<p><strong>ಬೈಲಹೊಂಗಲ</strong>: ಸಮೀಪದ ಮಾಟೊಳ್ಳಿ ಗ್ರಾಮ ಅಭಿವೃದ್ಧಿಯಲ್ಲಿ ಸಂಪೂರ್ಣ ಹಿಂದುಳಿದೆ. ಗ್ರಾಮಸ್ಥರು ಹೆಜ್ಜೆ, ಹೆಜ್ಜೆಗೂ ಪ್ರತಿನಿತ್ಯ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಗ್ರಾಮದ ರೈತರಂತೂ ಜಮೀನುಗಳಿಗೆ ಹೋಗಿ, ಬರಲು ಸರಿಯಾದ ರಸ್ತೆ ಇಲ್ಲದೆ ಪರದಾಡುವಂತಾಗಿದೆ.</p>.<p>ಬೈಲಹೊಂಗಲ ಮತಕ್ಷೇತ್ರದ ಮಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಟೊಳ್ಳಿ ಗ್ರಾಮದಲ್ಲಿ ಕನಿಷ್ಠ ಸೌಲಭ್ಯವೂ ಮಾಯವಾಗಿದೆ. ಸುಮಾರು 3,500 ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಬಹುತೇಕ ರೈತ ಕುಟುಂಬಗಳಿವೆ. 2,000 ಮತದಾರರಿದ್ದು, ಎರಡು ಗ್ರಾಮ ಪಂಚಾಯಿತಿ ವಾರ್ಡ್ಗಳಿವೆ.</p>.<p>ಗ್ರಾಮದ ಮುಖ್ಯ ಬೀದಿಗಳಾದ ನಂದೆನ್ನವರ, ಲಂಕೆನ್ನವರ, ಭೋವಿ, ದೊಡ್ಡೆನ್ನವರ ಓಣಿಗಳಲ್ಲಿ ಸರಿಯಾದ ರಸ್ತೆ, ಗಟಾರಗಳಿಲ್ಲ. ಕೆಲವು ಕಡೆ ಮಾತ್ರ ಸಿಮೆಂಟ್ ರಸ್ತೆ ಮಾಡಲಾಗಿದೆ. ಆದರೆ ರಸ್ತೆ ಮೇಲೆಯೇ ಚರಂಡಿ ನೀರು ಹರಿದು ದುರ್ನಾತ ಸೂಸುತ್ತಿದೆ. ಇದರಿಂದ ಬೀದಿಗಳಲ್ಲಿ ಕಲುಷಿತ ವಾತಾವರಣ ಹರಡಿದೆ.</p>.<p><strong>ವಿಲೇವಾರಿ ಆಗದ ಕಸ:</strong> </p><p>ಬೀದಿಗಳಲ್ಲಿ ಎಸೆದ ಕಸ ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಸುತ್ತಲಿನ ಪರಿಸರ ಹೊಲಸುಮಯವಾಗಿದೆ. ಮೂಗು ಮುಚ್ಚಿಕೊಂಡೇ ಸಂಚರಿಸುವ ಅನಿವಾರ್ಯ ಇದೆ. ಕೆಲವು ಮನೆಗಳ ಕೊಳಚೆ ನೀರು ರಸ್ತೆ ಮೇಲೆಯೇ ನಿಲ್ಲುತ್ತಿದೆ. ಸೊಳ್ಳೆಗಳ ಕಾಟ ಮಿತಿಮೀರಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.</p>.<p><strong>ದೇವಸ್ಥಾನಗಳಿಗಿಲ್ಲ ಸ್ವಚ್ಛತೆ:</strong> </p><p>ಗ್ರಾಮದಲ್ಲಿ ಬಸವೇಶ್ವರ, ಗುರು ಸಿದ್ಧಾರೂಢ, ಪಾಂಡುರಂಗ, ಹನುಮಂತ, ಶಿವಯ್ಯಜ್ಜ, ಬಂಡೆಮ್ಮ, ದುರ್ಗಾ ದೇವಿ ದೇವಸ್ಥಾನಗಳಿವೆ. ಈ ದೇವಸ್ಥಾನಗಳ ಅಕ್ಕಪಕ್ಕದಲ್ಲಿ ಸ್ವಚ್ಛತೆ ಮಾಯವಾಗಿದೆ. ದೇವಸ್ಥಾನಗಳ ಅಕ್ಕಪಕ್ಕದಲ್ಲಿ ಬೆಳೆದಿರುವ ಕಸ ತೆಗೆದು ಶುಚಿಗೊಳಿಸುವಂತೆ ಭಕ್ತರ ಆಗ್ರಹವಾಗಿದೆ.</p>.