<p><strong>ರಾಮದುರ್ಗ:</strong> ಬಡವರಿಗೆ ತ್ವರಿತವಾಗಿ ಆಶ್ರಯ ಮನೆಗಳ ಹಂಚಿಕೆ ಮಾಡಲು ರಾಮದುರ್ಗ ಪುರಸಭೆ ಮುಂದಾಗಬೇಕು ಎಂದು ಆಗ್ರಹಿಸಿ ಜನಪರ ಟ್ರಸ್ಟ್ ಮತ್ತು ಜೈ ಭೀಮ ಯುವ ಜಾಗೃತ ಸೇನೆಯ ಪದಾಧಿಕಾರಿಗಳು ಪುರಸಭೆ ಮುಂಭಾಗದಲ್ಲಿ ಧರಣಿ ನಡೆಸಿ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಅವರಿಗೆ ಮನವಿ ಸಲ್ಲಿಸಿದರು.</p>.<p>ರಾಮದುರ್ಗದ ಪುರಸಭೆಯಿಂದ ಕಳೆದ 14 ವರ್ಷಗಳಿಂದಲೂ ಬಡವರಿಗೆ ಆಶ್ರಯ ಮನೆಗಳ ವಿತರಿಸಿಲ್ಲ. ಈ ಹಿಂದೆಯೇ ರಂಕಲಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 6 ಎಕರೆ ಜಮೀನು ಖರೀದಿಸಿದ್ದರೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಇದರಿಂದ ಬಡವರಿಗೆ ತೊಂದರೆಯಾಗಿದೆ. ಶೀಘ್ರ ನಿವೇಶನ ಹಂಚಿಕೆಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.</p>.<p>ಪಟ್ಟಣದಲ್ಲಿರುವ ದಲಿತ ಕುಟುಂಬಗಳಿಗೆ, ಕಾರ್ಮಿಕರಿಗೆ, ಬಡ ನೇಕಾರರಿಗೆ, ಅಂಗವಿಕಲರಿಗೆ ಮತ್ತು ಬಡತನ ರೇಖೆಗಿನ ಜನರಿಗೆ ಹಂಚಿಕೆ ಮಾಡಬೇಕು. ಪಕ್ಷಾತೀತವಾಗಿ ಮನೆಗಳ ಹಂಚಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.</p>.<p>ಮನೆಗಳನ್ನು ತ್ವರಿತವಾಗಿ ಹಂಚಿಕೆಗೆ ಪುರಸಭೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.</p>.<p>ಸುಭಾಸ ಘೋಡಕೆ, ಧಾರಾಸಿಂಗ ಪವಾರ, ವೀರೇಶ ಕಲ್ಯಾಣಿ, ಗೂಡುಸಾಬ ನಿಂಗಾಪೂರ, ವಿನಯ ಚಂದರಗಿ, ಬಾಲು ನಿರಂಜನ, ಅಭಿ ಮುನವಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮದುರ್ಗ:</strong> ಬಡವರಿಗೆ ತ್ವರಿತವಾಗಿ ಆಶ್ರಯ ಮನೆಗಳ ಹಂಚಿಕೆ ಮಾಡಲು ರಾಮದುರ್ಗ ಪುರಸಭೆ ಮುಂದಾಗಬೇಕು ಎಂದು ಆಗ್ರಹಿಸಿ ಜನಪರ ಟ್ರಸ್ಟ್ ಮತ್ತು ಜೈ ಭೀಮ ಯುವ ಜಾಗೃತ ಸೇನೆಯ ಪದಾಧಿಕಾರಿಗಳು ಪುರಸಭೆ ಮುಂಭಾಗದಲ್ಲಿ ಧರಣಿ ನಡೆಸಿ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಅವರಿಗೆ ಮನವಿ ಸಲ್ಲಿಸಿದರು.</p>.<p>ರಾಮದುರ್ಗದ ಪುರಸಭೆಯಿಂದ ಕಳೆದ 14 ವರ್ಷಗಳಿಂದಲೂ ಬಡವರಿಗೆ ಆಶ್ರಯ ಮನೆಗಳ ವಿತರಿಸಿಲ್ಲ. ಈ ಹಿಂದೆಯೇ ರಂಕಲಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 6 ಎಕರೆ ಜಮೀನು ಖರೀದಿಸಿದ್ದರೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಇದರಿಂದ ಬಡವರಿಗೆ ತೊಂದರೆಯಾಗಿದೆ. ಶೀಘ್ರ ನಿವೇಶನ ಹಂಚಿಕೆಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.</p>.<p>ಪಟ್ಟಣದಲ್ಲಿರುವ ದಲಿತ ಕುಟುಂಬಗಳಿಗೆ, ಕಾರ್ಮಿಕರಿಗೆ, ಬಡ ನೇಕಾರರಿಗೆ, ಅಂಗವಿಕಲರಿಗೆ ಮತ್ತು ಬಡತನ ರೇಖೆಗಿನ ಜನರಿಗೆ ಹಂಚಿಕೆ ಮಾಡಬೇಕು. ಪಕ್ಷಾತೀತವಾಗಿ ಮನೆಗಳ ಹಂಚಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.</p>.<p>ಮನೆಗಳನ್ನು ತ್ವರಿತವಾಗಿ ಹಂಚಿಕೆಗೆ ಪುರಸಭೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.</p>.<p>ಸುಭಾಸ ಘೋಡಕೆ, ಧಾರಾಸಿಂಗ ಪವಾರ, ವೀರೇಶ ಕಲ್ಯಾಣಿ, ಗೂಡುಸಾಬ ನಿಂಗಾಪೂರ, ವಿನಯ ಚಂದರಗಿ, ಬಾಲು ನಿರಂಜನ, ಅಭಿ ಮುನವಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>