<p><strong>ಮೂಡಲಗಿ</strong>: ‘ಘಟಪ್ರಭೆ ಧಬಧಬೆಗೆ ಜೀವಜಲ ದಡಗುಟ್ಟಿ ಹರಿದಿರುವಂತೆ, ಭರವಸೆಯ ತೂಗು ಸೇತುವೆ ದಾಟಿ’ ಕವಿ ಚನ್ನವೀರ ಕಣವಿ ಅವರು ಗೋಕಾಕದ ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಅವರ ಕುರಿತು ಬರೆದಿರುವ ಸುನೀತದ ಸಾಲು ಇದು. ಈ ಸಾಲುಗಳಿಗೆ ಅರ್ಥ ಬರುವಂತೆ ಬಾಳಿದವರು ಈ ಸಾಹಿತಿ.</p>.<p>ಸಿ.ಕೆ. ನಾವಲಗಿ ಅವರು ಮೂರೂವರೆ ದಶಕಗಳ ಅಧ್ಯಯನ, ಪರಿಶ್ರಮದ ಮುಪ್ಪರಿಗೊಂಡ ಪರಿಪಕ್ವತೆಯ ವ್ಯಕ್ತಿತ್ವ. ಓದು, ಬರವಣಿಗೆ, ಅಧ್ಯಾಪನಗಳೊಂದಿಗೆ ಜಾನಪದ ಸಾಹಿತ್ಯದಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದಾರೆ.</p>.<p>‘ನನ್ನ ನಂತರ ನನ್ನ ರೀತಿಯಲ್ಲಿ ಆಲೋಚಿಸುವ ಗೋಕಾಕ ಪರಿಸರದ ಏಕೈಕ ವ್ಯಕ್ತಿ ಸಿ.ಕೆ. ನಾವಲಗಿ’ ಎಂದು ಚಂದ್ರಶೇಖರ ಕಂಬಾರ ಅವರ ಹೇಳಿಕೆ ಅನ್ವರ್ಥ.</p>.<p>ಚನ್ನಬಸಪ್ಪ ಕಲ್ಲಪ್ಪ ನಾವಲಗಿ ಕಿತ್ತೂರು ತಾಲ್ಲೂಕು ಬಸರಕೋಡದಲ್ಲಿ ಹುಟ್ಟಿದವರು. ಅಪ್ಪ ಕಲ್ಲಪ್ಪ, ಅವ್ವ ಬಸಲಿಂಗವ್ವ ಅವರು ಹೇಳುತ್ತಿದ್ದ ತ್ರಿಪದಿ, ಜಾನಪದ ಕತೆಗಳಿಂದ ಚನ್ನಬಸಪ್ಪ ದೇಸೀಯತೆಗೆ ಪ್ರಭಾವಿತರಾಗಿದ್ದರು. </p>.<p>1985ರಲ್ಲಿ ಗೋಕಾಕದ ಜೆಎಸ್ಎಸ್ ಪದವಿ ಕಾಲೇಜುದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿ, ಕೆಲವು ವರ್ಷ ಪ್ರಾಚಾರ್ಯರಾಗಿ 2016ರಲ್ಲಿ ನಿವೃತ್ತರಾಗಿದ್ದಾರೆ.</p>.<p>ಜಾನಪದ, ವಚನಸಾಹಿತ್ಯ, ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ಸಂಪಾದನೆ ಹೀಗೆ 60ಕ್ಕೂ ಅಧಿಕ ಮೌಲಿಕ ಗ್ರಂಥಗಳನ್ನು ಬರೆದಿದ್ದಾರೆ. ‘ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು- ಒಂದು ಅಧ್ಯಯನ’ ವಚನ ಸಾಹಿತ್ಯವನ್ನು ಜಾನಪದ ಹಿನ್ನೆಲೆಯಲ್ಲಿ ಉನ್ನತ ಸಂಶೋಧನೆಗೆ ಒಳಪಡಿಸಿದ ಮೊದಲ ಪಿಎಚ್.ಡಿ. ಗ್ರಂಥ’ ಎಂದು ಸಂಶೋಧಕ ವೀರಣ್ಣ ರಾಜೂರ ಅವರ ಮನದಾದಳ ಅನಿಸಿಕೆ.</p>.<p>ಗ್ರಾಮೀಣ ಗ್ರಹಿಕೆ, ಜಾನಪದ ಚಿಂತನ, ಜಾನಪದ ಸಮಾಲೋಕ, ಜಾನಪದ ಕಥಾಲೋಕ ಸಂಚಯ, ಜಾನಪದ ಸಡಗರ ಹೀಗೆ ಜಾನಪದ ಕುರಿತಾದ ಹಲವಾರು ಕೃತಿಗಳಲ್ಲಿ ಇಡೀ ಜಾನಪದ ಲೋಕ ಅನಾವರಣಗೊಂಡಿದೆ. ಉತ್ತರ ಕರ್ನಾಟಕದ ಅನೇಕ ಜಾನಪದ ಸಂಗತಿಗಳನ್ನು ಸಿಕೆಎನ್ ತಮ್ಮ ಬರಹಗಳ ತೆಕ್ಕೆಗೆ ತೆಗೆದುಕೊಂಡಿದ್ದಾರೆ.</p>.<p>ಜಾನಪದ ಸಿರಿ, ಜಾನಪದ ವಿದ್ವತ್ ಗೌರವ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ.ಬಿ.