<p><strong>ಚಿಕ್ಕೋಡಿ (ಬೆಳಗಾವಿ ಜಿಲ್ಲೆ):</strong> ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅಭಿಮಾನಿಗಳ ಬಳಗದಿಂದ ತಾಲ್ಲೂಕಿನ ಮಲಿಕವಾಡದಲ್ಲಿ ಮಾರ್ಚ್ 5ರಂದು ಜೋಡೆತ್ತಿನ ಚಕ್ಕಡಿ ಓಡಿಸುವ ಶರ್ಯತ್ತು ಆಯೋಜಿಸಲಾಗಿದೆ. ಎರಡು ವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ₹51 ಲಕ್ಷ ಮೊತ್ತದ ವಿವಿಧ ಬಹುಮಾನ ಘೋಷಿಸಲಾಗಿದೆ.</p><p>‘ಅ’ ವರ್ಗದ ಶರ್ಯತ್ತಿನಲ್ಲಿ ಕರ್ನಾಟಕವೂ ಸೇರಿ ಎಲ್ಲ ರಾಜ್ಯಗಳ ರೈತರು ಪಾಲ್ಗೊಳ್ಳಬಹುದು. ‘ಬ’ ವಿಭಾಗದಲ್ಲಿ ಕರ್ನಾಟಕದವರು ಮಾತ್ರ ಸ್ಪರ್ಧಿಸಬಹುದು.</p><p>‘ಅ’ ವಿಭಾಗದಲ್ಲಿ ಪ್ರಥಮ ಬಹುಮಾನ ₹17 ಲಕ್ಷ, ದ್ವಿತೀಯ ₹9 ಲಕ್ಷ, ತೃತೀಯ ₹5 ಲಕ್ಷ, ಚತುರ್ಥ ₹2 ಲಕ್ಷ ಹಾಗೂ ‘ಬ’ ವರ್ಗದಲ್ಲಿ ಪ್ರಥಮ ಬಹುಮಾನ ₹9 ಲಕ್ಷ, ದ್ವಿತೀಯ ₹5 ಲಕ್ಷ, ತೃತೀಯ ₹3 ಲಕ್ಷ, ಚತುರ್ಥ ₹1 ಲಕ್ಷ ಬಹುಮಾನ, ಶೀಲ್ಡ್ ಹಾಗೂ ನಿಶಾನಿ ನೀಡಲಾಗುತ್ತಿದೆ ಎಂದು ಶರ್ಯತ್ತು ಕಮಿಟಿ ಸದಸ್ಯರಾದ ಸುನೀಲ ಸಪ್ತಸಾಗರ, ಉಮೇಶ ಸಾತ್ವಾರ ತಿಳಿಸಿದ್ದಾರೆ.</p><p>ಈ ಶರ್ಯತ್ತು ವೀಕ್ಷಿಸಲು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಅಂದಾಜು 5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಜನರಿಗೆ ಊಟ ಹಾಗೂ ಕುಡಿಯುವ ನೀರಿಗಾಗಿ 10 ಕಡೆ ವ್ವವಸ್ಥೆ ಮಾಡಲಾಗಿದೆ.</p><p>ಬಡಿಗೆ– ಬಾರಕೋಲು ಹಿಡಿಯದೇ ಎತ್ತು–ಚಕ್ಕಡಿ ಓಡಿಸಬೇಕು. ಒಂಬತ್ತುವರೆ ಕಿ.ಮೀ ದೂರ ಓಡಿ ಹೋಗಿ ಬರಬೇಕು ಎಂಬುದು ನಿಯಮ. ನೋಂದಣಿಗಾಗಿ ಚಿಕ್ಕೋಡಿಯ ಲಿಬರಲ್ ಸಹಕಾರ ಸಂಸ್ಥೆ ಕಟ್ಟಡದಲ್ಲಿರುವ ಶರ್ಯತ್ತು ಕಮೀಟಿಯ ಕಚೇರಿ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗೆ 9740877028, 8310383047 ಸಂಪರ್ಕಿಸುವಂತೆ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ (ಬೆಳಗಾವಿ ಜಿಲ್ಲೆ):</strong> ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅಭಿಮಾನಿಗಳ ಬಳಗದಿಂದ ತಾಲ್ಲೂಕಿನ ಮಲಿಕವಾಡದಲ್ಲಿ ಮಾರ್ಚ್ 5ರಂದು ಜೋಡೆತ್ತಿನ ಚಕ್ಕಡಿ ಓಡಿಸುವ ಶರ್ಯತ್ತು ಆಯೋಜಿಸಲಾಗಿದೆ. ಎರಡು ವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ₹51 ಲಕ್ಷ ಮೊತ್ತದ ವಿವಿಧ ಬಹುಮಾನ ಘೋಷಿಸಲಾಗಿದೆ.</p><p>‘ಅ’ ವರ್ಗದ ಶರ್ಯತ್ತಿನಲ್ಲಿ ಕರ್ನಾಟಕವೂ ಸೇರಿ ಎಲ್ಲ ರಾಜ್ಯಗಳ ರೈತರು ಪಾಲ್ಗೊಳ್ಳಬಹುದು. ‘ಬ’ ವಿಭಾಗದಲ್ಲಿ ಕರ್ನಾಟಕದವರು ಮಾತ್ರ ಸ್ಪರ್ಧಿಸಬಹುದು.</p><p>‘ಅ’ ವಿಭಾಗದಲ್ಲಿ ಪ್ರಥಮ ಬಹುಮಾನ ₹17 ಲಕ್ಷ, ದ್ವಿತೀಯ ₹9 ಲಕ್ಷ, ತೃತೀಯ ₹5 ಲಕ್ಷ, ಚತುರ್ಥ ₹2 ಲಕ್ಷ ಹಾಗೂ ‘ಬ’ ವರ್ಗದಲ್ಲಿ ಪ್ರಥಮ ಬಹುಮಾನ ₹9 ಲಕ್ಷ, ದ್ವಿತೀಯ ₹5 ಲಕ್ಷ, ತೃತೀಯ ₹3 ಲಕ್ಷ, ಚತುರ್ಥ ₹1 ಲಕ್ಷ ಬಹುಮಾನ, ಶೀಲ್ಡ್ ಹಾಗೂ ನಿಶಾನಿ ನೀಡಲಾಗುತ್ತಿದೆ ಎಂದು ಶರ್ಯತ್ತು ಕಮಿಟಿ ಸದಸ್ಯರಾದ ಸುನೀಲ ಸಪ್ತಸಾಗರ, ಉಮೇಶ ಸಾತ್ವಾರ ತಿಳಿಸಿದ್ದಾರೆ.</p><p>ಈ ಶರ್ಯತ್ತು ವೀಕ್ಷಿಸಲು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಅಂದಾಜು 5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಜನರಿಗೆ ಊಟ ಹಾಗೂ ಕುಡಿಯುವ ನೀರಿಗಾಗಿ 10 ಕಡೆ ವ್ವವಸ್ಥೆ ಮಾಡಲಾಗಿದೆ.</p><p>ಬಡಿಗೆ– ಬಾರಕೋಲು ಹಿಡಿಯದೇ ಎತ್ತು–ಚಕ್ಕಡಿ ಓಡಿಸಬೇಕು. ಒಂಬತ್ತುವರೆ ಕಿ.ಮೀ ದೂರ ಓಡಿ ಹೋಗಿ ಬರಬೇಕು ಎಂಬುದು ನಿಯಮ. ನೋಂದಣಿಗಾಗಿ ಚಿಕ್ಕೋಡಿಯ ಲಿಬರಲ್ ಸಹಕಾರ ಸಂಸ್ಥೆ ಕಟ್ಟಡದಲ್ಲಿರುವ ಶರ್ಯತ್ತು ಕಮೀಟಿಯ ಕಚೇರಿ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗೆ 9740877028, 8310383047 ಸಂಪರ್ಕಿಸುವಂತೆ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>