<p><strong>ಸವದತ್ತಿ</strong>: ‘ಸೌಹಾರ್ದ ಮನೋಭಾವದಿಂದ ಎಲ್ಲ ಹಬ್ಬಗಳ ಆಚರಣೆ ಜರುಗಬೇಕು. ಮೊಹರಂ ಹಬ್ಬವನ್ನು ಶಾಂತಿಯಿಂದ ಆಚರಿಸಿರಿ. ಮೊಹರಂ ಕೊನೆಯ ದಿನ ಡಿಜೆ ಹಚ್ಚಲು ಅನುಮತಿ ಇಲ್ಲ. ಧ್ವನಿವರ್ಧಕಗಳ ಬಳಕೆ ಇಲ್ಲದೇ ಹಬ್ಬ ಆಚರಿಸಿ, ಮುಂದಿನ ಪೀಳಿಗೆಗೆ ಹಬ್ಬಗಳ ಮಹತ್ವ ತಲುಪಿಸುವ ಕಾರ್ಯ ನಡೆಯಲಿ’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಧರ್ಮಾಕರ ಧರ್ಮಟ್ಟಿ ಹೇಳಿದರು.</p>.<p>ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಜರುಗಿದ ಮೊಹರಂ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. </p>.<p>‘ಶಾಂತಿ ಸುವ್ಯವಸ್ಥೆಗೆ ಧಕ್ಕೆಬಾರದಂತೆ ನಾಗರಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ. ವದಂತಿಗಳಿಗೆ ಕಿವಿಗೊಡಬೇಡಿ. ಅಂತರ್ಜಾಲದಲ್ಲಿ ಹರದಾಡುವ ವಿಷಯಗಳ ಕುರಿತು ಎಚ್ಚರ ವಹಿಸಿರಿ. ಸಮಸ್ಯೆಗಳಿದ್ದಲ್ಲಿ ಇಲಾಖೆಗೆ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಿ. ಇಲಾಖೆ ನಿಮ್ಮ ಜೊತೆಗೆ ಇರಲಿದೆ.<br> ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳ ಪಾಲನೆಯಾಗಬೇಕು. ಪೊಲೀಸ ಇಲಾಖೆಯ ಭಯ ಮತ್ತು ದಂಡಕ್ಕಾಗಿ ಹೆಲ್ಮೆಟ್ ಧಾರಣೆ ಮಾಡದಿರಿ’ ಎಂದರು.</p>.<p>‘ಈಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕುರಿತು ಎಚ್ಚರ ವಹಿಸಿ. ಹಣ, ನೌಕರಿಗಳಂತಹ ಆಮಿಷ ತೋರಿ ಹಣ ಲಪಟಾಯಿಸುವ ಕೃತ್ಯಗಳು ನಡೆದಿವೆ. ಅಪರಿಚಿತರೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಓಟಿಪಿ ಸೇರಿ ಇತರ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿರಿ’ ಎಂದರು.</p>.<p>ಪಿಎಸ್ಐ ಆನಂದ ಕ್ಯಾರಕಟ್ಟಿ ಮಾತನಾಡಿ, ‘ವಾಹನದಲ್ಲಿ ಸಂಚರಿಸುವಾಗ ಅಪರಿಚಿತರಿಂದ ದೂರವಿರಿ. ರಾತ್ರಿ ವೇಳೆ ಸಂಶಯಾಸ್ಪದ ಘಟನೆಗಳು ಹಾಗೂ ವ್ಯಕ್ತಿಗಳು ಕಂಡುಬಂದಲ್ಲಿ ಹಾಗೂ ಇತರೆ ತುರ್ತು ಸೇವೆಗಾಗಿ 112 ಗೆ ಸಂಪರ್ಕಿಸಿರಿ’ ಎಂದರು.</p>.