<p><strong>ಹಂದಿಗುಂದ</strong>: 'ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗಬೇಕು. ಪಶು ಆಸ್ಪತ್ರೆಯ ಎಲ್ಲ ವೈದ್ಯರು ಸಾರ್ವಜನಿಕರು, ರೈತರು ಹೇಳಿದ ತಕ್ಷಣವೇ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು’ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.</p><p>ಸಮೀಪದ ಹಿಡಕಲ್ಲದಲ್ಲಿ ಮಂಗಳವಾರ ಪಶು ಚಿಕಿತ್ಸಾಲಯ ಪ್ರಾರಂಭೋತ್ಸವದಲ್ಲಿ ಗೋ ಪೂಜೆ ಮಾಡಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.</p><p>ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಪ್ಪ ಪಾರ್ಥನಳ್ಳಿ ಮಾತನಾಡಿ, ‘ಜನರ ಬಹುದಿನಗಳ ಬೇಡಿಕೆಯನ್ನು ಶಾಸಕ ಮಹೇಂದ್ರ ತಮ್ಮಣ್ಣವರ ಈಡೇರಿಸಿದ್ದಾರೆ. ಅವರಿಗೆ ಕೃತಜ್ಞರಾಗಿದ್ದೇವೆ’ ಎಂದರು.</p><p>ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿ ಸಚಿನ ಸೌಂದಲಗಿ, ತಾಲ್ಲೂಕು ವೈದ್ಯಾಧಿಕಾರಿ ಎಂ.ಬಿ.ಪಾಟೀಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಧಾ ಢವಳೇಶ್ವರ, ಡಾ.ಮನೋಹರ ಪತ್ತಾರ, ಡಾ.ಮಹಾವೀರ ಕಂಕಣವಾಡಿ, ಡಾ.ಎಚ್.ಟಿ.ನಾವಿ, ಡಾ.ಕೆ.ಎಲ್.ನಂದಾರ, ಡಾ.ವಸಂತ ಗಲಗಲಿ, ಡಾ.ಜಯಶ್ರೀ ತೇರದಾಳ, ಪಿಡಿಒ ಮಹಾದೇವ ಕುಂಬಾರ, ಪ್ರದೀಪ ಹಾಲ್ಗುಣಿ, ಸಚಿನ ಘಂಟಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂದಿಗುಂದ</strong>: 'ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗಬೇಕು. ಪಶು ಆಸ್ಪತ್ರೆಯ ಎಲ್ಲ ವೈದ್ಯರು ಸಾರ್ವಜನಿಕರು, ರೈತರು ಹೇಳಿದ ತಕ್ಷಣವೇ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು’ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.</p><p>ಸಮೀಪದ ಹಿಡಕಲ್ಲದಲ್ಲಿ ಮಂಗಳವಾರ ಪಶು ಚಿಕಿತ್ಸಾಲಯ ಪ್ರಾರಂಭೋತ್ಸವದಲ್ಲಿ ಗೋ ಪೂಜೆ ಮಾಡಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.</p><p>ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಪ್ಪ ಪಾರ್ಥನಳ್ಳಿ ಮಾತನಾಡಿ, ‘ಜನರ ಬಹುದಿನಗಳ ಬೇಡಿಕೆಯನ್ನು ಶಾಸಕ ಮಹೇಂದ್ರ ತಮ್ಮಣ್ಣವರ ಈಡೇರಿಸಿದ್ದಾರೆ. ಅವರಿಗೆ ಕೃತಜ್ಞರಾಗಿದ್ದೇವೆ’ ಎಂದರು.</p><p>ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿ ಸಚಿನ ಸೌಂದಲಗಿ, ತಾಲ್ಲೂಕು ವೈದ್ಯಾಧಿಕಾರಿ ಎಂ.ಬಿ.ಪಾಟೀಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಧಾ ಢವಳೇಶ್ವರ, ಡಾ.ಮನೋಹರ ಪತ್ತಾರ, ಡಾ.ಮಹಾವೀರ ಕಂಕಣವಾಡಿ, ಡಾ.ಎಚ್.ಟಿ.ನಾವಿ, ಡಾ.ಕೆ.ಎಲ್.ನಂದಾರ, ಡಾ.ವಸಂತ ಗಲಗಲಿ, ಡಾ.ಜಯಶ್ರೀ ತೇರದಾಳ, ಪಿಡಿಒ ಮಹಾದೇವ ಕುಂಬಾರ, ಪ್ರದೀಪ ಹಾಲ್ಗುಣಿ, ಸಚಿನ ಘಂಟಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>