ಹಿರೇಬಾಗೇವಾಡಿ: 25 ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮದೇವಿ ಜಾತ್ರೆ
ಶಿವಕುಮಾರ ಪಾಟೀಲ
Published : 8 ಏಪ್ರಿಲ್ 2024, 8:19 IST
Last Updated : 8 ಏಪ್ರಿಲ್ 2024, 8:19 IST
ಫಾಲೋ ಮಾಡಿ
Comments
ಗ್ರಾಮದೇವಿ ಜಾತ್ರೆ ಪ್ರಯುಕ್ತ ಬೃಹತ್ ರಥವನ್ನು ಸಿದ್ಧಪಡಿಸಿರುವುದು
ಸಿದ್ಧವಾಗಿದೆ ಬೃಹತ್ ರಥ
ಗ್ರಾಮದೇವಿ ಜಾತ್ರೆ ಅಂಗವಾಗಿ ಬೈಲಹೊಂಗಲ ತಾಲ್ಲೂಕಿನ ತಿಗಡಿಯ ಮೂರ್ತಿಕಾರರು ಬೃಹತ್ ರಥ ಸಿದ್ಧಪಡಿಸಿದ್ದಾರೆ. ಕಳಸ ಸೇರಿ 39 ಅಡಿ ಎತ್ತರ ಹೊಂದಿರುವ ತೇರು ಆಕರ್ಷಕವಾಗಿದೆ. 17ರಿಂದ 18 ಟನ್ ಭಾರವಿದ್ದು ₹70 ಲಕ್ಷ ವೆಚ್ಚದಲ್ಲಿ ಸಾಗವಾಣಿ ಹೊನ್ನೆ ಮರದ ಕಟ್ಟಿಗೆಯಲ್ಲಿ ಜೀವ ತಳೆದಿದೆ. ಕೆತ್ತನೆ ಕಾರ್ಯ ಮುಗಿದಿದೆ. ಈ ಜಾತ್ರೆಯಲ್ಲಿ ಭಾಗವಹಿಸುವ ಸಹಸ್ರಾರು ಭಕ್ತರು ತೇರು ಎಳೆದು ಸಂಭ್ರಮಿಸಲಿದ್ದಾರೆ.