<p><strong>ಹಾಳಾದ ಬಸ್ ತುಂಗುದಾಣ</strong>: </p><p>‘ಮಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗ್ರಾಮದಲ್ಲಿ ಐದು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಊರಿನ ಮುಖ್ಯ ರಸ್ತೆಯಲ್ಲಿರುವ ತುಂಗುದಾಣ ಹಾಳಾಗಿದೆ. ಹಾಗಾಗಿ ಮಳೆಯಲ್ಲಿ ನಿಂತು ಬಸ್ಗಾಗಿ ಕಾಯುವಂತಾಗಿದೆ’ ಎನ್ನುತ್ತಾರೆ ಮಲ್ಲಿಕಾರ್ಜುನ ಪೆಂಟೇದ.</p>.<p><strong>ಆರೋಗ್ಯ ಸೇವೆ ಇಲ್ಲ:</strong> </p><p>ಮೂಲಸೌಕರ್ಯ ಇಲ್ಲದೆ ಪರದಾಡುತ್ತಿರುವ ಗ್ರಾಮಸ್ಥರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವಾಗಿದೆ. ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾದರೆ ಹೊಸೂರ, ಬೈಲಹೊಂಗಲ, ಬೆಳಗಾವಿಗೆ ತೆರಳುವಂತಾಗಿದೆ.</p>.<p><strong>ರೈತರ ಜಮೀನುಗಳಿಗೆ ರಸ್ತೆ ಇಲ್ಲ:</strong> </p><p>ಗ್ರಾಮದ ರೈತರ ಜಮೀನುಗಳಿಗೆ ಹೋಗಿ, ಬರಲು ಸರಿಯಾದ ರಸ್ತೆ ಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರ ಜಮೀನುಗಳಿಗೆ ಕೂಡಲೇ ರಸ್ತೆ ಮಾಡಿಕೊಡಿ ಎಂದು ರೈತರಾದ ಚನ್ನಪ್ಪ ನಂದೆನ್ನವರ, ಮಹಾಂತೇಶ ಗುಡಿಮನಿ, ಪ್ರಕಾಶ ಗುಡಿಮನಿ, ವೀರಭದ್ರ ಛಬ್ಬಿ, ಪುಂಡಲೀಕ ಮಾದರ, ಫಕ್ಕೀರಪ್ಪ ಪೆಂಟೇದ, ರುದ್ರಪ್ಪ ಹಕಾರಿ, ರಾಯಪ್ಪ ಲಂಕೆನ್ನವರ ಆಗ್ರಹಿಸಿದ್ದಾರೆ.</p>.<div><blockquote>ಮಳೆ ಆಗುತ್ತಿರುವುದರಿಂದ ರೈತರ ಜಮೀನುಗಳಿಗೆ ಹೋಗಿ ಬರುವ ರಸ್ತೆ ಹದಗೆಟ್ಟಿದೆ. ರೈತರು ಕೃಷಿ ಪರಿಕರ ಉತ್ಪನ್ನ ಈ ರಸ್ತೆಯಲ್ಲಿ ಸಾಗಿಸಲು ಹರ ಸಾಹಸ ಪಡುವಂತಾಗಿದೆ</blockquote><span class="attribution">ರವಿ ಮಾದರ, ಗ್ರಾಮ ಪಂಚಾಯ್ತಿ ಸದಸ್ಯ</span></div>.<div><blockquote>ರೈತರ ಜಮೀನುಗಳಿಗೆ ತೆರಳು ರಸ್ತೆ ಸುಧಾರಿಸಲು ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಲಾಗಿದೆ. ಆದರೆ ಯಾರೊಬ್ಬರೂ ಗಮನ ಕೊಟ್ಟಿಲ್ಲ.