<p><strong>ಬೆಳಗಾವಿ:</strong> ಇಂಡಿಯನ್ ಡೆಂಟಲ್ ಅಸೋಸಿಯೇಷನ್ ವತಿಯಿಂದ ಕೋಲ್ಕತ್ತಾದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ 74ನೇ ದಂತ ವೈದ್ಯರ ಸಮಾವೇಶದಲ್ಲಿ ಅಸೋಸಿಯೇಷನ್ನ ಬೆಳಗಾವಿ ಶಾಖೆಯ ದಂತ ವೈದ್ಯರು ಏಳು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು.</p>.<p>ಇಂಡಿಯನ್ ಡೆಂಟಲ್ ಅಸೋಸಿಯೇಷನ್ನ ಬೆಳಗಾವಿ ಶಾಖೆಗೆ ‘ರಾಷ್ಟ್ರೀಯ ಸರ್ವಾಂಗೀಣ ಪ್ರಶಸ್ತಿ’ ನೀಡಲಾಗಿದೆ. ಡಾ.ರಾಧಾಕೃಷ್ಣ ಹರವಾಡೇಕರ್ ಅವರಿಗೆ ‘ಅತ್ಯುತ್ತಮ ಅಧ್ಯಕ್ಷ’ ಪುರಸ್ಕಾರ, ಡಾ.ಬಿಂದು ಹೊಸಮನಿ ಅವರಿಗೆ ‘ಅತ್ಯುತ್ತಮ ಕಾರ್ಯದರ್ಶಿ’ ಹಾಗೂ ‘ಅತ್ಯುತ್ತಮ ಜರ್ನಲ್’ ಪುರಸ್ಕಾರ (ರನ್ನರ್ಅಪ್), ಡಾ.ವೆಂಕಟೇಶ್ ತೇಲ್ಕರ್ ಅವರಿಗೆ ‘ಅತ್ಯುತ್ತಮ ಸಿಡಿಎಚ್ ಚಟುವಟಿಕೆ’ ಪ್ರಶಸ್ತಿ ನೀಡಲಾಗಿದೆ.</p>.<p>ಅಸೋಸಿಯೇಷನ್ನ ಬೆಳಗಾವಿ ಶಾಖೆಗೆ ‘ರಾಷ್ಟ್ರಮಟ್ಟದ ಅತ್ಯುತ್ತಮ ವಿದ್ಯಾರ್ಥಿ ಚಟುವಟಿಕೆ’ ಹಾಗೂ ‘ಅತ್ಯುತ್ತಮ ವೈಜ್ಞಾನಿಕ ಚಟುವಟಿಕೆ’ ಪ್ರಶಸ್ತಿಗಳು ಲಭಿಸಿವೆ.</p>.<p>ದಂತ ವೈದ್ಯಕೀಯ ವಿಜ್ಞಾನದ ಪಿತಾಮಯ ಆರ್.ಅಹ್ಮದ್ ಅವರ ಸ್ಮರಣಾರ್ಥ ಕೋಲ್ಕತ್ತಾದ ಬಿಸ್ವಾ ಬಾಂಗ್ಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಐಡಿಎ ಅಧ್ಯಕ್ಷ ಡಾ.ರಾಜೀವ್ ಕೆ. ಚುಗ್, ಗೌರವ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ್ ಧೋಬ್ಲೆ ಪ್ರಶಸ್ತಿ ಪ್ರದಾನ ಮಾಡಿದರು.</p>.<p>ಅಸೋಸಿಯೇಷನ್ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ನವೀನ ದೊಡವಾಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಇಂಡಿಯನ್ ಡೆಂಟಲ್ ಅಸೋಸಿಯೇಷನ್ ವತಿಯಿಂದ ಕೋಲ್ಕತ್ತಾದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ 74ನೇ ದಂತ ವೈದ್ಯರ ಸಮಾವೇಶದಲ್ಲಿ ಅಸೋಸಿಯೇಷನ್ನ ಬೆಳಗಾವಿ ಶಾಖೆಯ ದಂತ ವೈದ್ಯರು ಏಳು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು.</p>.<p>ಇಂಡಿಯನ್ ಡೆಂಟಲ್ ಅಸೋಸಿಯೇಷನ್ನ ಬೆಳಗಾವಿ ಶಾಖೆಗೆ ‘ರಾಷ್ಟ್ರೀಯ ಸರ್ವಾಂಗೀಣ ಪ್ರಶಸ್ತಿ’ ನೀಡಲಾಗಿದೆ. ಡಾ.ರಾಧಾಕೃಷ್ಣ ಹರವಾಡೇಕರ್ ಅವರಿಗೆ ‘ಅತ್ಯುತ್ತಮ ಅಧ್ಯಕ್ಷ’ ಪುರಸ್ಕಾರ, ಡಾ.ಬಿಂದು ಹೊಸಮನಿ ಅವರಿಗೆ ‘ಅತ್ಯುತ್ತಮ ಕಾರ್ಯದರ್ಶಿ’ ಹಾಗೂ ‘ಅತ್ಯುತ್ತಮ ಜರ್ನಲ್’ ಪುರಸ್ಕಾರ (ರನ್ನರ್ಅಪ್), ಡಾ.ವೆಂಕಟೇಶ್ ತೇಲ್ಕರ್ ಅವರಿಗೆ ‘ಅತ್ಯುತ್ತಮ ಸಿಡಿಎಚ್ ಚಟುವಟಿಕೆ’ ಪ್ರಶಸ್ತಿ ನೀಡಲಾಗಿದೆ.</p>.<p>ಅಸೋಸಿಯೇಷನ್ನ ಬೆಳಗಾವಿ ಶಾಖೆಗೆ ‘ರಾಷ್ಟ್ರಮಟ್ಟದ ಅತ್ಯುತ್ತಮ ವಿದ್ಯಾರ್ಥಿ ಚಟುವಟಿಕೆ’ ಹಾಗೂ ‘ಅತ್ಯುತ್ತಮ ವೈಜ್ಞಾನಿಕ ಚಟುವಟಿಕೆ’ ಪ್ರಶಸ್ತಿಗಳು ಲಭಿಸಿವೆ.</p>.<p>ದಂತ ವೈದ್ಯಕೀಯ ವಿಜ್ಞಾನದ ಪಿತಾಮಯ ಆರ್.ಅಹ್ಮದ್ ಅವರ ಸ್ಮರಣಾರ್ಥ ಕೋಲ್ಕತ್ತಾದ ಬಿಸ್ವಾ ಬಾಂಗ್ಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಐಡಿಎ ಅಧ್ಯಕ್ಷ ಡಾ.ರಾಜೀವ್ ಕೆ. ಚುಗ್, ಗೌರವ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ್ ಧೋಬ್ಲೆ ಪ್ರಶಸ್ತಿ ಪ್ರದಾನ ಮಾಡಿದರು.</p>.<p>ಅಸೋಸಿಯೇಷನ್ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ನವೀನ ದೊಡವಾಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>