<p><strong>ಯಮಕನಮರಡಿ: </strong>ಹಿಡಕಲ್ ಜಲಾಶಯಕ್ಕಾಗಿ ಜಮೀನು ಕಳಕೊಂಡ ಹುಕ್ಕೇರಿ ತಾಲ್ಲೂಕಿನ ರೈತರಿಗೆ ಪರಿಹಾರ ಹಣ ಪ್ರಸ್ತಾವ ಸಲ್ಲಿಕೆಯಲ್ಲಿ ನೀರಾವರಿ ಇಲಾಖೆ ವಿಳಂಬಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ, ಜುಲೈ 19ರ ನಂತರ ರೈತಕುಟುಂಬ ಹೋರಾಟಕ್ಕೆ ಮುಂದಾಗಿದೆ.</p>.<p>ಹುಕ್ಕೇರಿ ತಾಲ್ಲೂಕಿನ ಮಾಸ್ತಿಹೊಳಿ ಸೇರಿದಂತೆ ನಾಲ್ಕು ಗ್ರಾಮದ ಹಲವು ರೈತರು 394.26 ಎಕರೆ ಜಮೀನು ಕಳೆದುಕೊಂಡಿದ್ದರು. ಆ ರೈತರಿಗೆ ಪರಿಹಾರ ಹಣ ಬಿಡುಗಡೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿ ಹಿಂದೆಂಟು ಹಾಕುತ್ತಿದೆ ಎಂದು ಆರೋಪಿಸಿ ಬೆಳಗಾವಿ ನೀರಾವರಿ ಇಲಾಖೆ ಮುಂದೆ ಕುಟುಂಬ ಸಹಿತ ಪ್ರತಿಭಟನೆ ಸಜ್ಜಾಗುತ್ತಿವೆ ಎಂದು ರೈತರಾದ ಬಾಳೇಶ ಮಾವನೂರಿ ಎಚ್ಚರಿಕೆ ನೀಡಿದ್ದಾರೆ.</p>.<p>ಅವರು ಸೋಮವಾರ ಧಾರವಾಡ ಹಾಗೂ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ಮಾಸ್ತಿಹೊಳಿ ಹಲವಾರು ರೈತರೊಂದಿಗೆ ಭೇಟಿ ನೀಡಿ ಪರಿಹಾರ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಒತ್ತಾಯಿಸಿ, ಮಾಧ್ಯಮರೊಂದಿಗೆ ಮಾತನಾಡಿದರು.</p>.<p>‘ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದಿದ್ದರೆ ಜಮೀನಿನಲ್ಲಿ ಹಿಡಕಲ್ ಡ್ಯಾಂ ನೀರನ್ನು ನಿಲ್ಲಿಸುವುದನ್ನು ಬಂದ್ ಮಾಡಬೇಕು. ಪ್ರತಿಭಟನೆ ವೇಳೆ ಯಾವುದೇ ಅನಾಹುತ ನಡೆದರೆ ಸಂಭವಿಸಿದರೆ ಇಲಾಖೆಯೇ ಹೊಣೆಗಾರರು’ ಎಂದು ಹೇಳಿದರು.</p>.<p>‘ನಾಲ್ಕು ಗ್ರಾಮದಲ್ಲಿನ ಯಾವುದೇ ಒಬ್ಬ ಪರಿಹಾರ ವಂಚಿತ ರೈತ ವಿಷಸೇವನೆ ಮಾಡಿ ಮೃತಪಟ್ಟರೆ ಆ ಶವವನ್ನು ಬೆಳಗಾವಿ ನೀರಾವರಿ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ಮಾಡಲಾಗುವುದು. ಪರಿಹಾರ ಹಣದ ಪ್ರಸ್ತಾವ ಸಲ್ಲಿಕೆ ಮಾಡುವವರೆಗೂ ಶವದ ಅಂತ್ಯಸಂಸ್ಕಾರ ಮಾಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.</p>.