<p>ಈ ವೇಳೆ ಯಲ್ಲಪ್ಪ ಗೊರವನಕೊಳ್ಳ, ಲತೀಫ್ ಸವದತ್ತಿ, ದತ್ತಾತ್ರೇಯ ಕುಲಕರ್ಣಿ, ದಿಲಾವರ ಮಲ್ಲಾ, ಬಾಬುಸಾಬ ನಾಶಿಪುಡಿ, ಹುಸೇನ ಗೊರವನಕೊಳ್ಳ, ದಿಲಾವರ ಸನದಿ, ಮಹಾದೇವ ಕಲಾಲ, ಹುಸೇನ ಬೈರಖದಾರ, ಕುತುಬುಸಾಬ ದೊಡವಾಡ ಹಾಗೂ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ</strong>: ‘ಸೌಹಾರ್ದ ಮನೋಭಾವದಿಂದ ಎಲ್ಲ ಹಬ್ಬಗಳ ಆಚರಣೆ ಜರುಗಬೇಕು. ಮೊಹರಂ ಹಬ್ಬವನ್ನು ಶಾಂತಿಯಿಂದ ಆಚರಿಸಿರಿ. ಮೊಹರಂ ಕೊನೆಯ ದಿನ ಡಿಜೆ ಹಚ್ಚಲು ಅನುಮತಿ ಇಲ್ಲ. ಧ್ವನಿವರ್ಧಕಗಳ ಬಳಕೆ ಇಲ್ಲದೇ ಹಬ್ಬ ಆಚರಿಸಿ, ಮುಂದಿನ ಪೀಳಿಗೆಗೆ ಹಬ್ಬಗಳ ಮಹತ್ವ ತಲುಪಿಸುವ ಕಾರ್ಯ ನಡೆಯಲಿ’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಧರ್ಮಾಕರ ಧರ್ಮಟ್ಟಿ ಹೇಳಿದರು.</p>.<p>ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಜರುಗಿದ ಮೊಹರಂ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. </p>.<p>‘ಶಾಂತಿ ಸುವ್ಯವಸ್ಥೆಗೆ ಧಕ್ಕೆಬಾರದಂತೆ ನಾಗರಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ. ವದಂತಿಗಳಿಗೆ ಕಿವಿಗೊಡಬೇಡಿ. ಅಂತರ್ಜಾಲದಲ್ಲಿ ಹರದಾಡುವ ವಿಷಯಗಳ ಕುರಿತು ಎಚ್ಚರ ವಹಿಸಿರಿ. ಸಮಸ್ಯೆಗಳಿದ್ದಲ್ಲಿ ಇಲಾಖೆಗೆ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಿ. ಇಲಾಖೆ ನಿಮ್ಮ ಜೊತೆಗೆ ಇರಲಿದೆ.<br> ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳ ಪಾಲನೆಯಾಗಬೇಕು. ಪೊಲೀಸ ಇಲಾಖೆಯ ಭಯ ಮತ್ತು ದಂಡಕ್ಕಾಗಿ ಹೆಲ್ಮೆಟ್ ಧಾರಣೆ ಮಾಡದಿರಿ’ ಎಂದರು.</p>.<p>‘ಈಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕುರಿತು ಎಚ್ಚರ ವಹಿಸಿ. ಹಣ, ನೌಕರಿಗಳಂತಹ ಆಮಿಷ ತೋರಿ ಹಣ ಲಪಟಾಯಿಸುವ ಕೃತ್ಯಗಳು ನಡೆದಿವೆ. ಅಪರಿಚಿತರೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಓಟಿಪಿ ಸೇರಿ ಇತರ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿರಿ’ ಎಂದರು.</p>.<p>ಪಿಎಸ್ಐ ಆನಂದ ಕ್ಯಾರಕಟ್ಟಿ ಮಾತನಾಡಿ, ‘ವಾಹನದಲ್ಲಿ ಸಂಚರಿಸುವಾಗ ಅಪರಿಚಿತರಿಂದ ದೂರವಿರಿ. ರಾತ್ರಿ ವೇಳೆ ಸಂಶಯಾಸ್ಪದ ಘಟನೆಗಳು ಹಾಗೂ ವ್ಯಕ್ತಿಗಳು ಕಂಡುಬಂದಲ್ಲಿ ಹಾಗೂ ಇತರೆ ತುರ್ತು ಸೇವೆಗಾಗಿ 112 ಗೆ ಸಂಪರ್ಕಿಸಿರಿ’ ಎಂದರು.</p>.<p>ಈ ವೇಳೆ ಯಲ್ಲಪ್ಪ ಗೊರವನಕೊಳ್ಳ, ಲತೀಫ್ ಸವದತ್ತಿ, ದತ್ತಾತ್ರೇಯ ಕುಲಕರ್ಣಿ, ದಿಲಾವರ ಮಲ್ಲಾ, ಬಾಬುಸಾಬ ನಾಶಿಪುಡಿ, ಹುಸೇನ ಗೊರವನಕೊಳ್ಳ, ದಿಲಾವರ ಸನದಿ, ಮಹಾದೇವ ಕಲಾಲ, ಹುಸೇನ ಬೈರಖದಾರ, ಕುತುಬುಸಾಬ ದೊಡವಾಡ ಹಾಗೂ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>