<p><strong>ಚಿಕ್ಕೋಡಿ:</strong> ಆಷಾಢ ಏಕಾದಶಿ ಅಂಗವಾಗಿ ಸುಕ್ಷೇತ್ರ ಪಂಢರಪುರದಲ್ಲಿ ವಿಠ್ಠಲನ ದರ್ಶನ ಪಡೆದು ಹಿಂದಿರುವಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜುಲೈ 18ರಂದು ನಡೆದಿದೆ.</p>.<p>ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಪಟ್ಟಣದ ನಿವಾಸಿ ಲಹು ರಾಮಾ ಬೇವಿನಕಟ್ಟಿ (62) ಮೃತಪಟ್ಟ ವ್ಯಕ್ತಿ.</p>.<p>ಲಹು ಬೇವಿನಕಟ್ಟಿ ಅವರು ಜುಲೈ 8 ರಂದು ಪಾದಯಾತ್ರೆ ಮೂಲಕ ಬೋರಗಾಂವ ಪಟ್ಟಣದಿಂದ ಹೊರಟು, ಸುಕ್ಷೇತ್ರ ಪಂಢರಪುರ ತಲುಪಿ, 17ರಂದು ವಿಠ್ಠಲ ರುಕ್ಮಿಣಿ ದರ್ಶನ ಪಡೆದುಕೊಂಡಿದ್ದರು. 18ರಂದು ಬೋರಗಾಂವ ಪಟ್ಟಣಕ್ಕೆ ಹೊರಡಲು ಅಣಿಯಾಗುತ್ತಿದ್ದಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಪಂಢರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಪಂಢಪುರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಅಳಿಯ ಹಾಗೂ ಮೊಮ್ಮಕ್ಕಳು ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ:</strong> ಆಷಾಢ ಏಕಾದಶಿ ಅಂಗವಾಗಿ ಸುಕ್ಷೇತ್ರ ಪಂಢರಪುರದಲ್ಲಿ ವಿಠ್ಠಲನ ದರ್ಶನ ಪಡೆದು ಹಿಂದಿರುವಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜುಲೈ 18ರಂದು ನಡೆದಿದೆ.</p>.<p>ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಪಟ್ಟಣದ ನಿವಾಸಿ ಲಹು ರಾಮಾ ಬೇವಿನಕಟ್ಟಿ (62) ಮೃತಪಟ್ಟ ವ್ಯಕ್ತಿ.</p>.<p>ಲಹು ಬೇವಿನಕಟ್ಟಿ ಅವರು ಜುಲೈ 8 ರಂದು ಪಾದಯಾತ್ರೆ ಮೂಲಕ ಬೋರಗಾಂವ ಪಟ್ಟಣದಿಂದ ಹೊರಟು, ಸುಕ್ಷೇತ್ರ ಪಂಢರಪುರ ತಲುಪಿ, 17ರಂದು ವಿಠ್ಠಲ ರುಕ್ಮಿಣಿ ದರ್ಶನ ಪಡೆದುಕೊಂಡಿದ್ದರು. 18ರಂದು ಬೋರಗಾಂವ ಪಟ್ಟಣಕ್ಕೆ ಹೊರಡಲು ಅಣಿಯಾಗುತ್ತಿದ್ದಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಪಂಢರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಪಂಢಪುರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಅಳಿಯ ಹಾಗೂ ಮೊಮ್ಮಕ್ಕಳು ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>