ಎಸ್. ಗದ್ದಗಿಮಠ ಜಾನಪದ ತಜ್ಞ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸಿಕೆಎನ್ ಅವರನ್ನು ಅರಿಸಿ ಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ</strong>: ‘ಘಟಪ್ರಭೆ ಧಬಧಬೆಗೆ ಜೀವಜಲ ದಡಗುಟ್ಟಿ ಹರಿದಿರುವಂತೆ, ಭರವಸೆಯ ತೂಗು ಸೇತುವೆ ದಾಟಿ’ ಕವಿ ಚನ್ನವೀರ ಕಣವಿ ಅವರು ಗೋಕಾಕದ ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಅವರ ಕುರಿತು ಬರೆದಿರುವ ಸುನೀತದ ಸಾಲು ಇದು. ಈ ಸಾಲುಗಳಿಗೆ ಅರ್ಥ ಬರುವಂತೆ ಬಾಳಿದವರು ಈ ಸಾಹಿತಿ.</p>.<p>ಸಿ.ಕೆ. ನಾವಲಗಿ ಅವರು ಮೂರೂವರೆ ದಶಕಗಳ ಅಧ್ಯಯನ, ಪರಿಶ್ರಮದ ಮುಪ್ಪರಿಗೊಂಡ ಪರಿಪಕ್ವತೆಯ ವ್ಯಕ್ತಿತ್ವ. ಓದು, ಬರವಣಿಗೆ, ಅಧ್ಯಾಪನಗಳೊಂದಿಗೆ ಜಾನಪದ ಸಾಹಿತ್ಯದಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದಾರೆ.</p>.<p>‘ನನ್ನ ನಂತರ ನನ್ನ ರೀತಿಯಲ್ಲಿ ಆಲೋಚಿಸುವ ಗೋಕಾಕ ಪರಿಸರದ ಏಕೈಕ ವ್ಯಕ್ತಿ ಸಿ.ಕೆ. ನಾವಲಗಿ’ ಎಂದು ಚಂದ್ರಶೇಖರ ಕಂಬಾರ ಅವರ ಹೇಳಿಕೆ ಅನ್ವರ್ಥ.</p>.<p>ಚನ್ನಬಸಪ್ಪ ಕಲ್ಲಪ್ಪ ನಾವಲಗಿ ಕಿತ್ತೂರು ತಾಲ್ಲೂಕು ಬಸರಕೋಡದಲ್ಲಿ ಹುಟ್ಟಿದವರು. ಅಪ್ಪ ಕಲ್ಲಪ್ಪ, ಅವ್ವ ಬಸಲಿಂಗವ್ವ ಅವರು ಹೇಳುತ್ತಿದ್ದ ತ್ರಿಪದಿ, ಜಾನಪದ ಕತೆಗಳಿಂದ ಚನ್ನಬಸಪ್ಪ ದೇಸೀಯತೆಗೆ ಪ್ರಭಾವಿತರಾಗಿದ್ದರು. </p>.<p>1985ರಲ್ಲಿ ಗೋಕಾಕದ ಜೆಎಸ್ಎಸ್ ಪದವಿ ಕಾಲೇಜುದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿ, ಕೆಲವು ವರ್ಷ ಪ್ರಾಚಾರ್ಯರಾಗಿ 2016ರಲ್ಲಿ ನಿವೃತ್ತರಾಗಿದ್ದಾರೆ.</p>.<p>ಜಾನಪದ, ವಚನಸಾಹಿತ್ಯ, ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ಸಂಪಾದನೆ ಹೀಗೆ 60ಕ್ಕೂ ಅಧಿಕ ಮೌಲಿಕ ಗ್ರಂಥಗಳನ್ನು ಬರೆದಿದ್ದಾರೆ. ‘ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು- ಒಂದು ಅಧ್ಯಯನ’ ವಚನ ಸಾಹಿತ್ಯವನ್ನು ಜಾನಪದ ಹಿನ್ನೆಲೆಯಲ್ಲಿ ಉನ್ನತ ಸಂಶೋಧನೆಗೆ ಒಳಪಡಿಸಿದ ಮೊದಲ ಪಿಎಚ್.ಡಿ. ಗ್ರಂಥ’ ಎಂದು ಸಂಶೋಧಕ ವೀರಣ್ಣ ರಾಜೂರ ಅವರ ಮನದಾದಳ ಅನಿಸಿಕೆ.</p>.<p>ಗ್ರಾಮೀಣ ಗ್ರಹಿಕೆ, ಜಾನಪದ ಚಿಂತನ, ಜಾನಪದ ಸಮಾಲೋಕ, ಜಾನಪದ ಕಥಾಲೋಕ ಸಂಚಯ, ಜಾನಪದ ಸಡಗರ ಹೀಗೆ ಜಾನಪದ ಕುರಿತಾದ ಹಲವಾರು ಕೃತಿಗಳಲ್ಲಿ ಇಡೀ ಜಾನಪದ ಲೋಕ ಅನಾವರಣಗೊಂಡಿದೆ. ಉತ್ತರ ಕರ್ನಾಟಕದ ಅನೇಕ ಜಾನಪದ ಸಂಗತಿಗಳನ್ನು ಸಿಕೆಎನ್ ತಮ್ಮ ಬರಹಗಳ ತೆಕ್ಕೆಗೆ ತೆಗೆದುಕೊಂಡಿದ್ದಾರೆ.</p>.<p>ಜಾನಪದ ಸಿರಿ, ಜಾನಪದ ವಿದ್ವತ್ ಗೌರವ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ.ಬಿ.ಎಸ್. ಗದ್ದಗಿಮಠ ಜಾನಪದ ತಜ್ಞ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸಿಕೆಎನ್ ಅವರನ್ನು ಅರಿಸಿ ಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>