</blockquote><span class="attribution">ಬಾಳಪ್ಪ ನಂದೆನ್ನವರ, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಲಹೊಂಗಲ</strong>: ಸಮೀಪದ ಮಾಟೊಳ್ಳಿ ಗ್ರಾಮ ಅಭಿವೃದ್ಧಿಯಲ್ಲಿ ಸಂಪೂರ್ಣ ಹಿಂದುಳಿದೆ. ಗ್ರಾಮಸ್ಥರು ಹೆಜ್ಜೆ, ಹೆಜ್ಜೆಗೂ ಪ್ರತಿನಿತ್ಯ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಗ್ರಾಮದ ರೈತರಂತೂ ಜಮೀನುಗಳಿಗೆ ಹೋಗಿ, ಬರಲು ಸರಿಯಾದ ರಸ್ತೆ ಇಲ್ಲದೆ ಪರದಾಡುವಂತಾಗಿದೆ.</p>.<p>ಬೈಲಹೊಂಗಲ ಮತಕ್ಷೇತ್ರದ ಮಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಟೊಳ್ಳಿ ಗ್ರಾಮದಲ್ಲಿ ಕನಿಷ್ಠ ಸೌಲಭ್ಯವೂ ಮಾಯವಾಗಿದೆ. ಸುಮಾರು 3,500 ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಬಹುತೇಕ ರೈತ ಕುಟುಂಬಗಳಿವೆ. 2,000 ಮತದಾರರಿದ್ದು, ಎರಡು ಗ್ರಾಮ ಪಂಚಾಯಿತಿ ವಾರ್ಡ್ಗಳಿವೆ.</p>.<p>ಗ್ರಾಮದ ಮುಖ್ಯ ಬೀದಿಗಳಾದ ನಂದೆನ್ನವರ, ಲಂಕೆನ್ನವರ, ಭೋವಿ, ದೊಡ್ಡೆನ್ನವರ ಓಣಿಗಳಲ್ಲಿ ಸರಿಯಾದ ರಸ್ತೆ, ಗಟಾರಗಳಿಲ್ಲ. ಕೆಲವು ಕಡೆ ಮಾತ್ರ ಸಿಮೆಂಟ್ ರಸ್ತೆ ಮಾಡಲಾಗಿದೆ. ಆದರೆ ರಸ್ತೆ ಮೇಲೆಯೇ ಚರಂಡಿ ನೀರು ಹರಿದು ದುರ್ನಾತ ಸೂಸುತ್ತಿದೆ. ಇದರಿಂದ ಬೀದಿಗಳಲ್ಲಿ ಕಲುಷಿತ ವಾತಾವರಣ ಹರಡಿದೆ.</p>.<p><strong>ವಿಲೇವಾರಿ ಆಗದ ಕಸ:</strong> </p><p>ಬೀದಿಗಳಲ್ಲಿ ಎಸೆದ ಕಸ ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಸುತ್ತಲಿನ ಪರಿಸರ ಹೊಲಸುಮಯವಾಗಿದೆ. ಮೂಗು ಮುಚ್ಚಿಕೊಂಡೇ ಸಂಚರಿಸುವ ಅನಿವಾರ್ಯ ಇದೆ. ಕೆಲವು ಮನೆಗಳ ಕೊಳಚೆ ನೀರು ರಸ್ತೆ ಮೇಲೆಯೇ ನಿಲ್ಲುತ್ತಿದೆ. ಸೊಳ್ಳೆಗಳ ಕಾಟ ಮಿತಿಮೀರಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.</p>.<p><strong>ದೇವಸ್ಥಾನಗಳಿಗಿಲ್ಲ ಸ್ವಚ್ಛತೆ:</strong> </p><p>ಗ್ರಾಮದಲ್ಲಿ ಬಸವೇಶ್ವರ, ಗುರು ಸಿದ್ಧಾರೂಢ, ಪಾಂಡುರಂಗ, ಹನುಮಂತ, ಶಿವಯ್ಯಜ್ಜ, ಬಂಡೆಮ್ಮ, ದುರ್ಗಾ ದೇವಿ ದೇವಸ್ಥಾನಗಳಿವೆ. ಈ ದೇವಸ್ಥಾನಗಳ ಅಕ್ಕಪಕ್ಕದಲ್ಲಿ ಸ್ವಚ್ಛತೆ ಮಾಯವಾಗಿದೆ. ದೇವಸ್ಥಾನಗಳ ಅಕ್ಕಪಕ್ಕದಲ್ಲಿ ಬೆಳೆದಿರುವ ಕಸ ತೆಗೆದು ಶುಚಿಗೊಳಿಸುವಂತೆ ಭಕ್ತರ ಆಗ್ರಹವಾಗಿದೆ.</p>.