<p>ಈ ಸಂದರ್ಭದಲ್ಲಿ ಭರಮಾ ಕಮತಿ, ನಿಂಗಪ್ಪಾ ಓಝಿ, ಉದಯ ಹೀರೆಮಠ ಭರಮಾ ಮೊಕಾಶಿ, ನಿಂಗಣ್ಣಾ ಚೌಗಲಾ, ಸಂತೋಷ ಪಾಟೀಲ, ಬಾಳೇಶ ಬಂಬರಗಿ, ಬಸು ಪಾಟೀಲ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಮಕನಮರಡಿ: </strong>ಹಿಡಕಲ್ ಜಲಾಶಯಕ್ಕಾಗಿ ಜಮೀನು ಕಳಕೊಂಡ ಹುಕ್ಕೇರಿ ತಾಲ್ಲೂಕಿನ ರೈತರಿಗೆ ಪರಿಹಾರ ಹಣ ಪ್ರಸ್ತಾವ ಸಲ್ಲಿಕೆಯಲ್ಲಿ ನೀರಾವರಿ ಇಲಾಖೆ ವಿಳಂಬಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ, ಜುಲೈ 19ರ ನಂತರ ರೈತಕುಟುಂಬ ಹೋರಾಟಕ್ಕೆ ಮುಂದಾಗಿದೆ.</p>.<p>ಹುಕ್ಕೇರಿ ತಾಲ್ಲೂಕಿನ ಮಾಸ್ತಿಹೊಳಿ ಸೇರಿದಂತೆ ನಾಲ್ಕು ಗ್ರಾಮದ ಹಲವು ರೈತರು 394.26 ಎಕರೆ ಜಮೀನು ಕಳೆದುಕೊಂಡಿದ್ದರು. ಆ ರೈತರಿಗೆ ಪರಿಹಾರ ಹಣ ಬಿಡುಗಡೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿ ಹಿಂದೆಂಟು ಹಾಕುತ್ತಿದೆ ಎಂದು ಆರೋಪಿಸಿ ಬೆಳಗಾವಿ ನೀರಾವರಿ ಇಲಾಖೆ ಮುಂದೆ ಕುಟುಂಬ ಸಹಿತ ಪ್ರತಿಭಟನೆ ಸಜ್ಜಾಗುತ್ತಿವೆ ಎಂದು ರೈತರಾದ ಬಾಳೇಶ ಮಾವನೂರಿ ಎಚ್ಚರಿಕೆ ನೀಡಿದ್ದಾರೆ.</p>.<p>ಅವರು ಸೋಮವಾರ ಧಾರವಾಡ ಹಾಗೂ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ಮಾಸ್ತಿಹೊಳಿ ಹಲವಾರು ರೈತರೊಂದಿಗೆ ಭೇಟಿ ನೀಡಿ ಪರಿಹಾರ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಒತ್ತಾಯಿಸಿ, ಮಾಧ್ಯಮರೊಂದಿಗೆ ಮಾತನಾಡಿದರು.</p>.<p>‘ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದಿದ್ದರೆ ಜಮೀನಿನಲ್ಲಿ ಹಿಡಕಲ್ ಡ್ಯಾಂ ನೀರನ್ನು ನಿಲ್ಲಿಸುವುದನ್ನು ಬಂದ್ ಮಾಡಬೇಕು. ಪ್ರತಿಭಟನೆ ವೇಳೆ ಯಾವುದೇ ಅನಾಹುತ ನಡೆದರೆ ಸಂಭವಿಸಿದರೆ ಇಲಾಖೆಯೇ ಹೊಣೆಗಾರರು’ ಎಂದು ಹೇಳಿದರು.</p>.<p>‘ನಾಲ್ಕು ಗ್ರಾಮದಲ್ಲಿನ ಯಾವುದೇ ಒಬ್ಬ ಪರಿಹಾರ ವಂಚಿತ ರೈತ ವಿಷಸೇವನೆ ಮಾಡಿ ಮೃತಪಟ್ಟರೆ ಆ ಶವವನ್ನು ಬೆಳಗಾವಿ ನೀರಾವರಿ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ಮಾಡಲಾಗುವುದು. ಪರಿಹಾರ ಹಣದ ಪ್ರಸ್ತಾವ ಸಲ್ಲಿಕೆ ಮಾಡುವವರೆಗೂ ಶವದ ಅಂತ್ಯಸಂಸ್ಕಾರ ಮಾಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.</p>.<p>ಈ ಸಂದರ್ಭದಲ್ಲಿ ಭರಮಾ ಕಮತಿ, ನಿಂಗಪ್ಪಾ ಓಝಿ, ಉದಯ ಹೀರೆಮಠ ಭರಮಾ ಮೊಕಾಶಿ, ನಿಂಗಣ್ಣಾ ಚೌಗಲಾ, ಸಂತೋಷ ಪಾಟೀಲ, ಬಾಳೇಶ ಬಂಬರಗಿ, ಬಸು ಪಾಟೀಲ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>