<p><strong>ಹುಕ್ಕೇರಿ:</strong> ಜಲಮೂಲಗಳಾದ ನದಿ, ಕೆರೆ, ಕಾಲುವೆ, ತೆರೆದ, ಕೊಳವೆ ಬಾವಿ ಮತ್ತಿತರ ಮೂಲಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ಇವು ಆಸರೆ ಆಗುತ್ತವೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ ಹೇಳಿದರು.</p>.<p>ತಾಲ್ಲೂಕಿನ ಶಿರಹಟ್ಟಿ, ಸಾರಾಪೂರ, ಹುಲ್ಲೋಳಿ, ಬೆಳವಿಯ ಎರಡು ಕೆರೆಗಳು, ಚಿಕ್ಕೋಡಿ ತಾಲ್ಲೂಕಿನ ಕೆಂಚನಟ್ಟಿ ಕೆರೆಗಳಿಗೆ ಭಾನುವಾರ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.</p>.<p>ಮಾಜಿ ಸಚಿವ ದಿ.ಉಮೇಶ ಕತ್ತಿ ಪ್ರತಿ ವರ್ಷ ಮಳೆಗಾಲದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಆದರೆ ರೈತರು ಕೆರೆಗಳಿಗೆ ಬರುವ ನೀರನ್ನು ದುರುಪಯೋಗಪಡಿಸಿ ಕೊಳ್ಳುತ್ತಿರುವುದು ಸರಿಯಲ್ಲ. ನಿಮ್ಮೂರಿನ ಕೆರೆಗಳಂತೆ ಬೇರೆ ಕೆರೆಗಳಿಗೂ ನೀರು ಹರಿಸುವ ಪೈಪ್ಲೈನ್ ಹಾಳು ಮಾಡುತ್ತಿರುವುದು ಅನ್ಯಾಯ. ರೈತರು ತಿಳಿವಳಿಕೆ ಹೊಂದಿ ಇತರರಿಗೂ ತೊಂದರೆ ಆಗದಂತೆ ನೋಡಿಕೊಳ್ಳಲು ವಿನಂತಿಸಿದರು.</p>.<p>ಪ್ರಗತಿ ಪರ ರೈತ, ಬೆಳವಿ ಗ್ರಾಮ ಪಂಚಾಯತಿ ಸದಸ್ಯ ಸತ್ಯಪ್ಪ ನಾಯಿಕ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ್ ಬ್ಯಾಳಿ, ಮುಖಂಡರಾದ ಅಣ್ಣಣ್ಣ ಬ್ಯಾಳಿ, ಕೆ.ಜಿ.ಪಾಟೀಲ, ವಕೀಲ ಡಿ.ಕೆ.ಅವರಗೋಳ, ಶಂಕರ ಬಡಗಾಂವಿ, ವಿಶ್ವನಾಥ ನಾಯಿಕ, ಅಪ್ಪಾಸಾಹೇಬ ಸಾರಾಪೂರೆ, ಎಂ.ಬಿ.ನಾಯಿಕ, ಸಂಜೀವ ನಾಯಿಕ, ಶಿವನಾಯಿಕ ನಾಯಿಕ, ರಾಮಣ್ಣ ತೇರದಾಳಿ, ಪಿ.ಡಿ.ಚೌಗಲಾ, ಬಸವರಾಜ ಗಂಗನ್ನವರ, ನೀರಾವರಿ ಅಧಿಕಾರಿಗಳಾದ ಸಾಧಿಕ್ ಮುಲ್ಲಾ, ಸುಭಾಸ ಮಹಿಮಗೋಳ, ಚಂದ್ರಶೇಖರ ಚೌಗಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ:</strong> ಜಲಮೂಲಗಳಾದ ನದಿ, ಕೆರೆ, ಕಾಲುವೆ, ತೆರೆದ, ಕೊಳವೆ ಬಾವಿ ಮತ್ತಿತರ ಮೂಲಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ಇವು ಆಸರೆ ಆಗುತ್ತವೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ ಹೇಳಿದರು.</p>.<p>ತಾಲ್ಲೂಕಿನ ಶಿರಹಟ್ಟಿ, ಸಾರಾಪೂರ, ಹುಲ್ಲೋಳಿ, ಬೆಳವಿಯ ಎರಡು ಕೆರೆಗಳು, ಚಿಕ್ಕೋಡಿ ತಾಲ್ಲೂಕಿನ ಕೆಂಚನಟ್ಟಿ ಕೆರೆಗಳಿಗೆ ಭಾನುವಾರ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.</p>.<p>ಮಾಜಿ ಸಚಿವ ದಿ.ಉಮೇಶ ಕತ್ತಿ ಪ್ರತಿ ವರ್ಷ ಮಳೆಗಾಲದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಆದರೆ ರೈತರು ಕೆರೆಗಳಿಗೆ ಬರುವ ನೀರನ್ನು ದುರುಪಯೋಗಪಡಿಸಿ ಕೊಳ್ಳುತ್ತಿರುವುದು ಸರಿಯಲ್ಲ. ನಿಮ್ಮೂರಿನ ಕೆರೆಗಳಂತೆ ಬೇರೆ ಕೆರೆಗಳಿಗೂ ನೀರು ಹರಿಸುವ ಪೈಪ್ಲೈನ್ ಹಾಳು ಮಾಡುತ್ತಿರುವುದು ಅನ್ಯಾಯ. ರೈತರು ತಿಳಿವಳಿಕೆ ಹೊಂದಿ ಇತರರಿಗೂ ತೊಂದರೆ ಆಗದಂತೆ ನೋಡಿಕೊಳ್ಳಲು ವಿನಂತಿಸಿದರು.</p>.<p>ಪ್ರಗತಿ ಪರ ರೈತ, ಬೆಳವಿ ಗ್ರಾಮ ಪಂಚಾಯತಿ ಸದಸ್ಯ ಸತ್ಯಪ್ಪ ನಾಯಿಕ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ್ ಬ್ಯಾಳಿ, ಮುಖಂಡರಾದ ಅಣ್ಣಣ್ಣ ಬ್ಯಾಳಿ, ಕೆ.ಜಿ.ಪಾಟೀಲ, ವಕೀಲ ಡಿ.ಕೆ.ಅವರಗೋಳ, ಶಂಕರ ಬಡಗಾಂವಿ, ವಿಶ್ವನಾಥ ನಾಯಿಕ, ಅಪ್ಪಾಸಾಹೇಬ ಸಾರಾಪೂರೆ, ಎಂ.ಬಿ.ನಾಯಿಕ, ಸಂಜೀವ ನಾಯಿಕ, ಶಿವನಾಯಿಕ ನಾಯಿಕ, ರಾಮಣ್ಣ ತೇರದಾಳಿ, ಪಿ.ಡಿ.ಚೌಗಲಾ, ಬಸವರಾಜ ಗಂಗನ್ನವರ, ನೀರಾವರಿ ಅಧಿಕಾರಿಗಳಾದ ಸಾಧಿಕ್ ಮುಲ್ಲಾ, ಸುಭಾಸ ಮಹಿಮಗೋಳ, ಚಂದ್ರಶೇಖರ ಚೌಗಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>