<p><strong>ಹಾಳಾದ ಬಸ್ ತುಂಗುದಾಣ</strong>: </p><p>‘ಮಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗ್ರಾಮದಲ್ಲಿ ಐದು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಊರಿನ ಮುಖ್ಯ ರಸ್ತೆಯಲ್ಲಿರುವ ತುಂಗುದಾಣ ಹಾಳಾಗಿದೆ. ಹಾಗಾಗಿ ಮಳೆಯಲ್ಲಿ ನಿಂತು ಬಸ್ಗಾಗಿ ಕಾಯುವಂತಾಗಿದೆ’ ಎನ್ನುತ್ತಾರೆ ಮಲ್ಲಿಕಾರ್ಜುನ ಪೆಂಟೇದ.</p>.<p><strong>ಆರೋಗ್ಯ ಸೇವೆ ಇಲ್ಲ:</strong> </p><p>ಮೂಲಸೌಕರ್ಯ ಇಲ್ಲದೆ ಪರದಾಡುತ್ತಿರುವ ಗ್ರಾಮಸ್ಥರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವಾಗಿದೆ. ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾದರೆ ಹೊಸೂರ, ಬೈಲಹೊಂಗಲ, ಬೆಳಗಾವಿಗೆ ತೆರಳುವಂತಾಗಿದೆ.</p>.<p><strong>ರೈತರ ಜಮೀನುಗಳಿಗೆ ರಸ್ತೆ ಇಲ್ಲ:</strong> </p><p>ಗ್ರಾಮದ ರೈತರ ಜಮೀನುಗಳಿಗೆ ಹೋಗಿ, ಬರಲು ಸರಿಯಾದ ರಸ್ತೆ ಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರ ಜಮೀನುಗಳಿಗೆ ಕೂಡಲೇ ರಸ್ತೆ ಮಾಡಿಕೊಡಿ ಎಂದು ರೈತರಾದ ಚನ್ನಪ್ಪ ನಂದೆನ್ನವರ, ಮಹಾಂತೇಶ ಗುಡಿಮನಿ, ಪ್ರಕಾಶ ಗುಡಿಮನಿ, ವೀರಭದ್ರ ಛಬ್ಬಿ, ಪುಂಡಲೀಕ ಮಾದರ, ಫಕ್ಕೀರಪ್ಪ ಪೆಂಟೇದ, ರುದ್ರಪ್ಪ ಹಕಾರಿ, ರಾಯಪ್ಪ ಲಂಕೆನ್ನವರ ಆಗ್ರಹಿಸಿದ್ದಾರೆ.</p>.<div><blockquote>ಮಳೆ ಆಗುತ್ತಿರುವುದರಿಂದ ರೈತರ ಜಮೀನುಗಳಿಗೆ ಹೋಗಿ ಬರುವ ರಸ್ತೆ ಹದಗೆಟ್ಟಿದೆ. ರೈತರು ಕೃಷಿ ಪರಿಕರ ಉತ್ಪನ್ನ ಈ ರಸ್ತೆಯಲ್ಲಿ ಸಾಗಿಸಲು ಹರ ಸಾಹಸ ಪಡುವಂತಾಗಿದೆ</blockquote><span class="attribution">ರವಿ ಮಾದರ, ಗ್ರಾಮ ಪಂಚಾಯ್ತಿ ಸದಸ್ಯ</span></div>.<div><blockquote>ರೈತರ ಜಮೀನುಗಳಿಗೆ ತೆರಳು ರಸ್ತೆ ಸುಧಾರಿಸಲು ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಲಾಗಿದೆ. ಆದರೆ ಯಾರೊಬ್ಬರೂ ಗಮನ ಕೊಟ್ಟಿಲ್ಲ.</blockquote><span class="attribution">ಬಾಳಪ್ಪ ನಂದೆನ್ನವರ, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>