುವ ಬೈಕುಗಳನ್ನು ಓಡಾಡಿಸಿ ಜನರಿಗೆ ತೊಂದರೆ ಕೊಡುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಯಬಾಗ ಪಟ್ಟಣ ಮಾತ್ರವಲ್ಲ; ಚಿಂಚಲಿ ರಸ್ತೆ, ಚಿಕ್ಕೋಡಿ ರಸ್ತೆ, ಸ್ಟೇಷನ್ ರಸ್ತೆಯಲ್ಲೂ ಯುವಕರು ದಿನವೂ ಈ ಸರ್ಕಸ್ ಮಾಡುವುದು ಸಾಮಾನ್ಯವಾಗಿದೆ.</p>.<p>ತಮ್ಮ ದ್ವಿಚಕ್ರ ವಾಹನಗಳ ಸೈಲೆನ್ಸರ್ ಬದಲಾವಣೆ ಅಥವಾ ಮಾರ್ಪಾಡು ಮಾಡಿಕೊಳ್ಳುವ ಯುವಕರು ಕರ್ಕಶ ಶಬ್ದ ಮಾಡುತ್ತ ಬೈಕ್ ಓಡಿಸುತ್ತಿದ್ದಾರೆ. ಇದು ಇತರ ವಾಹನ ಚಾಲಕರಿಗೆ ಮಾತ್ರವಲ್ಲ; ರಸ್ತೆ ಇಕ್ಕೆಲಗಳ ನಿವಾಸಿಗಳಿಗೂ ಸಾಕಷ್ಟು ಕಿರಿಕಿರಿ ಮಾಡುತ್ತಿದೆ. ಪಟ್ಟಣದ ರಸ್ತೆಗಳಲ್ಲೇ ಅತಿ ವೇಗವಾಗಿ ಬೈಕ್ ಓಡಿಸುತ್ತಿದ್ದಾರೆ. ಇದರಿಂದ ಅಪಾಯಗಳೂ ಸಂಭವಿಸುವುದು ಸಾಮಾನ್ಯವಾಗಿದೆ.</p>.<p>ಅತಿ ಹೆಚ್ಚು ‘ಹಾರ್ಸ್ಪವರ್’ ವಾಹನ ಸಾಗುತ್ತಿದೆ ಎಂಬುದು ಕಿಲೋಮೀಟರ್ ದೂರದಿಂದಲೇ ಕಿವಿಗೆ ಬೀಳುತ್ತದೆ. ಇದರಿಂದ ಚಿಕ್ಕ ಮಕ್ಕಳು, ಹಿರಿಯರು ಆತಂಕದಲ್ಲಿ ರಸ್ತೆಗೆ ಇಳಿಯುವಂತಾಗಿದೆ. ತಮ್ಮ ದೊಡ್ಡ ಬೆಲೆಯ ವಾಹನಗಳ ದರ್ಪ ತೋರಿಸಿಕೊಳ್ಳುವ ಭರದಲ್ಲಿ ಯುವಕರು ಜನರಿಗೆ ಸಂಕಷ್ಟ ತಂದೊಡ್ಡಿದ್ದಾರೆ.</p>.<p>ಕೆಲವರಂತೂ ಶಾಲೆ, ಕಾಲೇಜುಗಳು ಬಿಟ್ಟ ನಂತರ ವಿದ್ಯಾರ್ಥಿನಿಯರ ಹಿಂದೆ ಕರ್ಕಶ ಶಬ್ದ ಮಾಡುತ್ತ ಹಿಂಬಾಲಿಸುವವರೂ ಇದ್ದಾರೆ. ಇದರಿಂದ ವಿದ್ಯಾರ್ಥಿನಿಯರು ಅಸಹಾಯಕರಾಗಿ ಹೆದರುವಂತಾಗಿದೆ.</p>.<p>ಕರ್ಕಶ ಶಬ್ದ ಮಾಡುವ ಹಾಗೂ ಮಾರ್ಪಾಡು ಮಾಡಲಾದ ಸೈಲೆನ್ಸರ್ಗಳನ್ನು ಕಿತ್ತು ರೂಲರ್ ಓಡಿಸಿ ನಾಶಪಡಿಸಬೇಕು ಎಂಬ ನಿಯಮವಿದೆ. ಯುವಜನರ ಈ ಮೊಂಡುತನ ಇದೂವರೆಗೆ ಪೊಲೀಸರ ಕಿವಿಗೆ ಬಿದ್ದಿಲ್ಲ. ಕೇಳಿಸಿದರೂ ಕೇಳದಂತೆ ಸುಮ್ಮನಾಗಿದ್ದಾರೆ ಎಂಬುದು ಜನರ ದೂರು.</p>.<p>‘ಜನರಿಗೆ ಕಿರಿಕಿರಿ ಉಂಟುಮಾಡುವ ಬೈಕ್ ಸವಾರರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುತ್ತೇವೆ. ಗ್ಯಾರೇಜ್ ಮಾಲೀಕರಿಗೂ ಖಡಕ್ ಸೂಚನೆ ನೀಡುತ್ತೇವೆ’ ಎಂದು ಸಿಪಿಐ ಎಚ್.ಡಿ.ಮುಲ್ಲಾ ಪ್ರತಿಕ್ರಿಯಿಸುತ್ತಾರೆ.</p>.<p> <strong>ಕರ್ಕಶ ಶಬ್ದ ಮಾಡುವ ವಾಹನಗಳ ಸಂಖ್ಯೆ ಪೊಲೀಸರಿಗೆ ನೀಡಿದರೆ ಸಾಕು; ಖುದ್ದಾಗಿ ಕ್ರಮ ವಹಿಸಲಾಗುವುದು. ನಿರಂತರ ಕಾರ್ಯಾಚರಣೆ ನಡೆಸಲಾಗುವುದು </strong></p><p><strong>-ಎಚ್.ಡಿ.ಮುಲ್ಲಾ ಸಿಪಿಐ</strong></p>.<p><strong>ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಕರ್ಕಶ ಶಬ್ದ ಮಾಡುವ ಬೈಕ್ ವಶಕ್ಕೆ ಪಡೆಯಬೇಕು. ತೊಂದರೆ ಮಾಡುವ ಸವಾರರ ಪರವಾನಗಿ ರದ್ದುಪಡಿಸಬೇಕು</strong></p><p><strong>- ಮಹೇಶ ತೇಲಿ ವಕೀಲ</strong></p>.<p>ಪ್ರ<strong>ಮುಖ ರಸ್ತೆಗಳಲ್ಲಿ ಕಾಲೇಜಿನ ಬಳಿ ಬೀಟ್ ಪೊಲೀಸರನ್ನು ನಿಯೋಜನೆ ಮಾಡಬೇಕು. ಜನರಿಗೆ ತೊಂದರೆ ಕೊಡುವ ಬೈಕ್ ಸವಾರರಿಂದ ವಾಹನ ಕಿತ್ತುಕೊಳ್ಳಬೇಕು </strong></p><p><strong>-ಸಂತೋಷ ನಾಯಿಕ ಸ್ಥಳೀಯ ಯುವಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>